ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಜಾಗತಿಕ ಶಕ್ತಿಯಾಗಿದ್ದರಿಂದ ಧೋಕ್ಲಾಂ ಸಮಸ್ಯೆ ಇತ್ಯರ್ಥ: ರಾಜನಾಥ್

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 8: ಭಾರತ ಜಾಗತಿಕ ಶಕ್ತಿಯಾಗಿ ಎದ್ದು ನಿಂತಿದ್ದರಿಂದ ಚೀನಾ ಜತೆಗಿನ ಧೋಕ್ಲಾಂ ಸಮಸ್ಯೆ ಬಗೆ ಹರಿಯಿತು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಅರಮನೆ ಮೈದಾನದಲ್ಲಿ ಇಂದು ನಡೆದ ವಿಶ್ವಕರ್ಮ ಸಮುದಾಯದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತದ ಗೌರವ, ಪ್ರತಿಷ್ಠೆ ಜಾಗತಿಕ ಮಟ್ಟದಲ್ಲಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು.

India is a world power, So Doklam issue got resolved: Rajnath in Bengaluru

ಧೋಕ್ಲಾಂ ಬಿಕ್ಕಟ್ಟಿನುದ್ದಕ್ಕೂ ಭಾರತ ಪರಿಪಕ್ವ ನಡವಳಿಕೆ ತೋರಿತು ಎಂದ ರಾಜನಾಥ್ ಸಿಂಗ್, "ಭಾರತ ಜಾಗತಿಕ ಶಕ್ತಿಯಾಗಿದೆ. ಒಂದೊಮ್ಮೆ ಭಾರತ ಅಶಕ್ತ ರಾಷ್ಟ್ರವಾಗೇ ಉಳಿದಿದ್ದರೆ ಧೋಕ್ಲಾಂ ವಿವಾದ ಯಾವತ್ತೂ ಬಗೆ ಹರಿಯುತ್ತಲೇ ಇರಲಿಲ್ಲ," ಎಂದು ವಿಶ್ಲೇಷಿಸಿದರು.

ಚೀನಾ ಗಡಿಗೆ ನಿರ್ಮಲಾ ಸೀತಾರಾಮನ್

ಇನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಚೀನಾ ಗಡಿ ನಾಥು ಲಾ ಗೆ ಭೇಟಿ ನೀಡಿದರು. ಈ ವೇಳೆ ಚೀನಿ ಸೈನಿಕರು ರಕ್ಷಣಾ ಸಚಿವರಿಗೆ ಕೈ ಮುಗಿದು ವಂದಿಸಿದರು. ಗಡಿಯಾಚೆಗೆ ನಿಂತು ರಕ್ಷಣಾ ಸಚಿವರ ಫೋಟೋಗಳನ್ನು ಚೀನಿ ಸೈನಿಕರು ತೆಗೆದುಕೊಳ್ಳುತ್ತಿದ್ದುದು ಕಂಡು ಬಂತು.

English summary
Addressing a rally in Bengaluru's Palace Ground Home Minister Rajnath Singh on Sunday said that the Doklam standoff with China was resolved because of India's rise as a world power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X