ಬೀದಿ ನಾಯಿ ದತ್ತು ಪಡೆವ ಅಭಿಯಾನಕ್ಕೆ ಭಾರೀ ಸ್ಪಂದನೆ
ಬೆಂಗಳೂರು, ಜುಲೈ 11 : ಬೀದಿ ನಾಯಿಗಳೆಂದರೆ ಹಲವರಿಗೆ ತಾತ್ಸಾರ. ಇರಲು ನೆಲೆಯಿಲ್ಲದೆ, ಕಸದ ರಾಶಿ, ಚರಂಡಿ ತೂತಿನಲ್ಲಿ ಮಳೆ ಗಾಳಿ ಚಳಿಯೆನ್ನದೆ, ಸಿಕ್ಕಿದ್ದನ್ನು ತಿಂದು, ಒಂದಕ್ಕೊಂದು ಕಚ್ಚಾಡುತ್ತಾ ಹಗಲು ರಾತ್ರಿಗಳನ್ನು ತಳ್ಳುವ ನಾಯಿಗಳಿಗೂ ಒಂದು ಬದುಕು ಕಲ್ಪಿಸಿಕೊಡಬೇಕು ಎಂದು ಚಿಂತಿಸುವವರು ಕಡಿಮೆಯೆ.
ಇಂಥ ವಾರಸುದಾರರಿಲ್ಲದ ಬೀದಿ ನಾಯಿಗಳಿಗೆ ಒಂದು ನೆಲೆ ಕಲ್ಪಿಸಿಕೊಡಬೇಕು, ಅವುಗಳಿಗೂ ಮಾಲಿಕರ ಪ್ರೀತಿ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಟ್ವಿಟ್ಟರಿನಲ್ಲಿ #BengaluruOptsToAdopt ಎಂಬ ವಿನೂತನ ಅಭಿಯಾನವನ್ನು ಶುರು ಮಾಡಿದ್ದು ಡಾಗ್ಸಿ ಚ್ಯೂ ಎಂಬ ಸಾಕುಪ್ರಾಣಿಗಳಿಗಾಗಿ ಅಂಗಡಿಯನ್ನು ತೆರೆದಿರುವ ಬೆಂಗಳೂರು ಮೂಲದ ಕಂಪನಿ.
ಬರೀ ವಿದೇಶಿ ತಳಿಯ ನಾಯಿಯನ್ನು ಏಕೆ ಹುಡುಕುತ್ತೀರಿ? ದೇಶಿ ನಾಯಿಗಳು ಯಾರಿಗಿಂತ ಕಮ್ಮಿ? ಭಾರತೀಯ ನಾಯಿಗಳನ್ನೂ ದತ್ತು ತೆಗೆದುಕೊಂಡು ಅವುಗಳಿಗೂ ಪ್ರೀತಿ ನೀಡಿ ಎಂದು ನೀಡಿದ ಕರೆಗೆ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಕೇವಲ 5 ಗಂಟೆಗಳಲ್ಲಿ #BengaluruOptsToAdopt ಟ್ವಿಟ್ಟರಲ್ಲಿ ಟ್ರೆಂಡ್ ಆಗಿದ್ದಲ್ಲದೆ, ಹತ್ತು ನಾಯಿಗಳನ್ನು ದತ್ತು ತೆಗೆದುಕೊಂಡ ಮಾಲಿಕರಿಗೆ ಒಪ್ಪಿಸಲಾಯಿತು. [ಬೆಕ್ಕಿನ ಮರಿಗೆ ಹಾಲೂಡಿಸಿ ವಾತ್ಸಲ್ಯ ಮೆರೆದ ಬೀದಿ ನಾಯಿ!]

ಒಂದು ಎನ್ಜಿಓ ಅಥವಾ ಸಾಕುಪ್ರಾಣಿಗಳ ಆಹಾರ ಸಂಸ್ಥೆಯೊಂದು ಸಾಮಾಜಿಕ ತಾಣದಲ್ಲಿ ನಡೆಸಿದ ಅತೀದೊಡ್ಡ ಕ್ಯಾಂಪೇನ್ ಇದು ಎಂಬುದು ಅಭಿಯಾನವನ್ನು ಆಯೋಜಿಸಿದ ಡಾಗ್ಸಿ ಚ್ಯೂ ಕಂಪನಿಯ ಅಭಿಪ್ರಾಯ. ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಟ್ವಿಟ್ಟಿಗರು ಭಾಗವಹಿಸಿ, ನಾಯಿಗಳ ಬಗ್ಗೆ ಅನುಕಂಪ ತೋರಿದ್ದಾರೆ. ಅವರಲ್ಲಿ ಶೇ.67ರಷ್ಟು ಪುರುಷರಾದರೆ, ಶೇ.33ರಷ್ಟು ಮಹಿಳೆಯರು ಎಂಬುದು ವಿಶೇಷ.
ಇದರಲ್ಲಿ ಬೆಂಗಳೂರಿನವರು ಮಾತ್ರವಲ್ಲ, ಹೊರ ರಾಜ್ಯಗಳ ಪ್ರಾಣಿ ಪ್ರೇಮಿಗಳು ಕೂಡ ಭಾಗವಹಿಸಿ, ಶ್ವಾನಗಳ ಬಗ್ಗೆ ಕಾಳಜಿ ತೋರಿದ್ದಾರೆ. ಇವರಲ್ಲಿ ಶೇ.64ರಷ್ಟು ಬೆಂಗಳೂರಿನ ನಾಗರಿಕರಾಗಿದ್ದರೆ, ಶೇ.17ರಷ್ಟು ದೆಹಲಿಯಿಂದ ಮತ್ತು ಶೇ.6ರಷ್ಟು ಪುಣೆ ಮತ್ತು ಮುಂಬಯಿಯಿಂದ ಟ್ವೀಟ್ ಮಾಡಿದ್ದಾರೆ. [ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!]
ಮನುಜನ ಅತ್ಯಂತ ನಿಷ್ಠಾವಂತ ಸ್ನೇಹಿತನನ್ನು ದತ್ತು ತೆಗೆದುಕೊಳ್ಳುವ ಅಭಿಯಾನವನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಲು, ಒಂದು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ನಾಯಿ ಪ್ರೇಮಿಗಳು ತಮ್ಮ ಚಿತ್ರವನ್ನು ಕಳಿಸಬೇಕು. ಅವರ ಚಿತ್ರದೊಂದಿಗೆ ಹೋಲುವಂಥ ಅಥವಾ ಹೊಂದುವಂಥ ಬೀದಿ ನಾಯಿಯ ಚಿತ್ರವನ್ನು ಹುಡುಕಲಾಗುವುದು. ಇದೂ ಕೂಡ ಭಾರೀ ಜನಪ್ರಿಯತೆಯನ್ನು ಗಳಿಸಿತು ಎನ್ನುತ್ತದೆ ಡಾಗ್ಸಿ ಚ್ಯೂ.
ಇದರ ಬಗ್ಗೆ ಪ್ರೀತಿ ವ್ಯಕ್ತಪಡಿಸಿ ಬಾಲಿವುಡ್ ನಾಯಕಿ ಈಶಾ ಗುಪ್ತಾ ಕೂಡ ಟ್ವೀಟ್ ಮಾಡಿದ್ದರು. ಕುಳಿತಲ್ಲಿಂದಲೇ #BengaluruOptsToAdopt ಟ್ವಿಟ್ಟರಲ್ಲಿ ಟ್ರೆಂಡಿಂಗ್ ಆಗುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಅವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. [ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications