ಎಲ್ಲಾ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಶೀಘ್ರ ಟೈಮರ್ ಅಳವಡಿಕೆ
ಬೆಂಗಳೂರು, ಮಾರ್ಚ್ 05: ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್ ಸಿಗ್ನಲ್ ಗಳ ಟೈಮರ್ ಗಳು ಕೆಟ್ಟು ಹೋಗಿದ್ದರಿಂದ ಬೈಕ್ ಸವಾರರು ಹಾಗೂ ವಾಹನಗಳ ಚಾಲಕರು ರೋಸಿ ಹೋಗಿದ್ದಾರೆ.
ಸಿಗ್ನಲ್ ನಲ್ಲಿ ನಿಂತುಕೊಳ್ಳುವ ಚಾಲಕರು ಹಾಗೂ ಬೈಕ್ ಸವಾರರು ಸಿಗ್ನಲ್ ಟೈಮರ್ ಗಳು ತೋರಿಸುವ ವೇಟಿಂಗ್ ಸಮಯವನ್ನು ನೋಡಿಕೊಂಡು ಕನಿಷ್ಟ ಪಕ್ಷ ರಿಲ್ಯಾಕ್ಸ್ ಮಾಡಬಹುದು. ಆದರೆ ನಗರದ ಬಹುತೇಕ ಟ್ರಾಫಿಕ್ ಟೈಮರ್ ಗಳು ಕೆಟ್ಟು ಹೋಗಿದ್ದು, ಟ್ರಾಫಿಕ್ ಸಿಗ್ನಲ್ ನಲ್ಲಿ ಎಷ್ಟು ನಿಮಿಷಗಳ ಕಾಲ ಕಾಯಬೇಕೆಂಬ ಗೊಂದಲಕ್ಕೆ ಸವಾರರು ಹಾಗೂ ಚಾಲಕರು ತತ್ತರಿಸಿ ಹೋಗಿದ್ದಾರೆ.
ಬೆಂಗಳೂರು ನಗರದ ಕೆಟ್ಟು ಹೋಗಿರುವ ಸಿಗ್ನಲ್ ಗಳನ್ನು ಸರಿಪಡಿಸುವುದನ್ನು ಬಿಟ್ಟು ನಿಯಮ ಉಲ್ಲಂಘನೆ ಇನ್ನಿತರ ದಂಡಗಳನ್ನು ವಸೂಲಿ ಮಾಡುವಲ್ಲಿ ಟ್ರಾಫಿಕ್ ಪೊಲೀಸರು ತಮ್ಮ ಸಮಯವನ್ನು ವ್ಯಯಿಸುತ್ತಿದ್ದಾರೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಬೇಸಿಗೆ ದಗೆ ಹೆಚ್ಚುತ್ತಿದ್ದು ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನಗಳು ಎಷ್ಟು ನಿಮಿಷ ಕಾಯಬೇಕು ಎಂಬ ಮಾಹಿತಿ ಇಲ್ಲದೆ ಗೋಳಾಡುವಂತಾಗಿದೆ. ಒಂದು ವೇಳೆ ಟ್ರಾಫಿಕ್ ಸಿಗ್ನಲ್ ನಲ್ಲಿ ಟೈಮರ್ ಗಳಿದ್ದರೆ ಕನಿಷ್ಟ ಪಕ್ಷ ಕಾರ್ ಮತ್ತು ಬೈಕ್ ಗಳನ್ನು ಇಂತಿಷ್ಟು ನಿಮಿಷಗಳ ಕಾಲ ಬಂದ್ ಮಾಡಬೇಕೆಂಬುದು ತಿಳಿಯುತ್ತದೆ.
ರಾಮಮೂರ್ತಿ ನಗರದ ಮುಖ್ಯ ಸರ್ಕಲ್ ನಲ್ಲಿರುವ ಟ್ರಾಫಿಕ್ ಸಿಗನ್ಲ್ ಕಳೆದ ಹಲವಾರು ದಿನಗಳಿಂದ ಟ್ರಾಫಿಕ್ ಲೈಟ್ ಹಾಗೂ ಟೈಮರ್ ಎರಡನ್ನೂ ತೋರಿಸುತ್ತಿಲ್ಲ.ಟ್ರಾಫಿಕ್ ಸಿಗ್ನಲ್ ಗಳಲ್ಲಿ ಟೈಮರ್ ಗಳು ಮಾತ್ರವಲ್ಲ ಕೆಂಪು, ಹಳದಿ, ಹಸಿರು ಲೈಟ್ ಗಳು ಸಹ ಅಧಿಕ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವುದಿಲ್ಲ ಇದರಿಂದ ಜನರು ಮನಸಿಗೆ ಬಂದಂತೆ ಟ್ರಾಫಿಕ್ ನಲ್ಲಿ ನುಗ್ಗುತ್ತಿದ್ದಾರೆ. ಹಾಗಾಗಿ ಜನರು ಪ್ರತಿಯೊಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಟೈಮರ್ ಇರಲೇ ಬೇಕು ಎಂದು ಒತ್ತಾಯಿಸಿದ್ದರು.
ಸಾಕಷ್ಟು ಸಿಗ್ನಲ್ ಗಳಲ್ಲಿ ಟೈಮರ್ ಗಳಿದ್ದರೂ ಕೂಡ ಉದ್ದೇಶಿತವಾಗಿ ಬಂದ್ ಮಾಡಲಾಗಿರುತ್ತದೆ ಅಥವಾ ಟೈಮರ್ ಗಳು ಕೆಟ್ಟು ವರ್ಷವಾದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ.
ಅಡಾಪ್ಟೀವ್ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಅದ್ಯದಲ್ಲೇ ಟೈಮರ್ ಗಳನ್ನು ಅಳವಡಿಸಲಾಗುವುದು ಅದಕ್ಕಾಗಿ ಸರ್ಕಾರದಿಂದ 86 ಕೋಟಿ ರೂ ಅನುದಾನ ದೊರೆಯಲಿದೆ ಎಂದು ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications