ಒಕ್ಕಲಿಗ ಸಮುದಾಯದ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

ಬೆಂಗಳೂರು,

ಅ.
26:
ಕಾಂಗ್ರೆಸ್
ಪಕ್ಷದ
ಅತ್ಯಂತ
ಬಲಿಷ್ಠ
ನಾಯಕ,
ರಾಜ್ಯದ
ಪ್ರಭಾವಿ
ರಾಜಕಾರಣಿ
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್
ಅವರನ್ನು
ಉಪ
ಚುನಾವಣೆಯಲ್ಲಿ
ಒಂದು
ಸಮುದಾಯದ
ನಾಯಕರು
ಟಾರ್ಗೆಟ್
ಮಾಡುತ್ತಿದ್ದಾರಾ?
ಹೌದು
ಎನ್ನುತ್ತಾರೆ
ಸ್ವತಃ
ಡಿಕೆ
ಶಿವಕುಮಾರ್
ಅವರು.
ಬಗ್ಗೆ
ಬೆಂಗಳೂರಿನಲ್ಲಿ
ಮಾತನಾಡಿರುವ
ಅವರು
ಅದಕ್ಕೆ
ಸಾಕ್ಷಿಯನ್ನೂ
ಕೊಟ್ಟಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಬಿಜೆಪಿ

ಕೇಂದ್ರ
ನಾಯಕರನ್ನು
ಎದುರು
ಹಾಕಿಕೊಂಡು
ಕಾಂಗ್ರೆಸ್‌
ಪಕ್ಷದ
ಟ್ರಬಲ್
ಶೂಟರ್
ಎಂದು
ಗುರುತಿಸಿಕೊಂಡಿರುವ
ಡಿಕೆಶಿ
ಅವರೇ
ಇದೀಗ
ಇಂತಹ
ಆರೋಪ
ಮಾಡಿರುವುದು
ಚರ್ಚೆಗೆ
ಗ್ರಾಸವಾಗಿದೆ.
ನನ್ನ
ಜಾತಿ
ಕಾಂಗ್ರೆಸ್,
ನಾನು
ಯಾವುದೇ
ಒಂದು
ಸಮುದಾಯಕ್ಕೆ
ಸೇರಿದವನಲ್ಲ
ಎಂದು
ಡಿಕೆ
ಶಿವಕುಮಾರ್
ಅವರು
ಇತ್ತೀಚೆಗೆ
ಹೇಳಿಕೆ
ಕೊಟ್ಟಿದ್ದರು.
ಅದಾದ
ಬಳಿಕ
ಉಪ
ಚುನಾವಣೆ
ಹಿನ್ನೆಲೆಯಲ್ಲಿ
ಆರ್
ಆರ್
ನಗರದ
ಐಡಿಯಲ್
ಹೋಮ್
ಕಮ್ಯೂನಿಟಿ
ಹಾಲ್‌ನಲ್ಲಿ
ಒಕ್ಕಲಿಗ
ಸಂಘ
ಸಂಸ್ಥೆಗಳ
ಒಕ್ಕೂಟದ
ಸಭೆಯಲ್ಲಿ
ಒಕ್ಕಲಿಗ
ಸಮುದಾಯದ
ಮತಗಳನ್ನು
ಯಾಚಿಸಿದ್ದರು.
ಇದೀಗ
ಒಕ್ಕಲಿಗ
ನಾಯಕರೇ
ತಮ್ಮನ್ನು
ಟಾರ್ಗೆಟ್
ಮಾಡುತ್ತಿದ್ದಾರೆ
ಎಂಬ
ಗಂಭೀರ
ಆರೋಪವನ್ನು
ಮಾಡಿದ್ದಾರೆ.

id='are-slot-2'
class='oiad
oi-axt
oiadv'>

ನನಗೆ ಕಾಂಗ್ರೆಸ್ಸೇ ಜಾತಿ

ನನಗೆ ಕಾಂಗ್ರೆಸ್ಸೇ ಜಾತಿ

ನನಗೆ ಕಾಂಗ್ರೆಸ್ಸೇ ಜಾತಿ. ಆದರೂ ಕೂಡ ಒಂದು ಸಮುದಾಯದ ನಾಯಕರು ನನ್ನನ್ನು ಹೀಗೆ ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿನ ಒಂದು ಸಮುದಾಯದ ನಾಯಕರು ಮಾತ್ರ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ನಾನು ಯಾವ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದೇನೆ? ನನ್ನ ವಿರುದ್ಧ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಇದು ಜಾತಿ ರಾಜಕಾರಣ ಅಲ್ಲವೇ? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

