ಬೆಂಗಳೂರಿನ 'ಟ್ವಿಟ್ಟರ್' ಉಗ್ರನ ರಹಸ್ಯ ಬಯಲು!
ಬೆಂಗಳೂರು, ಡಿ. 12 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆಯನ್ನು ಬೆಂಬಲಿಸಿ ಪುಂಖಾನುಪುಂಖವಾಗಿ ಆತಂಕಕಾರಿ ಟ್ವೀಟ್ ಮಾಡುತ್ತ, ಅಮೆರಿಕದ ನಾಗರಿಕರ ರುಂಡ ಕತ್ತರಿಸಿದ ವಿಡಿಯೋಗಳನ್ನು ಟ್ವಿಟ್ಟರಲ್ಲಿ ನಿರಂತರವಾಗಿ ಬಿತ್ತರಿಸಿದ @shamiwitness ಎಂಬ ಟ್ವಿಟ್ಟರ್ ಖಾತೆ ಬಳಸುತ್ತಿದ್ದ ವ್ಯಕ್ತಿಯ ರಹಸ್ಯ ಬಯಲಾಗಿದೆ.
ಆತನ ಹೆಸರು ಮೆಹದಿ ಮರಸೂರ್ ಎಂಬು ಬಹಿರಂಗವಾಗಿದ್ದು, ಆತ ಟ್ವೀಟ್ ಮಾಡುತ್ತಿದ್ದುದು ಎಲ್ಲಿಂದ ಗೊತ್ತೆ? ಬೆಂಗಳೂರಿನಿಂದ! ಭಾರತದಲ್ಲಿದ್ದುಕೊಂಡೇ ಭಾರತದ ವಿರುದ್ಧ ಉಗ್ರ ಸಂದೇಶಗಳನ್ನು ಬಿತ್ತರಿಸುತ್ತಿದ್ದುದು ಬಹಿರಂಗವಾಗುತ್ತಿದ್ದಂತೆ, 18 ಸಾವಿರದಷ್ಟು ಫಾಲೋವರ್ಸ್ ಇದ್ದ ಆ ಟ್ವಿಟ್ಟರ್ ಅಕೌಂಟನ್ನು ಬಂದ್ ಮಾಡಲಾಗಿತ್ತು. ಆದರೆ, ಅದೇ ಹ್ಯಾಂಡಲ್ ನಿಂದ ಮತ್ತೆ ಅದು ತೆರೆದುಕೊಂಡಿದೆ. [ಪೊಲೀಸರ ಕೈಗೆ ಮೆಹದಿ ಸಿಕ್ಕಿದ್ದು ಹೇಗೆ?]
ಮೆಹದಿ ಎಂದು ಗುರುತಿಸಿಕೊಂಡಿರುವ ಆ ಯುವಕ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಜಾಗತಿಕವಾಗಿ ತನ್ನ ಕಬಂಧ ಬಾಹುಗಳನ್ನು ಪಸರಿಸುತ್ತಿರುವ ಐಎಸ್ಐಎಸ್ ಸಂಘಟನೆ ಬೆಂಗಳೂರನ್ನೂ ಮುಟ್ಟಿರುವುದು ಇದರಿಂದ ಸಾಬೀತಾಗಿದೆ. ಈ ಉಗ್ರ ಸಂಘಟನೆಯ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಸಾಮಾಜಿಕ ತಾಣಗಳಲ್ಲಿ ಅಸ್ತಿತ್ವವನ್ನು ಪಸರಿಸುವ ಕೆಲಸ ವಹಿಸಲಾಗಿದೆ. [ಹಿಂದಿರುಗಿದ ಉಗ್ರ ಬಾಯ್ಬಿಟ್ಟ ಸ್ಫೋಟಕ ಮಾಹಿತಿ]

ಯಾರು ಈ ಮೆಹದಿ?
ಟ್ವಿಟ್ಟರಿಗಾಗಿ ಹುಟ್ಟಿಸಲಾಗಿರುವ ಹೆಸರು ಇದು. 2013ರಿಂದ ಟ್ವಿಟ್ಟರಲ್ಲಿ ಮತ್ತು Shami Witness ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದಾನೆ. ವೈವಿಧ್ಯಮಯ ವಿಷಯಗಳ ಬಗ್ಗೆ ಬ್ಲಾಗಲ್ಲಿ ಬರೆಯುವ ಮೆಹದಿ ಭಾರೀ ಇಂಟರೆಸ್ಟಿಂಗ್ ಮನುಷ್ಯ. ಸಿರಿಯಾದ ಬಿಲಾದ್-ಅಲ್-ಶಾಮ್, ಜಿಹಾದಿ, ಆರ್ಥಿಕ ಬಿಕ್ಕಟ್ಟು, ತಂತ್ರಜ್ಞಾನ, ಇತಿಹಾಸಗಳ ಬಗ್ಗೆ ಬರೆದಿದ್ದಾನೆ. ತನಿಖೆಯ ದೃಷ್ಟಿಯಿಂದ ಆತನ ಇರುವನ್ನು ಗುಟ್ಟಾಗಿಡಲಾಗಿದೆ. ಆದರೆ, ಬೆಂಗಳೂರಿನ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಎಂಬುದು ಬಹಿರಂಗವಾಗಿದೆ.
