ಕೇಪ್ಟೌನ್ ರೀತಿಯ ನೀರಿನ ಕೊರತೆ ಬೆಂಗಳೂರು ಎದುರಿಸಲಿದೆಯೇ?ವರದಿ
ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಇದೆ. ಕರ್ನಾಟಕವು ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿ ಸಮಾಧಾನಕರ ತೀರ್ಪನ್ನು ಪಡೆದುಕೊಂಡಿದೆ.
ಆದರೆ, ಈಗ ದೊರಕಿರುವ ವರದಿಯೊಂದು ಬೆಂಗಳೂರನ್ನು ಬೆಚ್ಚಿಬೀಳಿಸುವಂತದ್ದಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಉಂಟಾಗಿರುವ ತೀವ್ರ ಬರಗಾಲದ ಸ್ಥಿತಿ ಎದುರಿಸಬಹುದಾದ ಜಗತ್ತಿನ 10ನಗರಗಳಲ್ಲಿ ಬೆಂಗಳೂರು ಕೂಡ ಇರುವ ಅತಂಕಕಾರಿ ವರದಿಯೊಂದು ಸಿಎಸ್ಇ ಬೆಂಬಲಿತ ಪರಿಸತ ಮ್ಯಾಗಜಿನ್ ನಲ್ಲಿ ಪ್ರಕಟವಾಗಿದೆ.
ಯೋಜಿತವಲ್ಲದ ನಗರೀಕರಣ ಮತ್ತು ಒತ್ತುವರಿಯಿಂದಾಗಿ ಬೆಂಗಳೂರಿನ ಜಲಾಶಯಗಳ ಸಂಖ್ಯೆ ಶೇ.79ರಷ್ಟು ಕಡಿಮೆಯಾಗಿದೆ. ನಾಗರೀಕರಣದ ವ್ಯಾಪ್ತಿ1973ರಲ್ಲಿ ಶೇ.8ರಷ್ಟಿದ್ದುದು ಈಗ ಶೇ.77ರಷ್ಟು ಏರಿಕೆ ಕಂಡಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಸಹಕಾರದಿಂದ ಪ್ರಕಟಿಸಲ್ಪಡುವ ಡೌನ್ ಟು ಅರ್ಥ್ ಮ್ಯಾಗಜಿನ್ ನಲ್ಲಿ ಪ್ರಕಟವಾಗಿದೆ.

ವಿಶ್ವ ಜಲ ದಿನಾಚರಣೆ ಮುನ್ನ ಸಿಎಸ್ಇ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಬೆಂಗಳೂರಿನ ಜಲಪಟ್ಟಿ ಎರಡು ದಶಕಗಳಲ್ಲಿ 10-12 ಮೀಟರ್ ನಿಂದ 76-91 ಮೀಟರ್ ಗೆ ಕುಗ್ಗಿದೆ. 30ವರ್ಷಗಳ ಹಿಂದೆ 5 ಸಾವಿರದಷ್ಟಿದ್ದ ಬಾವಿಗಳ ಸಂಖ್ಯೆ 4.5ಲಕ್ಷಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಜನಸಂಖ್ಯೆ 2031ಕ್ಕೆ 2ಕೋಟಿ ದಾಟುವ ನಿರೀಕ್ಷೆ ಇದೆ. ಪ್ರಸ್ತುತ ವಾರ್ಷಿಕ ಶೇ. 3.5ರಷ್ಟು ಜನಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸಿಎಸಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೇಪ್ ಟೌನ್ ಈ ವರ್ಷದ ಜೂನ್-ಜುಲೈ ನಲ್ಲಿ ಸಂಪೂರ್ಣ ನೀರು ರಹಿತ ಶೂನ್ಯ ದಿನ ಎದುರಿಸಲಿದೆ. ಜಗತ್ತಿನ ಹಲವು ಪ್ರಮುಖ ನಗರಗಳು ಕೆವೇ ವರ್ಷಗಳಲ್ಲಿ ಕೇಪ್ಟೌನ್ ನ ಸ್ಥಿತಿ ಎದುರಿಸಲಿದೆ. ಅದರಲ್ಲೂ 10ನಗರಗಳು ನೀರಿನ ನಳ್ಳಿಗಳು ಸಂಪೂರ್ಣ ನೀರಿಲ್ಲದೇ ಒಣಗಿ ನಿರ್ಮಾಣವಾಗುವ ಶೂನ್ಯ ದಿನದ ಇತರ ನಗರಗಳಾದ ಬೀಜಿಂಗ್, ಮೆಕ್ಸಿಕೊ ಸಿಟಿ, ನೈರೋಬಿ, ಕರಾಚಿ, ಕಾಬೂಲ್, ಇಸ್ತಾಂಬುಲ್ ಕೂಡ ಈ ಹತ್ತು ನಗರಗಳಲ್ಲಿ ಸೇರಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD









Click it and Unblock the Notifications