Get Updates
Get notified of breaking news, exclusive insights, and must-see stories!

Bengaluru Rain: ಬೆಂಗಳೂರಿನಲ್ಲಿ ಮಳೆಯಾದರೆ ಆನಂದಕ್ಕಿಂತ ಸಮಸ್ಯೆಗಳೇ ಅಧಿಕ- ನಿವಾಸಿಗಳ ಅಳಲು!

ಬೆಂಗಳೂರು ನಗರದಲ್ಲಿ ಶುಕ್ರವಾರ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಸುಡುವ ಶಾಖದಿಂದ ಕಂಗೆಟ್ಟಿದ್ದ ನಿವಾಸಿಗಳು ಧಾರಾಕಾರ ಮಳೆಯನ್ನು ಆನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಳೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಫೋಟೋಗಳು ಹರಿದಾಡುತ್ತಿವೆ. ಕೆಲವರು ಒದ್ದೆಯಾಗುವ ಮೂಲಕ ಮಳೆಯನ್ನು ಸಂಭ್ರಮಿಸಿದರೆ, ಇನ್ನು ಕೆಲವರು ವಿಶೇಷವಾಗಿ ಪ್ರಯಾಣಿಕರು ನಗರದ ಕೆಲವು ಭಾಗಗಳು ಜಲಾವೃತವಾಗಿದ್ದರಿಂದ ಅಳಲು ತೋಡಿಕೊಂಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಗಾಳಿ ಸಮೇತ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಶುಕ್ರವಾರ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 29.5 ಮಿಮೀ, ರಾಜರಾಜೇಶ್ವರಿ ನಗರದಲ್ಲಿ 29 ಮಿಮೀ ಮಳೆಯಾಗಿದೆ. ನಗರದ ಇತರ 25 ವಾರ್ಡ್‌ಗಳಲ್ಲಿ 10 ಮಿ.ಮೀ.ಗೂ ಅಧಿಕ ಮಳೆ ಸುರಿದಿದೆ.

If it rains in Bengaluru there are more problems than pleasure

ಮಳೆಯಿಂದ ಟ್ರಾಫಿಕ್

6 ತಿಂಗಳ ಕಾಯುವಿಕೆಯ ನಂತರ ಬೆಂಗಳೂರಿಗೆ ಅಂತಿಮವಾಗಿ ಅಗತ್ಯವಿರುವ ಮಳೆ ಸುರಿದಿದೆ. ಬೇಸಿಗೆಯ ಶಾಖದಿಂದ ಪರಿಹಾರವನ್ನು ತಂದಿದೆ. ಮಳೆಯಾಗುತ್ತಿದ್ದಂತೆ ಅನೇಕ ಜನ ಸಂತೋಷವನ್ನು ತಡೆಯಲು ಸಾಧ್ಯವಾಗಿದೆ ತುಂತುರು ಮಳೆಯಲ್ಲಿ ಆನಂದಿಸಿದ್ದಾರೆ.

ಇದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಇದು ಮುಂಬರುವ ತಂಪಾದ ದಿನಗಳ ಭರವಸೆಯನ್ನು ಸಂಕೇತಿಸುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ತನ್ನ ಸ್ವಯಂಸೇವಕರು ಮಳೆಯಲ್ಲಿ ನೆನೆಯುವ ವೀಡಿಯೊವನ್ನು ಹಂಚಿಕೊಂಡಿದೆ.

