5 Gas Cylinders Free HD Kumaraswamy: ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ 5 ಸಿಲೆಂಡರ್ ಫ್ರೀ: ಆಶ್ವಾಸನೆ
ಬೆಂಗಳೂರು, ಏಪ್ರಿಲ್ 16: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲು ಹಾತೊರೆಯುತ್ತಿರುವ ಜೆಡಿಎಸ್ ಪಕ್ಷ ಶನಿವಾರವಷ್ಟೇ ಮತದಾರರಿಗೆ ಸೌಲಭ್ಯಗಳನ್ನು ಒದಗಿಸುವ ಮತ್ತೊಂದಿಷ್ಟು ಪ್ರಣಾಳಿಕೆಗಳನ್ನು ಹೊರಡಿಸಿದೆ.
ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಕ್ಷ 12 ಅಂಶಗಳ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಲವು ಯೋಜನೆ ತರಲಾಗುವುದು, ಬಡವರು ಸೇರಿದಂತೆ ರಾಜ್ಯ ಜನರಿಗೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯವಾಗಿ ವಾರ್ಷಿಕವಾಗಿ ಐದು ಸಿಲೆಂಡರ್ ಅನ್ನು ನೀಡಲಾಗುವುದು, ವಿಧವಾ ಪಿಂಚಣಿಯನ್ನು 900 ರೂ.ನಿಂದ 2,500 ರೂ.ಗೆ ಮತ್ತು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ ಪಿಂಚಣೆ ವ್ಯವಸ್ಥೆ ರೂಪಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಕ್ಷವು ಮಹಿಳಾ ಸಬಲೀಕರಣ ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಹೇಳಿಕೊಳ್ಳಲಾಗಿದೆ. ರೈತರಿಗೆ ಇದರಲ್ಲಿ ಆದ್ಯತೆ ನಿಡಲಾಗಿದೆ. ಪ್ರಾಣಾಳಿಕೆಯಲ್ಲಿ ಪಕ್ಷವು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಮೈಸೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಅಲ್ಲೇ ಗರ್ಭಿಣಿಯರಿಗೆ ಆರು ತಿಂಗಳಿಗೆ 6,000 ರೂಪಾಯಿನ್ನು ಭತ್ಯೆ ನೀಡುವುದಾಗಿ ಜೆಡಿಎಸ್ ಘೋಷಣೆ ಮಾಡಿದೆ.
ರೈತರಿಗೆ ರೂ.10,000 ಸಹಾಯಧನ
ಪಕ್ಷ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಪ್ರತಿ 10,000 ರೂಪಾಯಿ ಸಹಾಯಧನ ನೀಡಲಾಗುವುದು. ಇನ್ನೂ ಕೃಷಿ ಕಾರ್ಮಿಕರಿಗೆ 2,000 ರೂಪಾಯಿ ಮಾಸಿಕ ಭತ್ಯೆ ಒದಗಿಸಲಾಗುವುದು. ಕೃಷಿ ಕೈಗೊಂಡಿರುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 2 ಲಕ್ಷ ರೂಪಾಯಿ ಹಾಗೂ ವಿವಿಧ ನಾಗರಿಕ ಸೇವೆಗಳು ಮತ್ತು ಕನ್ನಡ ರಕ್ಷಣಾ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ಜೆಡಿಎಸ್ ಭರವಸೆ ನೀಡಿದೆ.

ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಪ್ರಾಣಾಂತಿಕ ಭರವಸೆ ಇದೆ. ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ 60,000 ವಿದ್ಯಾರ್ಥಿನಿಯರಿಗೆ ಉಚಿತವಾಗಿ 6.8 ಲಕ್ಷ ಬೈಸಿಕಲ್ ಮತ್ತು ಇವಿ ಮೊಪೆಡ್ಗಳನ್ನು ವಿತರಣೆ ಪಕ್ಷ ನಿರ್ಧರಿಸಿದೆ.
ಹಾಸನ ಟಿಕೆಟ್ ಸಮಸ್ಯೆ ಬಗೆಹರಿದಿದೆ
ರಾಷ್ಟ್ರೀಯ ಪಕ್ಷಗಳು ಎನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಶಮನಗೊಳಿಸುವಲ್ಲಿ ನಿರತವಾಗಿರುವ ಜೆಡಿಎಸ್ ರಾಜ್ಯದಲ್ಲಿ ಹೊಸ ಹುರುಪಿನೊಂದಿಗೆ ಮುನ್ನಡೆಯುತ್ತಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಜೆಡಿಎಸ್ನ ಕೌಟುಂಬಿಕ ಕಲಹ ಬಗೆಹರಿದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಚುನಾವಣೆ ಸಮೀಪಿಸುತ್ತಿದೆ. ಟಿಕೆಟ್ ಬಹುತೇಕ ಎಲ್ಲವು ಅಂತಿಮಗೊಂಡಿದ್ದು, ಹಾಸನದಲ್ಲಿ ಪಕ್ಷದ ಮುಖಂಡ ಸ್ವರೂಪ ಪ್ರಕಾಶ್ ಅವರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಲಾಗಿದೆ. ಎರಡು ಪಟ್ಟಿಗಳಲ್ಲಿ 142 ಅಭ್ಯರ್ಥಿಗಳ ಹೆಸರನ್ನು ಪಕ್ಷ ಘೋಷಿಸಿದೆ. ಪಕ್ಷವು 82 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಾಕಿ ಇದೆ ಎಂದರು.
ಬಿಡುಗಡೆಗೊಂಡ 12 ಅಂಶಗಳ ಪಟ್ಟಿ
1. ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ
2.ರೈತ ಚೈತನ್ಯ
3.ಹಿರಿಯ ನಾಗರಿಕರಿಗೆ ಸನ್ಮಾನ
4.ವಿಕಲಚೇತನರಿಗೆ ಆಸರೆ
5.ಆರಕ್ಷಕರಿಗೆ ಅಭಯ
6. ಕನ್ನಡಕ್ಕೆ ಅಗ್ರ ಮನ್ನಣೆ
7. ಶಿಕ್ಷಣವೇ ಆಧುನಿಕ ಶಕ್ತಿ
8. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ & ಪ್ರಗತಿ
9. ಎಸ್ಸಿ, ಎಸ್ಟಿ ಅಭಿವೃದ್ಧಿ ಯೋಜನೆ
10. ವೃತ್ತಿ ನಿರತ ವಕೀಲರ ಅಭ್ಯುದಯ
12. ಯುವಜನ ಸಬಲೀಕರಣ












Click it and Unblock the Notifications