ರಂಗಶಂಕರದಲ್ಲಿ ಕೆಂಪು ಕಣಗಿಲೆ ನಾಟಕ ನೋಡಿ ಆನಂದಿಸಿ
ಬೆಂಗಳೂರ, ಜೂನ್ 13: ನೊಬೆಲ್ ಪಾರಿತೋಷಕ ವಿಜೇತ ರವೀಂದ್ರ ನಾಥ ಠಾಗೋರರ ಕೃತಿ 'ರಕ್ತ ಕರಾಬಿ' ಕನ್ನಡಕ್ಕೆ ಬಂದಿದೆ. ಕೆವಿ ಸುಬ್ಬಣ್ಣ ಅವರು ರಚಿಸಿರುವ ಸುಧಾ ಆಡುಕಳ ಅವರ ರಂಗ ರೂಪಾಂತರ ಕನ್ನಡ ಅವತರಣಿಕೆಯನ್ನು ಮಂಡ್ಯ ರಮೇಶ್ ಅವರ ನಟನಾ ತಂಡ ಪ್ರಸ್ತುತ ಪಡಿಸುತ್ತಿದೆ.
ಜೂನ್ 16ರಂದು ಜೆಪಿ ನಗರದ ರಂಗಶಂಕರದಲ್ಲಿ 90 ನಿಮಿಷಗಳ ನಾಟಕ ನೋಡಿ ಅನಂದಿಸಬಹುದು. ಶ್ರೀಪಾದ್ ಭಟ್ ಅವರ ನಿರ್ದೇಶನದ ನಾಟಕದಲ್ಲಿ ದಿಶಾ ರಮೇಶ್, ಮೇಘ ಸಮೀರ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ಟಿಕೆಟ್ ಗಳು ಬುಕ್ ಮೈಶೋ.ಕಾಂ ಹಾಗೂ ರಂಗಶಂಕರದಲ್ಲಿ ಲಭ್ಯವಿದೆ. ನಾಟಕದ ಬಗ್ಗೆ ಅಂಕಣಗಾರ್ತಿ ಕುಸುಮಾ ಆಯರಹಳ್ಳಿ ಅವರು ಬರೆದಿದ್ದನ್ನು ಓದಿ ನಂತರ ನಾಟಕ ನೋಡಿ ಆನಂದಿಸಿ...

ಇವಳು ನಂದಿನಿ... 'ಕೆಂಪು ಕಣಗಿಲೆ' ನಾಟಕ ಮುಖ್ಯ ಪಾತ್ರಧಾರಿ. ಚಿನ್ನದ ಗಣಿಗಾರಿಕೆ ಮಾಡುತ್ತಾ ಚಿನ್ನದೊಳಗೆ ಬಂಧಿಯಾದ ರಾಜ. ಎಂಥದೋ ಆಸೆ ಹೊತ್ತು ಯಕ್ಷನಗರಿಗೆ ಬಂದು ಗೇಯುತ್ತಾ ತೇಯುತ್ತಾ ಹೋಗುವ ಬಡಜನ. ಇವರ ನಡುವಿನ ಹಾಡಾಗಿ, ತಂಗಾಳಿಯಾಗಿ, ಬಂಡೆಗಳನಡುವೆ ಬೆರಳಾಡಿಸಿಯೇ ಹೂವ ಚಿಗುರಿಸುವವಳಾಗಿ ಓಡಾಡುವವಳೇ ನಂದಿನಿ. ಈ ನಾಟಕ ಎಂದೋ ರವೀಂದ್ರರು ಬರೆದದ್ದು. ಆದರೆ ಇಂದಿಗೆ ಅದು ಎಷ್ಟು ಪ್ರಸ್ತುತ!! ಆ ರಾಜ ಗವರ್ನರ್ ಪುರಾಣಿಕ, ಪ್ರೊಫೆಸರ್ ಎಲ್ಲರೂ ಇಂದಿನ ಕಾರ್ಪೋರೆಟ್ ಕಂಪನಿ, ರಾಜಕಾರಣ, ಯೂನಿವರ್ಸಿಟಿಗಳ ಸ್ಥಿತಿ, ಧರ್ಮದ ಹೆಸರಿನ ಮೋಸ ಎಲ್ಲವನ್ನೂ ಪ್ರತಿನಿಧಿಸುತ್ತವೆ. ಯಕ್ಷನಗರಿ ಸ್ಮಾರ್ಟ್ ಮಹಾ ನಗರಗಳೇ ಆಗಿದೆ. ಸರಳತೆ ಮತ್ತು ಐಶಾರಾಮಿಯ ನಡುವಿನ ಜಗ್ಗಾಟ ಅದು. ಅಲ್ಲಿ ಸತ್ಯ ಹೇಳಲು ಹೊರಟವನನ್ನು ಈ ಎಲ್ಲವೂ ಒಟ್ಟು ಸೇರಿ ಬಂಧಿಸುವ ದೃಶ್ಯ ಅದ್ಭುತ ರೂಪಕದಂತಿದೆ.
