Breaking: ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ
ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಶಾಂತಿನಗರದಲ್ಲಿರುವ ಕೊಳದ ಮಠದ ಶಾಂತವೀರ ಸ್ವಾಮೀಜಿಯವರು (80) ಶನಿವಾರ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
Koo App
ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೊಳದ ಮಠದಲ್ಲಿ ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದಂತ ಶಾತವೀರ ಸ್ವಾಮೀಜಿಯವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ, ಇದೀಗ ಶಾಂತವೀರ ಸ್ವಾಮೀಜಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
ಶಾಂತವೀರ ಸ್ವಾಮೀಜಿಯವರ ಅಣ್ಣನ ಮಗ ಹರ್ಷ ಈ ಬಗ್ಗೆ ಮಾತನಾಡಿ, ಶನಿವಾರ ಬೆಳಗ್ಗೆ ಬಂದು ಅವರ ಕೋಣೆಯಲ್ಲಿ ನೋಡಿದಾಗ ಅವರು ಎಚ್ಚರಿರಲಿಲ್ಲ. ಏನಾಗಿದೆ ಎಂಬುದು ತಿಳಿಯಲಿಲ್ಲ. ಅದಾದ ನಂತರ ಅವರು ಮೃತಪಟ್ಟಿರುವುದು ತಿಳಿಯಿತು ಎಂದು ಹೇಳಿದ್ದಾರೆ.
ಸ್ವಾಮೀಜಿಗಳ ಸಾವಿನಿಂದ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದು, ತಮ್ಮ ನೆಚ್ಚಿನ ಗುರುಗಳ ಅಂತಿಮ ದರ್ಶನ ಪಡೆದಿದ್ದಾರೆ.
ಶಾಂತವೇರಿ ಸ್ವಾಮಿಜಿಗಳ ಆಪ್ತ ಸಹಾಯಕ ವೆಂಕಟಪ್ಪ ಅವರು ಮಾತನಾಡಿದ್ದು, ಕಳೆದ 43 ವರ್ಷಗಳಿಂದ ನಾನು ನನ್ನ ಕುಟುಂಬ ಸ್ವಾಮಿಜಿಗಳ ಜೊತೆಗೆ ಇದ್ದೇವೆ. ನಮಗೆ ಆಸರೆ ನೀಡಿರುವ ದೇವರು ಅವರು. ಈಗ ಸ್ವಾಮಿಜಿಗಳು ಇಲ್ಲದೆ ನಾವು ಬಡವಾಗಿದ್ದೇವೆ. ಸಾವಿರಾರು ಜನರಿಗೆ ಸ್ವಾಮಿಜಿ ಅನ್ನದಾತರಾಗಿದ್ದರು. ಪ್ರತಿನಿತ್ಯ ನಾನು ಅಡುಗೆ ಮಾಡಿ ಬಡಿಸುತ್ತಿದ್ದೆ, ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದೆ. ನಿನ್ನೆ ರಾತ್ರಿಯೂ ತುಂಬಾ ಚೆನ್ನಾಗಿ ಮಾತಾಡಿದ್ದರು. ಇಂದು ಬೆಳಗ್ಗೆ ಬಾಗಿಲು ತೆರೆಯದೆ ಇರುವುದರಿಂದ ಸಂಶಯ ಬಂತು. ವೈದ್ಯರು ಹೃದಯಾಘಾತ ಆಗಿರುವ ಬಗ್ಗೆ ದೃಢಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಶನಿವಾರ
ಸಂಜೆ
ಅಂತ್ಯಕ್ರಿಯೆ:
ಸ್ವಾಮೀಜಿಗಳ
ಅಂತ್ಯಕ್ರಿಯೆಯನ್ನು
ಶನಿವಾರ
ಸಂಜೆ
7
ಗಂಟೆಗೆ
ಮಾಡಲಾಯಿತು.
ಮಠದ
ಆವರಣದಲ್ಲಿ
ಲಿಂಗಾಯತ
ಸಂಪ್ರದಾಯದಂತೆ
ಕ್ರಿಯಾ
ಸಮಾಧಿ
ಆಗಲಿದೆ
ಎಂದು
ಸ್ವಾಮಿಜಿ
ಅಣ್ಣನ
ಮಗ
ಹರ್ಷ
ಮಾಹಿತಿ
ನೀಡಿದ್ದಾರೆ.
Koo Appಕೊಳದ ಮಠದ ಶಾಂತವೀರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಆಘಾತವಾಯಿತು. ಸಾಮಾಜಿಕ, ಧಾರ್ಮಿಕ ಸುಧಾರಣೆಗಾಗಿ ಶ್ರಮಿಸಿದ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ, ಅನುಯಾಯಿಗಳು, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ. - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 30 Apr 2022