ವಾರಾಂತ್ಯದ ಮಳೆಗೆ ಕಂಗಾಲಾದ ಬೆಂಗಳೂರಿಗರು, ನೆಲ ಕಂಡ ಮರಗಳು
ಬೆಂಗಳೂರಿನಲ್ಲಿ ಶನಿವಾರ ಸಂಜೆಯಿಂದ ಭಾರೀ ಮಳೆಯಾಗಿದೆ. ಜತೆಗೆ ಬಿರುಗಾಳಿಯೂ ಬೀಸಿ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ
ಬೆಂಗಳೂರು, ಮೇ 20: ಬೆಂಗಳೂರಿನಲ್ಲಿ ಶನಿವಾರ ಸಂಜೆ ಸುರಿದ ನಂತರ ಮಳೆಗೆ ವಾರಾಂತ್ಯದ ಸಂಭ್ರಮದಲ್ಲಿದ್ದವರಿಗೆ ಒಂದಿಷ್ಟು ಸಮಸ್ಯೆಗಳಾಗಿವೆ. ಆರ್ ಟಿ ನಗರ, ಲಗ್ಗೆರೆ, ಯಶವಂತಪುರ, ಕಾರ್ಪೋರೇಷನ್, ಜಯನಗರ, ಬಸವನಗುಡಿ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆ ಸುರಿದಿದೆ.
ಆರ್ ಟಿ ನಗರ-ಮಠದಹಳ್ಳಿ ರಸ್ತೆಯಲ್ಲಿ ವಿದ್ಯುತ್ ಕಂಬ ರಸ್ತೆಗೆ ಉರುಳಿ, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ಬಿರುಗಾಳಿ-ಮಳೆಗೆ ಹಲವು ಕಡೆ ಮರಗಳು ನೆಲಕ್ಕೆ ಉರುಳಿವೆ. ತಗ್ಗಿನ ಪ್ರದೇಶದ ಮನೆಗಳಿಗೆ, ಕೆಲವು ಕೊಳಗೇರಿಯಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಅದರಲ್ಲೂ ರಸ್ತೆಗಳಲ್ಲಿ ಸಾಲುಗಟ್ಟಿರುವ ವಾಹನಗಳು ಕಾಣುತ್ತಿವೆ.[ರಾಜ್ಯದ ಹಲವೆಡೆ ಮಳೆ, ಸಿಡಿಲಿಗೆ ಸಿಡಿಮದ್ದು ಸಿಡಿದು ಬೆಂಗಳೂರಲ್ಲಿ ಇಬ್ಬರು ಸಾವು]

ಸದಾಶಿವನಗರ, ಡಾಲರ್ಸ್ ಕಾಲೋನಿ, ಸಂಜಯನಗರ ಸೇರಿದಂತೆ ಹಲವು ಕಡೆ ಮರಗಳು ಉರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ರಾಜಾಜಿನಗರದ ರಾಜ್ ಕುಮಾರ್ ರಸ್ತೆ, ಆರಿ ಟಿ ನಗರ ಪೊಲೀಸ್ ಠಾಣೆ ಬಳಿ ಕೂಡ ಮರಗಳು ನೆಲಕ್ಕೆ ಉರುಳಿವೆ. ಆದ್ದರಿಂದ ಮರದ ಕೆಳಗೆ ಆಶ್ರಯಕ್ಕೆಂದು ನಿಲ್ಲಬೇಡಿ. ಸಂಬಂಧಿಕರು, ಸ್ನೇಹಿತರು ಮನೆಯಿಂದ ಹೊರಕ್ಕೆ ಹೋಗಿದ್ದರೆ ಎಚ್ಚರಿಕೆಯಿಂದ ಇರಲು ತಿಳಿಸಿ.











Click it and Unblock the Notifications