ಭೂತ ಭವಿಷ್ಯಗಳು ವರ್ತಮಾನವನ್ನು ಅಂಕೆಯಲ್ಲಿಡಲು ಬಳಸುವ ಗುರಾಣಿಗಳು ಎನ್ನುತ್ತಾಳೆ ನಂದಿನಿ. ಹಗ್ಗ ಹರಿದ ನಾವೆ ಗುರಿ ನಿರ್ಧರಿಸಬಲ್ಲುದೇ? ಅಂತ ಕೇಳುತ್ತಾಳೆ. ಕೃತಕ ಸೆರೆಯಿಂದ ಬಿಡಿಸಿಕೊಂಡು ಸಹಜತೆಯ ಕಡೆ ಬಾ ಅಂತ ಕರೆಯುತ್ತಾಳೆ. ನಂದಿನಿ ಅಂದರೆ ಇವತ್ತು ಅಲ್ಲಿ ಹೋಗಲಾರದೇ ಇಲ್ಲಿರಲಾದೇ ಒದ್ದಾಡುತ್ತಿರುವ ನಮ್ಮೆಲ್ಲರೆದೆಗಳ ಹಾಡು..ನಮ್ಮೊಳಗಿನ ನಿಜದ ಎಚ್ಚರ!!
ನಂದಿನಿಯಾಗಿ ಏಕಕಾಲಕ್ಕೆ ಹಾಡುತ್ತಾ, ಕುಣಿಯುತ್ತಾ ಅಷ್ಟುದ್ದ ಮಾತುಗಳನೂ ಒಪ್ಪಿಸುತ್ತಾ, ರಂಗವನೆಲ್ಲ ಪುಟ್ಟದೇವತೆಯಂತೆ ಆವರಿಸಿಕೊಂಡು, ಮನೋಜ್ಞವಾಗಿ ಅಭಿನಯಿಸಿದ Disha Rameshಮರಿ ಜಯಶ್ರೀಯಂತೆ ಕಂಡಳು. Megha Sameera ನ ಧ್ವನಿಯ ಏರಿಳಿತಕೆ ಸೋತೆ. ಬಿಶು, ಕಿಶೋರನ ಪಾತ್ರಗಳೂ ಚೆಂದ.Mandya Ramesh Satish Baikady Ramu Natanaನಿಮ್ಮ ರಂಗಪ್ರೀತಿಗೆ ಋಣಿಗಳು. ಪ್ರತಿಭಾವಂತ ನಿರ್ದೇಶಕ Shripad Bhat ಅವರಿಗೆ ಅಭಿನಂದನೆಗಳು. ಅವರ ಈ ಪ್ರಯೋಗ ಜೂನ್ 16ರಂದು ರಂಗಶಂಕರದಲ್ಲಿದೆ. ನಂದಿನಿಯ ಎಚ್ಚರದ ಹಾಡು ಕಡೆಗೆ ಎಚ್ಚರದ ಗಂಟೆಯಂತೆ ಕೇಳುವುದನ್ನು ನೀವೂ ಅನುಭವಿಸಿ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications