ಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭ
ಬೆಂಗಳೂರು, ಫೆಬ್ರವರಿ 10 : ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಬೆಂಗಳೂರು ನಗರ ನಡುವೆ ಫೆಬ್ರವರಿ ತಿಂಗಳಾಂತ್ಯಕ್ಕೆ ಮೊದಲ ಹೆಲಿಕಾಪ್ಟರ್ ಸೇವೆ ಕಾರ್ಯಾರಂಭವಾಗಲಿದೆ.
ನಗರದ ದಕ್ಷಿಣ ಹಾಗೂ ಪೂರ್ವ ಭಾಗದಿಂದ ಕೆಐಎಗೆ ಪ್ರಯಾಣಿಸುವವರಿಗೆ ಹೆಲಿ ಟ್ಯಾಕ್ಸಿಯಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಈಗಾಗಲೇ ಎಲೆಕ್ಟ್ರಾನಿಕ್ ಸಿಯಲ್ಲಿ ಹೆಲಿಪ್ಯಾಡ್ ಗಳು ಸಿದ್ಧವಾಗಿದ್ದು, ಸೇವೆ ಆರಂಭ ಮಾತ್ರ ಬಾಕಿ ಇದೆ. ಮುಂದಿನ ವಾರ ಅಧಿಕೃತವಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತದೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಕೆಐಎಗೆ ಲಕ್ಸುರಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು 2 ಸಾವಿರ ರೂ. ಬೇಕು. ಆದರೆ, ಸಿಲ್ಕ್ ಬೋರ್ಡ್ ಹಾಗೂ ಹೊಸೂರು ರಸ್ತೆ ಟ್ರಾಫಿಕ್ನಿಂದಾಗಿ ಪ್ರಯಾಣ ಅವಧಿ 2 ತಾಸು ಹಿಡಿಯುತ್ತಿದೆ. ಆದರೆ, ಲಕ್ಸುರಿ ಕ್ಯಾಬ್ ದರದಲ್ಲೇ ಹೆಲಿಕಾಪ್ಟರ್ ನಲ್ಲೇ 15 ನಿಮಿಷಗಳಲ್ಲಿ ಕೆಐಎ ತಲುಪಬಹುದು.

ಬರುವ ದಿನಗಳಲ್ಲಿ ನಗರದ ಬೇರೆ ಬೇರೆ ಭಾಗಗಳಲ್ಲಿ ಹೆಲಿಪ್ಯಾಡ್ ಗಳು ಕಾರ್ಯಾರಂಭ ಮಾಡಲಿವೆ. ಎಲೆಕ್ಟ್ರಾನಿಕ್ ಸಿಟಿ ಜತೆಗೆ ಈಗಾಗಲೇ ಎಚ್ಎಎಲ್ ನಲ್ಲಿಯೂ ಒಂದು ಹೆಲಿಪ್ಯಾಡ್ ಬಳಕೆಗೆ ಸಿದ್ಧ ಸ್ಥಿತಿಯಲ್ಲಿ ಇದೆ. ಇದರ ಜತೆಗೆ ನಗರದ ವಿವಿಧೆಡೆ ಕಟ್ಟಡಗಳ ಮೇಲೆ 90 ಹೆಲಿಪ್ಯಾಡ್ ಗಳಿವೆ.
ಆದರೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ಗಾರ್ಡೇನಿಯಾ ಹೊಟೇಲ್ ಮೇಲಿನ ಹೆಲಿಪ್ಯಾಡ್ ಮಾತ್ರ ನಾಗರೀಕ ವಿಮಾನಯಾನ ಇಲಾಖೆಯಿಂದ ಕಾರ್ಯಾಚರಣೆ ಅನುಮತಿ ಪಡೆದುಕೊಂಡಿದೆ. 6 ರಿಂದ 13 ಪ್ರಯಾಣಿಕರ ಸಾಮರ್ಥ್ಯವಿರುವ ಬೆಲ್ ಕಂಪನಿಯ ಎರಡು ಹೆಲಿಕಾಪ್ಟರ್ ಗಳನ್ನು ಟ್ಯಾಕ್ಸಿ ಸೇವೆಗೆ ತುಂಬಿ ಏವಿಯೇಷನ್ ಬಳಸಲಿದ್ದು, ಒಂದು ಮಾತ್ರ ಹಾರಾಟ ನಡೆಸಲಿದ್ದು ಮತ್ತೊಂದು ಸ್ಟ್ಯಾಂಡ್ ಬೈ ಆಗಿ ಇರಲಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications