ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್ ಘಟಕದಿಂದ 'ಕೈ' ನಾಯಕರಿಗೆ ಪತ್ರ
ಬೆಂಗಳೂರು, ನವೆಂಬರ್ 19: ಸಕ್ಕರೆ ಕಾರ್ಖಾನೆ ಹೊಂದಿರುವ ಕಾಂಗ್ರೆಸ್ ನಾಯಕರು ಕಬ್ಬಿನ ಬಾಕಿ ಹಣವನ್ನು ಕೂಡಲೇ ರೈತರಿಗೆ ಪಾವತಿಸುವಂತೆ ಕಿಸಾನ್ ಘಟಕ ಕಾಂಗ್ರೆಸ್ ನಾಯಕರು ಹಾಗೂ ಕೆಪಿಸಿಸಿಗೆ ಪತ್ರ ಬರೆದಿದೆ.
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ರೈತರು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ, ಬೆಂಗಳೂರಿನಲ್ಲೂ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ. ಸ್ಥಳಕ್ಕೆ ಸಚಿವ ಬಂಡೆಪ್ಪ ಕಾಶೆಂಪೂರ್ ಆಗಮಿಸಿ ಕೆಲವು ಮನವಿ ಪತ್ರ ಸ್ವೀಕರಿಸಿದ್ದಾರೆ. ಇದರ ಹೊರತಾಗಿ ಕಿಸಾನ್ ಘಟಕ ಕಾರ್ಖಾನೆ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಪತ್ರ ರವಾನಿಸಿದೆ.
ಎಸ್ಆರ್ ಪಾಟೀಲ್, ಎಸ್ಎಸ್ ಮಲ್ಲಿಕಾರ್ಜುನ್, ಆನಂದ ನ್ಯಾಮಗೌಡ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ ಅವರಿಗೆ ಪತ್ರ ರವಾನಿಸಲಾಗಿದೆ.
ಬಾಕಿ ಮೊತ್ತ ಪಾವತಿಸಬೇಕಾದ ಕಾರ್ಖಾನೆಗಳು

-ನಿರಾಣಿ ಶುಗರ್ಸ್(ಮುರುಗೇಶ್ ನಿರಾಣಿ ಮಾಲೀಕತ್ವದ ಕಾರ್ಖಾನೆ) ಒಟ್ಟು ಬಾಕಿ-45 ಕೋಟಿ 98 ಲಕ್ಷ
-ಬೀಳಗಿ ಶುಗರ್ಸ್ ಸಕ್ಕರೆ ಕಾರ್ಖಾನೆ(ಎಸ್ಆರ್ ಪಾಟೀಲ್ ಮಾಲಿಕತ್ವ) ಒಟ್ಟು ಬಾಕಿ 9 ಕೋಟಿ 72 ಲಕ್ಷ
-ಇಂಡಿಯನ್ ಕೇನ್ ಪಾವರ್, ಉತ್ತೂರು(ಶಾಮನೂರು ಶಿವಶಂಕರಪ್ಪ ಒಡೆತನ) 18 ಕೋಟಿ 18 ಲಕ್ಷ
-ಗೋದಾವರಿ ಸಮೀರವಾಡಿ ಶುಗರ್ಸ್-35 ಕೋಟಿ 18 ಲಕ್ಷ,
-ಜೆಮ್ ಶುಗರ್ಸ್ , ಕುಂದರಗಿ 31 ಕೋಟಿ 21 ಲಕ್ಷ ಪಾವತಿಸಬೇಕಿದೆ.












Click it and Unblock the Notifications