ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತೃಪ್ತಿಯ ಬೆಂಕಿ ಹತ್ತಿದ್ದು ಬೆಳಗಾವಿಯಿಂದ: ಸತೀಶ್ ಜಾರಕಿಹೊಳಿ

|
Google Oneindia Kannada News

ಬೆಂಗಳೂರು, ಜುಲೈ 12: ಅತೃಪ್ತಿಯ ಬೆಂಕಿ ಮೊದಲು ಹೊತ್ತಿಕೊಂಡಿದ್ದು ಬೆಳಗಾವಿಯಲ್ಲಿ, ಈಗ ಅದು ಇಲ್ಲಿಯವರೆಗೆ ಬಂದು ತಲುಪಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಅವರು ಮಾತನಾಡಿದರು.

ಕುಮಾರಣ್ಣನಿಗೇಕೆ ಆಂಧ್ರ ಶೈಲಿಯ ರಾಜಕೀಯ : ಆಪ್ತರೊಬ್ಬರ ಪತ್ರ!ಕುಮಾರಣ್ಣನಿಗೇಕೆ ಆಂಧ್ರ ಶೈಲಿಯ ರಾಜಕೀಯ : ಆಪ್ತರೊಬ್ಬರ ಪತ್ರ!

ರೆಸಾರ್ಟ್‌ಗೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತಿರಿಸಿ, ನಾನು ಯಾವ ರೆಸಾರ್ಟ್‌ಗೂ ಹೋಗುವವನಲ್ಲ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ, ನಮ್ಮ ಹಿರಿಯರೂ ಇದನ್ನೇ ಮಾಡಿದ್ದಾರೆ, ನಾನು ಅದನ್ನೇ ಪಾಲಿಸುತ್ತೇನೆ ಎಂದರು.

Dissidency starts from Belgaum : Satish Jarkiholi

ಸರ್ಕಾರ ಸುಭದ್ರವಾಗಿರುತ್ತದೆ ಎಂಬ ಭರವಸೆ ಸಿಕ್ಕಿದೆ, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಅವರು ಧೈರ್ಯವಾಗಿರುವಂತೆ ಭರವಸೆ ನೀಡಿದ್ದಾರೆ. ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಿಎಂ ರಾಜೀನಾಮೆ ಕೊಡಲಿ: ಅತೃಪ್ತ ಶಾಸಕರ ಒತ್ತಾಯ ಸಿಎಂ ರಾಜೀನಾಮೆ ಕೊಡಲಿ: ಅತೃಪ್ತ ಶಾಸಕರ ಒತ್ತಾಯ

ವಿಶ್ವಾಸಮತ ಯಾಚನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ಮುಂಬೈಗೆ ತೆರಳಿರುವ ಶಾಸಕರು ವಾಪಸ್ ಬರಬಹುದು, ಅವರೇನು ಬಿಜೆಪಿಯವರಲ್ಲ, ಅವರೆಲ್ಲರೂ ನಮ್ಮವರೇ ಅವರೆಲ್ಲರೂ ವಾಪಸ್ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
Minister Satish Jarkiholi said that dissidency starts from Belgaum, now it reached this far. He also said MLAs who were in Mumbai they may come back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X