ಒಕ್ಕಲಿಗ ನಾಯಕರಿಂದ ಟಾರ್ಗೆಟ್

ಒಕ್ಕಲಿಗ ನಾಯಕರಿಂದ ಟಾರ್ಗೆಟ್

ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧ ಕೇವಲ ಸದಾನಂದ ಗೌಡ, ಅಶ್ವಥ್ ನಾರಾಯಣ, ಆರ್.ಅಶೋಕ್, ಸಿ.ಟಿ ರವಿ, ಎಸ್.ಟಿ. ಸೋಮಶೇಖರ್ ಇವರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಕೇವಲ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಯಡಿಯೂರಪ್ಪ ಅವರು ಯಾಕೆ ಮಾತನಾಡುತ್ತಿಲ್ಲ. ಎಂದು ಬಿಜೆಪಿ ನಾಯಕರನ್ನು ಕೇಳಿದ್ದಾರೆ.

ಚುನಾವಣಾ ಆಯೋಗ ಬದುಕಿದ್ದರೆ!

ಚುನಾವಣಾ ಆಯೋಗ ಬದುಕಿದ್ದರೆ!

ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮ ಫೋಟೋ ಹಾಕಿಕೊಂಡು ಸೆಟ್‌ಅಪ್ ಬಾಕ್ಸ್ ಹಂಚುತ್ತಿರುವುದನ್ನು ಒಪ್ಪಿಕೊಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಿ. ಬಿಜೆಪಿ ಅಭ್ಯರ್ಥಿ ತಮ್ಮ ಕಂಪನಿ ಹೆಸರಲ್ಲಿ ಸೆಟ್‌ಅಪ್ ಬಾಕ್ಸ್ ಕೊಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ, ಕಾನೂನಿಗೆ ರಕ್ಷಣೆ ಕೊಡುವುದಾದರೆ ತಕ್ಷಣ ಕ್ರಮ ಕೈಗೊಳ್ಳಲಿ ಎಂದರು.

ಈ ವಿಚಾರದಲ್ಲಿ ಯಾರು ದೂರು ನೀಡಬೇಕಾದ ಅಗತ್ಯವಿಲ್ಲ. ಅಭ್ಯರ್ಥಿ ಅದು ನನ್ನ ವ್ಯವಹಾರ ಅಂತಾ ಒಪ್ಪಿಕೊಂಡಿದ್ದಾರೆ. ಅದು ವ್ಯವಹಾರವಾಗಿದ್ದರೆ ತಮ್ಮ ಫೋಟೋ ಹಾಕಿಕೊಂಡು ಕೊಡಲು ನೀತಿ ಸಂಹಿತೆಯಲ್ಲಿ ಅವಕಾಶ ಇಲ್ಲ. ಅವರ ಈ ಹೇಳಿಕೆಯೇ ಅವರು ಕೆಬಲ್ ಸೆಟ್‌ಅಪ್ ಬಾಕ್ಸ್‌ ಕೊಡುತ್ತಿರುವುದು ಸತ್ಯ ಎಂದು ಹೇಳುತ್ತಿದೆ.

ತಕ್ಷಣ ಪ್ರಕರಣ ದಾಖಲಿಸಬೇಕು

ತಕ್ಷಣ ಪ್ರಕರಣ ದಾಖಲಿಸಬೇಕು

ಕೂಡಲೇ ಬಿಜೆಪಿ ಅಭ್ಯರ್ಥಿ ಪರ ಐಪಿಸಿ 171 ಎ, ಬಿ, ಸಿ, ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. 123 ಜನಪ್ರತಿನಿಧಿ ಕಾಯ್ದೆ ಅಡಿಯಲ್ಲೂ ಕಾನೂನಿನ ಕ್ರಮ ಕೈಗೊಳ್ಳಬೇಕು. ಇನ್ನು ಚುನಾವಣಾ ಆಯೋಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕು? ಅದನ್ನು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+