ರಾಯರ ಸೇವೆಯಲ್ಲಿ ಸರಳತೆಯ ಸಾಕಾರ 'ಮೂರ್ತಿ'
ಬೆಂಗಳೂರು: ಆಗಸ್ಟ್, 21: 'ರಾಯರ ಸೇವೆಯೇ ನನಗೆ ಪೂಜೆ, ಅದರಲ್ಲಿಯೇ ನೆಮ್ಮದಿ ಕಂಡಿದ್ದೇನೆ, ಕಾಣುತ್ತೇನೆ' ಎಂದು ಹೇಳುತ್ತ ಭಕ್ತರು ನೀಡಿದ್ದ ಕಾಣಿಕೆಗಳನ್ನು ಬೇರೆ ಬೇರೆ ಮಾಡುತ್ತ ಕುಳಿತಿದ್ದವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ.
ಹೌದು.. ಬೆಂಗಳೂರಿನ ಜಯನಗರದ ರಾಯರ ಮಠದಲ್ಲಿ ನಡೆಯುತ್ತಿದ್ದ ಆರಾಧನೆಯಲ್ಲಿ ಕಳೆದ ಮೂರು ದಿನಗಳಿಂದ ಈ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ತಂದು ಅರ್ಪಿಸಿದ ತರಕಾರಿ ಮತ್ತಿತರ ಕಾಣಿಕೆಗಳನ್ನು ಬೇರೆ ಮಾಡುವುದರಲ್ಲಿ ಸುಧಾ ಮೂರ್ತಿ ನಿರತರಾಗಿದ್ದರು.['ಇನ್ಪೋಸಿಸ್ ಫೌಂಡೇಶನ್ ನಿಂದ ಶಾಸ್ತ್ರೀಯ ಕಲೆಗಳ ಅಭಿವೃದ್ಧಿ']
ಮೂರು ದಿನಗಳ ಕಾಲ ನಿರಂತರವಾಗಿ ಮಠದಲ್ಲಿ ನಿರಂತರ ಸೇವೆ ಮಾಡಿದ ಸುಧಾ ಮೂರ್ತಿ ರಾಯರ ಕೃಪೆಗೆ ಪಾತ್ರರಾದರು.

ತರಕಾರಿ ಹೆಚ್ಚಿದರು
ಆರಾಧನಾ ಮಹೋತ್ಸವದಲ್ಲಿ ಭಕ್ತರಿಗೆ ಊಟ ಬಡಿಸೋದು , ಅನ್ನ ಸಂತರ್ಪಣೆ ಗಾಗಿ ತರಾಕಾರಿ ತೊಳೆದು ಹೆಚ್ಚವುದು, ಪಂಚಾಮೃತಕ್ಕೆ ಹಣ್ಣುಗಳ ತೊಳೆಯುವುದು ಹೂವು ಕಟ್ಟುವುದು ಸೇರಿದಂತೆ ಆರಾಧನಾ ಮಹೋತ್ಸವದ ಅಷ್ಟೂ ಕೆಲಸ ಮಾಡಿದರು.

ಇಲ್ಲಿಯೂ ಮ್ಯಾನೇಜರ್
ಮಠದ ಅಧಿಕಾರಿಗಳು ಹೇಳುವಂತೆ ಮೂರ್ತಿ ಸ್ಟೋರ್ ಮ್ಯಾನೇಜರ್ ರೀತಿ ಮೂರು ದಿನ ಕೆಲಸ ಮಾಡಿದರು. ಚಿಕ್ಕ ಪುಟ್ಟ ಗೊಂದಲಗಳನ್ನು ಅವರು ನಿಭಾಯಿಸಿದ ರೀತಿ ಪ್ರತಿಯೊಬ್ಬರಿಗೂ ಮಾರ್ಗದರ್ಶಕ

ಮುಂಜಾನೆ 5.30 ಕ್ಕೆ ಆಗಮನ
ಪ್ರತಿದಿನ ಮುಂಜಾನೆ 5.30 ಕ್ಕೆ ಆಗಮಿಸುತ್ತಿದ್ದ ಮೂರ್ತಿ ತರಕಾರಿ ಹೆಚ್ಚುವುದರಲ್ಲಿ ನಿರತರಾಗುತ್ತಿದ್ದರು. ಮಧ್ಯೆ ಮಧ್ಯೆ ಸ್ಟೋರ್ ಗೆ ಭೇಟಿ ನೀಡಿ ಬರುತ್ತಿದ್ದರು.

ಪೂಜೆಗೆ ಬಾರದ ಮೂರ್ತಿ
ಮೂರು ದಿನಗಳ ಕಾಲ ಮಠದಲ್ಲಿದ್ದರೂ ಮೂರ್ತಿ ಪೂಜೆಗೆ ಆಗಮಿಸಲಿಲ್ಲ. ನನಗೆ ಸೇವೆಯೇ ಪೂಜೆ ಎಂದು ಹೇಳಿ ಕೆಲಸದಲ್ಲಿ ಮಗ್ನರಾಗಿಯೇ ಇದ್ದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications