Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ವಿಮಾನ ನಿಲ್ದಾಣ ಕೊಡುಗೆಯಾಗಿ ನೀಡಿದ್ದ ವಾಜಪೇಯಿ

Recommended Video

      Atal Bihari Vajpayee : ಬೆಂಗಳೂರಿಗೆ ವಾಜಪೇಯಿ ಕೊಟ್ಟಿದ್ದಾರೆ ದೊಡ್ಡ ಕೊಡುಗೆ..!

      ಬೆಂಗಳೂರು, ಆಗಸ್ಟ್ 17: ಆಗಿನ್ನೂ ಬೆಂಗಳೂರು ಐಟಿ ಸಿಟಿ ಎಂದು ಕರೆಸಿಕೊಳ್ಳಲು ಆರಂಭಿಸಿತ್ತು, ಬೆಂಗಳೂರು ಅಷ್ಟು ಮುಂದುವರೆದಿರಲಿಲ್ಲ, ಅಂದು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ದಿನಗಳು ಆ ಕಾಲದಲ್ಲಿ ಡಿಜಿಟಲ್‌ ಲಾಂಚಿಂಗ್‌ ಮೂಲಕ ಏರ್‌ಪೋರ್ಟ್‌ನ್ನು ಕೊಡುಗೆಯಾಗಿ ನೀಡಿದ್ದರು.

      ಆಗ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು ಆ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಅವರು ಹಸಿರು ನಿಶಾನೆ ತೋರಿದ್ದರು. ಕೆಆರ್‌ಪುರಂ ತೂಗು ಸೇತುವೆ ಹಾಗೂ ವೈಟ್‌ಫೀಲ್ಡ್‌ನಲ್ಲಿ ಐಟಿಪಪಿಎಲ್‌ ಆರಂಭಕ್ಕೂ ಅವಕಾಶ ಕಲ್ಪಿಸಿದ್ದರು.

      ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇನ್‌ಫೋಸಿದ್‌ ಮುಖ್ಯಸ್ಥ ನಾರಾಯಣಮೂರ್ತಿ ಅವರ ಜತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೂಮಿ ಪೂಜೆ ನೆರವೇರಿಸಿದ್ದ ವಾಜಪೇಯಿ, ಸರ್ಕಾರ ವ್ಯವಸ್ಥೆಯಲ್ಲಿ ವಿಳಂಬ ನೀತಿಗೆ ಬೇಸರ ವ್ಯಕ್ತಪಡಿಸಿದ್ದರು. 2003ರಲ್ಲಿ ಕೆಆರ್‌ಪುರಂ ತೂಗು ಸೇತುವೆಯನ್ನು ವಾಜಪೇಯಿ ಅವರು ಉದ್ಘಾಟಿಸಿದ್ದರು.

      Kempegowda international airport is the initiative of Vajpayee

      ಅಷ್ಟೇ ಅಲ್ಲದೆ ಈ ಚತುಷ್ಪಥ ರಸ್ತೆ ಕೂಡ ವಾಜಪೇಯಿ ಅವರ ಕನಸಿನ ಕೂಸಾಗಿತ್ತು, ಬದಲಾಗುತ್ತಿರುವ ಭಾರತ ವ್ಯಾಪಾರ, ವಹಿವಾಟು ಸುಗಮಗೊಳ್ಳಲಿ, ಸರಕು ಸಾಗಣೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ದ್ವಿಪಥಗಳಾಗಿದ್ದ ರಾಷ್ಟ್ರೀಯ ಹೆದ್ದಾರಿಗಳನ್ನು 4 ಪಥಗಳನ್ನಾಗಿ ಬದಲಿಸುವ ಕನಸಿನ ಯೋಜನೆಗೆ ಕೈಹಾಕಿದ್ದೇ ಅಟಲ್‌ ಬಿಹಾರಿ ವಾಜಪೇಯಿ ಅವರು. ಒಟ್ಟು 5846 ಕಿ.ಮೀ ಉದ್ದ ರಸ್ತೆಗಳನ್ನು ವಾಜಪೇಯಿ ಅವಧಿಯಲ್ಲಿ ಚತುಷ್ಪಥಗೊಳಿಸಲಾಯಿತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+