ಮಳೆ ಬಂದರೆ ಮೊದಲು ನೆನಪಾಗೋದು ಬಜ್ಜಿ ಬೊಂಡಾ ನೀವೇನಂತಿರಾ...
ಬೆಂಗಳೂರು ನವೆಂಬರ್ 6: ಮಳೆ ಬಂತು ಮಳೆ... ಮಳೆ ನಿರೀಕ್ಷೆಯಲ್ಲಿದ್ದ ಜನರಿಗೆ ವರುಣ ಸಿಹಿಯನ್ನೊತ್ತು ಧರೆಗೆ ಇಳಿದಿದ್ದಾನೆ. ಇಂದು ಸಿಲಿಕಾನ್ ಸಿಟಿ ಜನರಿಗೆ ಬಿಸಿಲಿನ ಬಿಸಿಯಿಂದ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಮಧ್ಯಾಹ್ನನದಿಂದ ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ತಂಪಾದ ವಾತಾವರಣ ಸೃಷ್ಟಿಯಾಗಿದ್ದು ಸಂಜೆಯಾಗುತ್ತಿದ್ದಂತೆ ಸ್ನ್ಯಾಕ್ಸ್ಗೆ ಬೇಡಿಕೆ ಹೆಚ್ಚಾಗಿದೆ.
ಮಳೆ ಬರುವಾಗ ಒಂದು ಪ್ಲೇಟ್ ಬಜ್ಜಿ ಅದರೊಂದಿಗೆ ಚಹಾ ಇದ್ದರೆ ಅದರ ಮಜಾನೇ ಬೇರೆ. ಹೀಗಾಗಿ ಬೆಂಗಳೂರು ತಂಪಾಗುತ್ತಿದ್ದಂತೆ ಬಜ್ಜಿ, ಬೊಂಡಾ, ಚಹಾ, ಕಾಫಿ, ಫ್ರೆಂಚ್ ಫ್ರೈಸ್, ಮ್ಯಾಗಿ ಹೀಗೆ ಬಗೆ ಬಗೆಯ ತಿಂಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಟೀ ಅಂಗಡಿ, ಬೀದಿ ಬದಿ ಹಾಗೂ ರಸ್ತೆ ಸ್ನ್ಯಾಕ್ಸ್ ಅಂಗಡಿಗಳತ್ತ ಜನ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ.

ಅದರಲ್ಲೂ ಮಳೆ ಬಂದಾಗ ಹೆಚ್ಚು ತಿನ್ನಲು ಮನಸ್ಸಾಗೋದು ಕರಿದ ತಿಂಡಿಗಳಲ್ಲಿ ಒಂದಾದ ಬಜ್ಜಿಯನ್ನ. ಹೀಗಾಗಿ ಮಳೆ ಅಥವಾ ತಂಪಾದ ವಾತಾವರಣದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬಜ್ಜಿಯಲ್ಲೂ ನಾನಾ ಬಗೆಯ ಬಜ್ಜಿಗಳಿವೆ. ಜನರು ತಮ್ಮ ಇಷ್ಟಕ್ಕನುಗುಣವಾಗಿ ಬಜ್ಜಿಗಳನ್ನು ಖರೀದಿಸಿ ಆನಂದಿಸುತ್ತಾರೆ. ಕೆಲವರು ಮನೆಯಲ್ಲೇ ಮಾಡುವ ಕರಿದ ತಿಂಡಿಗಳನ್ನು ಸೇವಿಸುತ್ತಾರೆ.
ಅಂದಹಾಗೆ ಬಜ್ಜಿಯಲ್ಲಿ ಮೆಣಸಿನಕಾಯಿ ಬಜ್ಜಿಗೆ ಇರುವಷ್ಟು ಪ್ರಾಮುಖ್ಯತೆ ಉಳಿದ ಬಜ್ಜಿಗಳಿಗಿಲ್ಲ ಅಂದರೆ ತಪ್ಪಾಗಲ್ಲ. ಬಿಸಿ ಬಿಸಿ ಬಜ್ಜಿಯಲ್ಲಿ ಮೆಣಸಿನ ಖಾರ ನಾಲಿಗೆಗೆ ತಾಗಿದರೆ ಅದ್ರಲ್ಲೇನೋ ಮಜಾ. ಎಷ್ಟು ತಿಂದರೂ ಅದು ಸಾಕೆನಿಸುವುದಿಲ್ಲ.
ಖಾರವನ್ನು ತಿನ್ನಲು ಇಷ್ಟಪಡದವರು ಬಹುತೇಕ ಈರುಳ್ಳಿ ಬೊಂಡಾಕ್ಕೆ ಮಾರು ಹೋಗುತ್ತಾರೆ. ಈರುಳ್ಳಿ ಕರಿದಾಗ ಸಿಗುವ ಸ್ವಾದವನ್ನು ಆನಂದಿಸಲು ಇಷ್ಟಪಡುತ್ತಾರೆ. ಹೀಗಾಗಿ ಈರುಳ್ಳಿ ಬೊಂಡಾ ಅಥವಾ ಬಜ್ಜಿ ಕೂಡ ಮಳೆ ಚಳಿಗಾಲದಲ್ಲಿ ತಿನ್ನಲು ಮನಸ್ಸಾಗುತ್ತದೆ. ಹೀಗಾಗಿ ಮೆಣಸಿಕಾಯಿಗೆ ಇರುವಷ್ಟು ಬೇಡಿಕೆ ಇದಕ್ಕೂ ಇದೆ.

ಸಾಮಾನ್ಯವಾಗಿ ಆಲೂಗಡ್ಡೆಯಲ್ಲಿ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಅನ್ನು ತಿನ್ನುವವರ ಸಂಖ್ಯೆ ಅಧಿಕ. ಆದರೆ ಮಳೆ ಚಳಿ ಇದ್ದಾಗ ಕಡಲೇ ಹಿಟ್ಟಿನಲ್ಲಿ ಆಲೂ ಸ್ಲೈಸ್ ಅನ್ನ ಅದ್ದಿ ಕರಿದು ಮಾಡುವ ಆಲೂ ಬಜ್ಜಿಯಲ್ಲಿರುವ ರುಚಿ ಮತ್ತೊಂದರಲಿಲ್ಲ. ರುಚಿಗೆ ತಕ್ಕಷ್ಟು ಖಾರ ಉಪ್ಪು ಇದ್ದರೆ ಸಾಕು ಈ ಆಲೂ ಬಜ್ಜಿ ತಿನ್ನಲು ತುಂಬಾನೇ ಟೇಸ್ಟ್. ಹೀಗಾಗಿ ಆಲೂಬಜ್ಜಿ ಕೂಡ ಜನರ ಅಚ್ಚುಮೆಚ್ಚಿನ ಕರದ ಖಾದ್ಯವಾಗಿದೆ.
ಸಾಮಾನ್ಯವಾಗಿ ಹಲವಾರು ಬಗೆಯ ಬಜ್ಜಿಗಳನ್ನು ತಯಾರಿಸಲಾಗುತ್ತದೆ. ಕ್ಯಾಪ್ಸಿಕಂ ಬಜ್ಜಿ, ಬಾಳೆಕಾಯಿ ಬಜ್ಜಿ, ಬದನೇಕಾಯಿ ಬಜ್ಜಿ, ಹೀರೇಕಾಯಿ ಬಜ್ಜಿ, ಹಲಸಿನ ಕಾಯಿ ಬಜ್ಜಿ, ಹಗಲಕಾಯಿ ಬಜ್ಜಿ ಹೀಗೆ ಹೇಳ್ತಾ ಹೋದರೆ ಒಂದು ದೊಡ್ಡ ಪಟ್ಟಿ ಮಾಡಬಹುದು. ಒಟ್ಟಾರೆಯಾಗಿ ಕಾಲ ಕಾಲಕ್ಕೆ ತಕ್ಕಂತೆ ವಿವಿಧ ತರಹದ ಬಜ್ಜಿಗಳನ್ನ ಮಾಡಲಾಗುತ್ತದೆ. ರುಚಿಗೆ ಆಸಕ್ತಿಗೆ ಅನುಗುಣವಾಗಿ ಜನ ಬಜ್ಜಿಗಳನ್ನು ಆನಂದಿಸುತ್ತಾರೆ. ನೀವು ಕೂಡ ಈ ಮಳಿಗೆ ಹಾಗೂ ಚಳಿಗೆ ಬಜ್ಜಿ ಬೊಂಡವನ್ನು ಆನಂದಿಸಿ. ಇನ್ನೂ ಬೆಂಗಳೂರಿನಲ್ಲಿಂದು 35 ಮಿಮೀ ಮಳೆ ದಾಖಲಾಗಿದ್ದು ಮೂರು ದಿನ ಮಳೆ ನಿರೀಕ್ಷೆಯಿದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್












Click it and Unblock the Notifications