ಐಎಸ್ಐಎಸ್ ಸೇರಿದ್ದರೂ ಬೆಂಗಳೂರಲ್ಲೇ ಉಳಿದ
ಉಗ್ರ ಸಂಘಟನೆಯ ಚಿಂತನೆಯಿಂದ ಪ್ರಭಾವಿತನಾಗಿದ್ದ ಮೆಹದಿ ಸಂಘಟನೆ ಸೇರಿದ್ದ. ಆದರೆ, ಕುಟುಂಬದ ಏಕಮಾತ್ರ ಗಳಿಕೆದಾರನಾದ್ದರಿಂದ ಬೆಂಗಳೂರಿನಲ್ಲಿಯೇ ಉಳಿದ. ಐಎಸ್ಐಎಸ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಚಟುವಟಿಕೆ ಆರಂಭಿಸಿದ್ದ. 2013ರ ಮೇನಿಂದ ಆರಂಭಿಸಿದ್ದ ಟ್ವಿಟ್ಟರ್ ಖಾತೆ ಸಾಕಷ್ಟು ಯಶಸ್ಸೂ ಗಳಿಸಿತ್ತು. ಪ್ರತಿ ತಿಂಗಳು 25 ಲಕ್ಷ ಹಿಟ್ಸ್ ಸಿಗುತ್ತಿತ್ತು.
"ಇಸ್ಲಾಮಿಕ್ ಸ್ಟೇಟನ್ನು ಅಲ್ಲಾಹು ರಕ್ಷಿಸಲು, ಬಲಿಷ್ಠಗೊಳಿಸಲಿ ಮತ್ತು ವಿಸ್ತರಿಸಲಿ. ಇಸ್ಲಾಮಿಕ್ ಸ್ಟೇಟ್ ವಿರುದ್ಧ ಯುದ್ಧ ಸಾರಿರುವವರನ್ನು ಅಲ್ಲಾಹು ಧ್ವಂಸಗೊಳಿಸಲಿ" ಎಂದು ಟ್ವಟ್ಟರ್ ಖಾತೆ ಮುಚ್ಚುವ ಮುನ್ನ ಬರೆದಿದ್ದ. ದೇಶದ ವಿರುದ್ಧವೇ ನಡೆಸುತ್ತಿರುವ ಹುನ್ನಾರ ಬಯಲಾಗುತ್ತಿದ್ದಂತೆ ಟ್ವಿಟ್ಟರ್ ಖಾತೆ ಮುಚ್ಚಿಕೊಂಡಿದೆ.
ಆತನ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ವಾಷಿಂಗ್ಟನ್ ಮೂಲದ ಕಂಪನಿಯಲ್ಲಿ ಸೀನಿಯರ್ ಪ್ರೋಗ್ರಾಂ ಅಸೋಸಿಯೇಟ್ ಆಗಿರುವ ಮೈಕಲ್ ಕುಗೆಲ್ಮನ್ ಅವರು ಒನ್ಇಂಡಿಯಾಗೆ ತಿಳಿಸಿದ ಪ್ರಕಾರ, ಆತ ಬೆಂಗಳೂರಿನ ಕಂಪನಿಯಲ್ಲಿ ಉನ್ನತ ಹುದ್ದಿಯೆನ್ನು ಅಲಂಕರಿಸಿದ್ದಾನೆ. ಆದರೂ ರಹಸ್ಯವಾಗಿ ಇಸ್ಲಾಮಿಕ್ ಸ್ಟೇಟ್ ಪರ ಕೆಲಸ ಮಾಡುತ್ತಿದ್ದಾನೆ. ಆತ ಭಾರತದ ನಿವಾಸಿ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನವೂ ಇತ್ತು. ಲಕ್ಷಾಂತರ ಪ್ರತಿಭಾವಂತ ಟೆಕ್ಕಿಗಳಿಗೆ ಜಾಗ ನೀಡಿರುವ ಬೆಂಗಳೂರಿನ ಯುವಕರನ್ನೇ ಐಎಸ್ಐಎಸ್ ಸೆಳೆಯುತ್ತಿದೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications