60 ಸೆಕೆಂಡ್ಸ್ ಅಪ್ಲಿಕೇಷನ್ ಐಒಸ್ ನಲ್ಲೂ ಈಗ ಲಭ್ಯ
ಬೆಂಗಳೂರು, ಜೂ.23: ದಿನಪತ್ರಿಕೆಗಳು, ವೆಬ್ ಸೈಟ್ ಗಳ ಸುದ್ದಿಗಳ ರಾಶಿಯನ್ನು ಒಂದೆಡೆಯಲ್ಲೇ ಓದುವ ಸೌಲಭ್ಯ ಒದಗಿಸಿರುವ ಒನ್ ಇಂಡಿಯಾ ಸಂಸ್ಥೆಯ ಉತ್ಪನ್ನ 60 ಸೆಕೆಂಡ್ಸ್ ಮೊಬೈಲ್ ಅಪ್ಲಿಕೇಷನ್ ಈಗ ಐಒಎಸ್ ಹೊಂದಿರುವ ಸಾಧನಗಳಲ್ಲಿ ಲಭ್ಯವಿದೆ.
ಆಂಡ್ರಾಯ್ಡ್ ಮೊಬೈಲ್ ಫೋನ್ ನಂತರ ಆಪಲ್ ಐಒಎಸ್ ಹೊಂದಿರುವ ಐಪ್ಯಾಡ್, ಐಫೋನ್ 5, ಐಫೋನ್ 6, ಐಫೋನ್ ಟಚ್ ಮುಂತಾದ ಸಾಧನಗಳಲ್ಲಿ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳಲ್ಲಿನ ಇತ್ತೀಚಿನ ಸುದ್ದಿಗಳನ್ನು ಓದಬಹುದು. [60 Seconds Now ಅಪ್ಲಿಕೇಷನ್ ಐಒಎಸ್ ಸಾಧನಕ್ಕೆ ಡೌನ್ ಲೋಡ್ ಮಾಡಿಕೊಳ್ಳಿ]
60ಸೆಕೆಂಡ್ಸ್ ಅಪ್ಲಿಕೇಷನ್ ನ ಸೌಲಭ್ಯಗಳು:
* ರಾಜ್ಯ, ನಗರ, ಅಂತಾರಾಷ್ಟ್ರೀಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ ಹೀಗೆ ಆಯಾ ವಿಭಾಗದಲ್ಲಿ ವಿವಿಧ ವೆಬ್ ಸೈಟ್ ಗಳಿಂದ ಸಿಗುವ ಆ ಕ್ಷಣದ ಸುದ್ದಿ ನೀವು ಓದಬಹುದು.
* ಕನ್ನಡ ಪ್ರಭ, ವಿಜಯಕರ್ನಾಟಕ, ವಿಜಯವಾಣಿ, ಅವಧಿ, ಉದಯವಾಣಿ, ಈ ಸಂಜೆ ಅಲ್ಲದೆ ಯೂನಿಕೋಡ್ ಬಳಕೆ ಮಾಡುವ ಯಾವುದೇ ವೆಬ್ ಸೈಟ್ ನ ಸುದ್ದಿಯನ್ನು ಇಲ್ಲೇ ಕಾಣಬಹುದು.
* ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಳಿ, ಮರಾಠಿ, ಗುಜರಾತಿ, ಮಲಯಾಳಂನಲ್ಲಿ ಸದ್ಯಕ್ಕೆ ಅಪ್ಲಿಕೇಷನ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಅಳವಡಿಸಲಾಗುತ್ತಿದೆ.
* ಸುಮಾರು 13 ಎಂಬಿ ತೂಗುವ ಈ ಅಪ್ಲಿಕೇಷನ್ ಅಳವಡಿಸಲು ಐಒಎಸ್ 6.0 ಅಥವಾ ಅದಕ್ಕಿಂತ ಸುಧಾರಿತ ಆಪರೇಟಿಂಗ್ ಸಿಸ್ಟಮ್ ನಿಮ್ಮ ಸಾಧನದಲ್ಲಿರಬೇಕು.
* ಈ ಅಪ್ಲಿಕೇಷನ್ ನಲ್ಲಿ ಓದಿದ ಸುದ್ದಿಯನ್ನು ಎಸ್ ಎಂಎಸ್, ವಾಟ್ಸಪ್, ಇಮೇಲ್, ಫೇಸ್ ಬುಕ್ ಅಥವಾ ಇನ್ನಿತರ ಜಾಲ ತಾಣಗಳಿಗೆ ಸುಲಭವಾಗಿ ಹಂಚಬಹುದು.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ನ್ಯೂಸ್ ಅಂಡ್ ಮ್ಯಾಗಜೀನ್ ವಿಭಾಗದಲ್ಲಿ 60 Seconds Now ಅಪ್ಲಿಕೇಷನ್ ಇದೆ. ಸರ್ಚ್ ಬಾಕ್ಸ್ ನಲ್ಲಿ 60 Seconds Now ಅಥವಾ Oneindia ಎಂದು ಹಾಕಿ ಪಡೆದುಕೊಳ್ಳಬಹುದು. [ಈ ಅಪ್ಲಿಕೇಷನ್ ಆಂಡ್ರಾಯ್ಡ್ ಫೋನಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ](ಒನ್ ಇಂಡಿಯಾ ಸುದ್ದಿ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ













Click it and Unblock the Notifications