Bengaluru Airport: ಇಂಡಿಗೋ ಎಂಆರ್ಓ ಸ್ಥಾಪನೆಗೆ ಅಡಿಗಲ್ಲು: ಬೆಂಗಳೂರಿಗೆ ಮತ್ತೊಂದು ಸ್ಥಾನ..
ಬೆಂಗಳೂರು, ಆಗಸ್ಟ್ 07: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಬೆಂಗಳೂರು ಇಂದು ಭಾರತದ ವಿಮಾನಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಕಟ್ಟಡದ ಸ್ಥಾಪನೆ ಬಗ್ಗೆ ಇಂಡಿಯೋಗ ತಿಳಿಸಿತ್ತು. ಈ ವಿಷಯವನ್ನು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಪ್ರಸ್ತಾಪಿಸಿ ಯೋಜನೆ ಕುರಿತು ತಿಳಿಸಿದ್ದರು. ಇದೀಗ ಯೋಜನೆಯ ಅನುಷ್ಠಾನದ ಪ್ರಾಥಮಿಕ ಹಂತ ಆರಂಭವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋದಿಂದ ಹೊಸ ಹೆಜ್ಜೆ ಇಟ್ಟಿದೆ. ಇದನ್ನು ಬೆಂಗಳೂರು ಮತ್ತು ಭಾರತದ ವಿಮಾನಯಾನ ಕ್ಷೇತ್ರದ ದೊಡ್ಡ ಬೆಳವಣಿಗೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಆವರಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಕಟ್ಟಡದ ಸ್ಥಾಪನೆಗಾಗಿ ಇಂಡಿಗೋ ಶಂಕುಸ್ಥಾಪನಾ ಸಮಾರಂಭ ನಡೆಯಿತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (BIAL) ಹರಿ ಮರಾರ್ (ಎಂಡಿ ಮತ್ತು ಸಿಇಒ-ಬಿಐಎಎಲ್) ಮತ್ತು ಸತ್ಯಕಿ ರಘುನಾಥ್ (ಸಿಒಒ-ಬಿಐಎಎಲ್), ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಮತ್ತು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸಾಕ್ಷಿಯಾದರು. ಏರ್ಪೋರ್ಟ್ ನಿಲ್ದಾಣದ ಅಭಿವೃದ್ಧಿಯಲ್ಲಿ ಜೊತೆಯಾಗೋಣ ಎಂದು ಇಂಡಿಗೋ ಕರೆ ನೀಡಿದೆ.
ಹೂಡಿಕೆ ಎಷ್ಟು? ಏನಲ್ಲ ಪ್ರಯೋಜನಗಳು?
ಕರ್ನಾಟಕಕ್ಕೆ ವ್ಯಾಪಕ ಹೂಡಿಕೆಗಳೂ ಹರಿದು ಬಂದಿರುವ ಪೈಕಿ ಇಂಡಿಗೋ ಕಂಪನಿಯಿಂದ ಈ ಎಂಆರ್ಒ ಸ್ಥಾಪನೆಗೆ ಹರಿದು ಬಂದ ಬಂಡವಾಳವೂ ಒಂದಾಗಿದೆ. ವಿಮಾನಿಗಳಿಗೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ ಮಾಡುವ ಈ ಘಟಕ ಸ್ಥಾಪನೆಗೆ ಕಂಪನಿಯು 1100 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಮೂಲಕ ಕರ್ನಾಟಕದ ರಾಜಧಾನಿಯು ಏಷ್ಯಾ ಖಂಡದ ಎಂಆರ್ಒ ರಾಜಧಾನಿಯಾಗಿ ಮಾಡಬೇಕೆನ್ನುವ ಉದ್ದೇಶಕ್ಕೆ ನೀರೆರೆದಂತಾಗಿದೆ.
ಈ ಘಟಕದಿಂದ ಕೇವಲ ವಿಮಾನಗಳಿಗೆ ಮಾತ್ರವಲ್ಲದೇ ಅನೇಕ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಜಾಗತಿಕವಾಗಿ ವಿಮಾನ, ವಿಮಾನಯಾನ ವಲಯದ ಸ್ಪರ್ಧಾತ್ಮಕ ವಿಮಾನ ಕ್ಷೇತ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಕರ್ನಾಟಕ ಹಾಗೂ ಬೆಂಗಳೂರನ್ನು ಗುರುತಿಸುವಂತೆ ಆಗಲಿದೆ. ವಿಮಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ನಾಯಕತ್ವ ಸ್ಥಾನ ಸಿಗಲಿದೆ. ವಿಮಾನ ಮೂಲಸೌರ್ಯ, ಸೌಲಭ್ಯ ಒದಗಿಸುವ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಏರಲಿದೆ. ಈ ಭಾಗದಲ್ಲಿ ಕೈಗಾರಿಕೆಗಳು ತಲೆ ಎತ್ತಲು, ಮತ್ತಷ್ಟು ಹೂಡಿಕೆ ಹರಿವು ಬರುವ ವಿಶ್ವಾಸ ವಿದೆ. ಇದಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಈ ಹಿಂದೆ ತಿಳಿಸಿತ್ತು.
ಸದ್ಯ ಘಟಕ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿದೆ. ಹಂತ ಹಂತವಾಗಿ ಕಾಮಗಾರಿ ಮುಗಿದು ಮುಂದಿನ ದಿನಗಳಲ್ಲಿ ಇಂಡಿಗೋದಿಂದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಎಲೆ ಎತ್ತಲಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications