ಮತ್ತೆ ಎಟಿಎಂಗಳಲ್ಲಿ ಹಣದ ಕೊರತೆ, ಸರಿಹೋಗಲು 20 ದಿನ ಬೇಕಂತೆ!
ಬೆಂಗಳೂರು, ಫೆಬ್ರವರಿ 8: ಮತ್ತೆ ನಗದಿಗಾಗಿ ಪರದಾಟ ಆರಂಭವಾಗಿದೆ. ನೋಟು ನಿಷೇಧದ ನಂತರ ಹಣ ವಿಥ್ ಡ್ರಾ ಮಿತಿಯಲ್ಲಿ ಈಚೆಗಷ್ಟೇ ಸ್ವಲ್ಪ ಮಟ್ಟಿಗೆ ವಿನಾಯಿತಿ ಘೋಷಿಸಲಾಗಿತ್ತು. ಅದರೆ ಎರಡು ದಿನಗಳಿಂದ ಹಲವು ಎಟಿಎಂಗಳಲ್ಲಿ ಹಣವೇ ಇಲ್ಲ. ಕೆಲವು ಎಟಿಎಂಗಳಲ್ಲಿ ಎರಡು ಸಾವಿರ ರುಪಾಯಿ ನೋಟುಗಳು ಮಾತ್ರ ಬರುತ್ತಿವೆ. ಇದರಿಂದ ಮತ್ತೆ ನಗದಿಗೆ ಹಾಹಾಕಾರ ಆಗಿದೆ.
ಚಲಾವಣೆಯಲ್ಲಿ 500, 1000 ರುಪಾಯಿ ನೋಟುಗಳ ಒಟ್ಟು ಮೊತ್ತ 15.44 ಲಕ್ಷ ಕೋಟಿ ರುಪಾಯಿಯನ್ನು ವಾಪಸ್ ಪಡೆಯಲಾಯಿತು. ಆ ನಂತರ ಬ್ಯಾಂಕ್-ಎಟಿಎಂಗಳಲ್ಲಿ ನಗದು ಇಲ್ಲದೆ ಪರದಾಟವಾಯಿತು. ಈಗಲೂ ಎಟಿಎಂಗೆ ಪೂರೈಸುತ್ತಿರುವ ನಗದು ಪ್ರಮಾಣ ಸಾಲುತ್ತಿಲ್ಲ. ನೋಟು ನಿಷೇಧಕ್ಕೆ ಮುನ್ನ ದೇಶದಾದ್ಯಂತ ಇರುವ ಎಟಿಎಂಗಳಿಗೆ ದಿನಕ್ಕೆ ಹದಿಮೂರು ಸಾವಿರ ಕೋಟಿ ಪೂರೈಕೆಯಾಗುತ್ತಿತ್ತು.[ಎಸ್ ಬಿ ಅಕೌಂಟ್ ಹಣ ಡ್ರಾ ನಿರ್ಬಂಧ ಆರ್ ಬಿಐನಿಂದ ಶೀಘ್ರವೇ ವಾಪಸ್]

ಆದರೆ, ಈಗ ಆ ಮೊತ್ತ 12 ಸಾವಿರ ಕೋಟಿ ತೋರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮೊತ್ತ ಡ್ರಾ ಮಾಡುತ್ತಿದ್ದಾರೆ ಮತ್ತು ತಿಂಗಳ ಆರಂಭವಾದ್ದರಿಂದ ವೇತನದಾರರು ತಮ್ಮ ಸಂಬಳ ಪಡೆಯಲು ಬಂದಿರುವುದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಆಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.
ನಾಲ್ಕರಲ್ಲಿ ಒಂದು ಎಟಿಎಂ ಖಾಲಿಯಾಗಿದೆ. ಫೆಬ್ರವರಿ 10ರ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಆರ್ ಬಿಐನಿಂದ ಎಟಿಎಂಗಳಲ್ಲೇ 24 ಸಾವಿರ ಡ್ರಾ ಮಾಡಲು ಅನುವು ಮಾಡಿರುವುದರಿಂದ ಇಂಥ ಸನ್ನಿವೇಶ ನಿರ್ಮಾಣವಾಗಿದೆ. ಕೆಲ ದಿನಗಳಲ್ಲೇ ಇದು ಸರಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಬ್ಯಾಂಕ್ ಅಧಿಕಾರಿಗಳು.[ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ]
ಆದರೆ, ಬ್ಯಾಂಕಿಂಗ್ ವಲಯದಲ್ಲೇ ಕೆಲಸ ಮಾಡುವವರ ಪ್ರಕಾರ: ಈ ಪರಿಸ್ಥಿತಿ ಸುಧಾರಿಸಲು ಕನಿಷ್ಠ 20 ದಿನ ಬೇಕು. ಅದು ಕೂಡ ಎಷ್ಟು ಹಣ ಪೂರೈಕೆ ಆಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ಆದರೆ ಕಳೆದ ನವೆಂಬರ್ ಹಾಗು ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿ ಎಷ್ಟೋ ವಾಸಿ ಎಂಬುದು ವಾಸ್ತವ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications