ಮಾಧ್ಯಮಗಳೆದುರು ಕೈಮುಗಿದ ದುನಿಯಾ ವಿಜಯ್
ಬೆಂಗಳೂರು, ನವೆಂಬರ್ 07: ದಕ್ಷಿಣ ವಲಯದ ಡಿಸಿಪಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ನಟ ದುನಿಯಾ ವಿಜಯ್ ಮಾಧ್ಯಮಗಳೆದುರು ಕೈಮುಗಿದು ಇನ್ನು ಮುಂದೆ ಸರಿಯಾಗಿ ಇರುತ್ತೇನೆ ಎಂದು ಕೇಳಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರ ಕಚೇರಿಗೆ ಕುಟುಂಬ ಸಮೇತ ಬಂದಿದ್ದ ದುನಿಯಾ ವಿಜಯ್ ಪೊಲೀಸರ ಅಣತಿಯಂತೆ ಬಾಂಡ್ ನೀಡಿ ಮುಚ್ಚಳಿಕೆ ಬರೆದುಕೊಟ್ಟು ಕ್ಷಮಾಪಣೆ ಕೇಳಿದ್ದಾರೆ.
ಶಿಸ್ತು ಪಾಲಿಸಬೇಕು, ಕರೆದಾಗ ವಿಚಾರಣೆಗೆ ಬರಬೇಕು, ಕಾನೂನು ಮುರಿಯುವ ಕಾರ್ಯಕ್ಕೆ ಕೈ ಹಾಕಬಾರದು ಎಂಬಿತ್ಯಾದಿ ಸೂಚನೆಗಳನ್ನು ಪೊಲೀಸರು ದುನಿಯಾ ವಿಜಯ್ಗೆ ನೀಡಿದ್ದಾರೆ. ಎಲ್ಲ ನಿಯಮಗಳಿಗೂ ಬದ್ಧನಾಗಿರುತ್ತೇನೆಂದು ದುನಿಯಾ ವಿಜಯ್ ಒಪ್ಪಿಕೊಂಡಿದ್ದಾರೆ.

ಠಾಣೆಯಿಂದ ಹೊರ ಬಂದ ದುನಿಯಾ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ 'ಇನ್ನು ಮುಂದೆ ಕಾನೂನು ಧಕ್ಕೆ ಆಗುವಂತಹಾ ಕೆಲಸ ಮಾಡುವುದಿಲ್ಲ' ಎಂದು ಹೇಳಿ ಕೈಮುಗಿದರು.
ದುನಿಯಾ ವಿಜಿ, ಎರಡನೇ ಪತ್ನಿ ಕೀರ್ತಿಗೌಡ ಹಾಗೂ ಪುತ್ರ ಸಾಮ್ರಾಟ್ ವಿಚಾರಣೆಗೆ ಹಾಜರಾಗಿದ್ರು. ವಿಜಿ ತಂದೆ-ತಾಯಿ ಕೂಡಾ ಡಿಸಿಪಿ ಕಚೇರಿಗೆ ಬಂದಿದ್ದರು.












Click it and Unblock the Notifications