If it rains in Bengaluru there are more problems than pleasure

ಮಳೆ ಬಗ್ಗೆ ಭಿನ್ನಾಭಿಪ್ರಾಯ

"ಬೆಂಗಳೂರಿನಲ್ಲಿ ಮಳೆ ಮರಳಿದೆ, ಶಾಖದಿಂದ ಹೆಚ್ಚು ತಂಪು ತಂದಿದೆ. ಮಳೆ ಹನಿ ಶಬ್ದಗಳಿಗಾಗಿ ನಮ್ಮ ಕಿವಿಗಳು ಹಂಬಲಿಸುತ್ತಿದ್ದವು " ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ನಿವಾಸಿಯೊಬ್ಬರು ಮಳೆ ನೀರು ಕೊಯ್ಲಿನ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಬಳಕೆದಾರರು ಹೀಗೆ ಬರೆದಿದ್ದಾರೆ, "ಆತ್ಮೀಯ ಬಿಬಿಎಂಪಿಯವರೇ. ಬೆಂಗಳೂರಿನಲ್ಲಿ ಮಳೆ ಇಲ್ಲದೆ ನೀವು 6 ತಿಂಗಳು ಕಳೆದಿದ್ದೀರಿ. ಈ ಸಮಯದಲ್ಲಿ ನೀವು ಡ್ರೈನ್‌ಗಳನ್ನು ಶುದ್ಧಗೊಳಿಸಿಲ್ಲ. ರಸ್ತೆಗಳನ್ನು ದುರಸ್ತಿ ಮಾಡಿಸಲಿಲ್ಲ. ಇದರಿಂದಾಗಿ ಟ್ರಾಫಿಕ್ ಜಾಮ್ ಮತ್ತು ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾದರೆ ರಸ್ತೆಗಳು ಜಲಾವೃತವಾಗುತ್ತಿವೆ. ನಾವು ಪ್ರಯಾಣಿಸಲು ನರಕವನ್ನು ಅನುಭವಿಸುತ್ತಿದ್ದೇವೆ. ಮಳೆಯ ಸಮಯ ನಮಗೆ ಸುಂದರವಾದ ಅನುಭವವಾಗಬೇಕಿತ್ತು. ಆದರೆ ನಾಗರಿಕರು ಬಳಲುವಂತಾಗಿದೆ" ಎಂದಿದ್ದಾರೆ.

ಸೌಕರ್ಯಗಳನ್ನು ಕಿತ್ತಿಕೊಳ್ಳುವ ಮಳೆ

ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ಜಲಾವೃತಗೊಂಡ ರಸ್ತೆಯ ಚಿತ್ರವನ್ನು ಹಂಚಿಕೊಂಡಿದೆ. "ಸಂಚಾರ ಸಲಹೆ: ನಾಗವಾರ ಸಿಗ್ನಲ್ ಕಡೆಗೆ ನೀರು ನಿಂತಿರುವುದರಿಂದ ನಿಧಾನವಾಗಿ ವಾಹನಗಳು ಚಲಿಸುತ್ತಿವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ದಯವಿಟ್ಟು ಸಹಕರಿಸಿ" ಎಂದು ಪೋಸ್ಟ್ ಮಾಡಿದೆ.

"ಒಂದು ಅಥವಾ ಎರಡು ಸುತ್ತಿನ ಮಳೆ ಬೆಂಗಳೂರು ಮೂಲ ಸೌಕರ್ಯಗಳ ಸಮಸ್ಯೆಯನ್ನು ಹೆಚ್ಚಿಸಿ ಬಿಡುತ್ತದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ಜಯದೇವ ಫ್ಲೈಓವರ್ ಮೆಟ್ರೋ ನಿಲ್ದಾಣದ ಬಳಿ ಭಾರೀ ದಟ್ಟಣೆ ಉಂಟಾಗಿದೆ' ಎಂದು ಮತ್ತೊಬ್ಬ ನಿವಾಸಿ ಫೋಟೋ ಹಂಚಿಕೊಂಡಿದ್ದಾರೆ.

"ಮಳೆಯಾಗದಿದ್ದರೆ, ಜನರು ನೀರಿನ ಕೊರತೆಯಿಂದ ಬಳಲುತ್ತಾರೆ. ಮಳೆಯಾದರೆ ಜನರು ಜಲಾವೃತದಿಂದ ಬಳಲುತ್ತಾರೆ. ಬೆಂಗಳೂರಿನಲ್ಲಿ ಎರಡು ವಿಪರೀತ? ಇದು ಜನರಿಗೆ ಬೇಕಾದ ಅಭಿವೃದ್ಧಿಯೇ? ಎಂದು ಮತ್ತೊಬ್ಬ ನಿವಾಸಿ ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+