ಹೆಲ್ಮೆಟ್ ಇಲ್ಲದೆ ಸವಾರಿ, 100 ರು. ದಂಡ ಕಟ್ರಿ
ಬೆಂಗಳೂರು, ಜನವರಿ, 19: ಜನವರಿ 20 ರಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ಸರ್ಕಾರದ ಕ್ರಮದಲ್ಲಿ ಯಾವುದೇ ರಾಜಿಯಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ 100 ರು. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎ ಸಲೀಂ ಎಚ್ಚರಿಸಿದ್ದಾರೆ.
ಈಗಾಗಲೇ ಶೇ. 30 ರಷ್ಟು ನಾಗರಿಕರು ಹೆಲ್ಮೆಟ್ ಖರೀದಿ ಮಾಡಿದ್ದಾರೆ. ಬೆಂಗಳೂರಿನ ಜನ ಕಾನೂನು ಪಾಲನೆಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಜನರ ಒಳಿತಿಗಾಗಿ ಕಾನೂನು ಮಾಡಲಾಗಿದ್ದು ಇಲ್ಲಿ ಯಾವುದೇ ಹೇರಿಕೆಯಲ್ಲ ಎಂದು ಸಲೀಂ ತಿಳಿಸಿದ್ದಾರೆ.[ಜನವರಿ 20ರಿಂದ ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

ಮೊದಲ ಬಾರಿ ಉಲ್ಲಂಘಿಸಿದರೆ 100 ರೂ. ದಂಡ, 2ನೇ ಬಾರಿ ಉಲ್ಲಂಘಿಸಿದರೆ 200 ರೂ. ದಂಡ ಸಂಚಾರಿ ಪೊಲೀಸರ ಬಳಿ ಕಟ್ಟಬೇಕು. 3ನೇ ಬಾರಿ ಉಲ್ಲಂಘಿಸಿದರೆ 500 ರೂ. ದಂಡವನ್ನು ನ್ಯಾಯಾಲಯಕ್ಕೆ ತೆರಳಿ ಕಟ್ಟಬೇಕು. ನಿಯಮ ಜಾರಿ ಹಿನ್ನೆಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ಸೇರಿದಂತೆ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅನ್ವಯ ಹೆಲ್ಮೆಟ್ ಕಡ್ಡಾಯ ನೀತಿಯನ್ನು ಜಾರಿ ಮಾಡಲಾಗಿದೆ. ಜನರ ಪ್ರಾಣ ರಕ್ಷಣೆಯೇ ಕಾನೂನು ಜಾರಿ ಮಾಡಲು ಕಾರಣ ಎಂದು ಸಲೀಂ ಸ್ಪಷ್ಟನೆ ನೀಡಿದ್ದಾರೆ.[ಥತ್ತೇರಿಕೆ.. ಹುಡುಗಿ ಡ್ರಾಪ್ ಕೇಳಿದ್ರು ಕೊಡಂಗಿಲ್ಲ]
ಹೆಲ್ಮೆಟ್ ಯಾಕೆ ಧರಿಸಬೇಕು ಎಂಬುದನ್ನು ಸಲೀಂ ವಿವರಿಸಿದ್ದಾರೆ.
* ದ್ವಿಚಕ್ರ ವಾಹನ ಸವಾರರೇ ಅತಿ ಹೆಚ್ಚು ಅಪಘಾತಕ್ಕೆ ಈಡಾಗುತ್ತಿದ್ದಾರೆ.
* ಅಪಘಾತದ ಪರಿಣಾಮ ಅಂಗವೈಕಲ್ಯಕ್ಕೆ ಗುರಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ
* ವಾಹನದ ಅತಿಯಾದ ವೇಗದ ಪರಿಣಾವೇ ಅಪಘಾತಗಳಾಗುತ್ತಿವೆ ಎಂದು ಸಂಶೋಧನೆಗಳು ಹೇಳಿವೆ
* ದ್ವಿಚಕ್ರ ವಾಹನ ಸವಾರರಿಗೆ ಓವರ್ ಟೇಕ್ ಮಾಡುವ ವೇಳೆ ಸಮಸ್ಯೆ ಉದ್ಭವಿಸುವುದು ಸಹಜ
* ಅಪಘಾತವಾಗಿ ತಲೆ ಅಥವಾ ಮೆದುಳಿಗೆ ಪೆಟ್ಟು ಬಿದ್ದರೆ ಚಿಕಿತ್ಸಾ ವೆಚ್ಚ ದುಬಾರಿ
* ಹೆಲ್ಮೆಟ್ ಧರಿಸುವುದರಿಂದ ಶೇ. 20-30 ರಕ್ಷಣೆ ಪಡೆಯಲು ಸಾಧ್ಯವಿದೆ.
* ತಲೆಗೆ ಏಟು ಬಿದ್ದು ರಕ್ತ ಸ್ರಾವವಾದರೆ ವ್ಯಕ್ತಿ ಕೆಲವೇ ಕ್ಷಣದಲ್ಲಿ ಸಾಗವಿಗೀಡಾಗುವ ಸಾಧ್ಯತೆ ಇದೆ.
* ಉಳಿದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ವಾತಾವರಣವೂ ಅನುಕೂಲಕರವಾಗಿದ್ದು ಹೆಲ್ಮೆಟ್ ಧರಿಸಿ ಸುರಕ್ಷಿತ ಚಾಲನೆ ಮಾಡಿರಿ.
-
ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ಘೋಷಿಸಿದ ಸಿಎಂ ಸಿದ್ಧರಾಮಯ್ಯ -
Karnataka: ರಾಜ್ಯದಲ್ಲಿ ಹೆಚ್ಚಾಯ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ: 3 ವರ್ಷದಲ್ಲಿ 27 ಸಾವು -
ಬೆಂಗಳೂರು ಕರಡು ಮತಪಟ್ಟಿ ಹಾಗೂ ಕಾಂಗ್ರೆಸ್ನ ಮತಚೋರಿಯ ಸುಳ್ಳುಗಳ ಅನಾವರಣ: ಲೇಖಕ ರಾಜೀವ ಹೆಗಡೆ ಬರಹ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ












Click it and Unblock the Notifications