ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಂ ರೌಂಡಪ್: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ, ಇನ್ನಿತರ ಸುದ್ದಿ

|
Google Oneindia Kannada News

ಬೆಂಗಳೂರು, ನ. 16: ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರ. ಕೌಟುಂಬಿಕ ಕಲಹಕ್ಕೆ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ. ಲೋನ್ ಆಸೆಗೆ ವ್ಯಕ್ತಿಯನ್ನು ಅಪಹರಿಸಿದ್ದ ಮೂವರು ಬಂಧನ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ವಿವಾದ: ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸುವ ವಿಚಾರ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಮಸೀದಿಗಳಲ್ಲಿ ದೊಡ್ಡ ಸದ್ದು ಮಾಡುವ ಧ್ವನಿ ವರ್ಧಕ ಬಳಕೆ ಕುರಿತು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ರಾತ್ರಿ ಹತ್ತು ಗಂಟೆ ವೇಳೆ ಹಾಗೂ ಬೆಳಗ್ಗೆ ಆರು ಗಂಟೆ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಸಮಗ್ರ ವಿವರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಮಸೀದಿಗಳಲ್ಲಿ ಬೆಳಗಿನ ಜಾವ ಧ್ವನಿವರ್ಧಕ ಹಾಕಲಾಗುತ್ತದೆ. ಮಸೀದಿಗಳಲ್ಲಿ ಎಷ್ಟು ಡೆಸಿಬಲ್ ಶಬ್ದದೊಂದಿಗೆ ಧ್ವನಿವರ್ಧಕ ಬಳಕೆ ಕುರಿತು ವಕ್ಫ್ ಮಂಡಳಿ ಆದೇಶ ಹೊರಡಿಸಿದೆ. ಯಾವ ಕಾನೂನು ಅಡಿಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತು ಸರ್ಕಾರ ವಿವರಣೆ ನೀಡಬೇಕು. ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಹೆಚ್ಚಿನ ಶಬ್ದ ಹೊರ ಸೂಸುವ ಸೈಲನ್ಸರ್ ಅಳವಡಿಸುವುದನ್ನು ತಡೆಯಬೇಕು. ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

Bengaluru crime Roundup: police constable suicide in Bengaluru: three kidnappers arrested by Indiranagar police

ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡಲಾಗುತ್ತಿದೆ. ಬೆಳಗಿನ ಜಾವ ಹೆಚ್ಚು ಶಬ್ದ ಬಳಿಸಿ ಧ್ವನಿವರ್ಧಕ ಹಾಕುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲಾಗಿದ್ದು ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಹೊರಡಿಸಿರುವ ಆದೇಶ ಮತ್ತು ಕೈಗೊಂಡಿರುವ ಕ್ರಮ ಕುರಿತು ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

Bengaluru crime Roundup: police constable suicide in Bengaluru: three kidnappers arrested by Indiranagar police

ಪೊಲೀಸ್ ಪೇದೆ ಆತ್ಮಹತ್ಯೆ:

ಕೌಟುಂಬಿಕ ಕಲಹದಿಂದ ಬೇಸತ್ತ ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಗನಾಥ್ ಕುಮಾರ್ ಅತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಪೇದೆ. ಬೆಂಗಳೂರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು. ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಾರಪೇಟೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Bengaluru crime Roundup: police constable suicide in Bengaluru: three kidnappers arrested by Indiranagar police

ಲೋನ್ ಆಸೆಗೆ ವಿದೇಶಿ ಕಿಡ್ನಾಪ್:

ಒಂದು ಕೋಟಿ ರೂ ಲೋನ್ ಆಸೆಗೆ ಬಿದ್ದು ವ್ಯಕ್ತಿಯನ್ನು ಅಪಹರಣ ಮಾಡಿದ್ದ ಮೂವರು ಅರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಉಪೇಂದ್ರ, ನೀಲಮ್ಮ, ಸಮೀರ್ ಬಂಧಿತ ಆರೋಪಿಗಳು. ಕಾಂಗೋದಿಂದ ಬಂದಿದ್ದ ನಾಗರಾಜ್‌ಗೆ ಬಂಧಿತ ಆರೋಪಿ ಉಪೇಂದ್ರ ಪರಿಚಯವಾಗಿದ್ದ. ಲೋನ್‌ಗಾಗಿ ಅಲೆಯುತ್ತಿದ್ದ ನಾಗರಾಜ್‌ಗೆ ಒಂದು ಕೋಟಿ ರೂ. ಲೋನ್ ಕೊಡಿಸುವುದಾಗಿ ಉಪೇಂದ್ರ ಹೇಳಿದ್ದ. ದಾಖಲೆಗಳನ್ನು ನೀಡಿ ನಾಗರಾಜ್ ಕಾಂಗೋಗೆ ತೆರಳಿದ್ದ. ನಾಗರಾಜ್ ಗೆ ಒಂದು ಕೋಟಿ ಲೋನ್ ಕೊಡುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದರು. ಸಾಲ ನೀಡಲು ನಾಗರಾಜ್ ಹೊಂದಿರುವ ಐದು ಲಕ್ಷ ರೂ. ಲೋನ್ ಪಾವತಿಸಲು ಸೂಚಿಸಲಾಗಿತ್ತು. ನಾಗರಾಜ್‌ಗೆ ಲೋನ್‌ನ್ನು ಉಪೇಂದ್ರ ತೀರಿಸಿದ್ದ. ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ನಾಗರಾಜ್ ಭಾರತಕ್ಕೆ ಬಂದಿದ್ದ. ಲೋನ್ ವಿಚಾರಿಸಿದಾಗ ಸಹಿ ಮಾಡಬೇಕಿರುವ ವಿಚಾರ ತಿಳಿಸಿದ್ದಾರೆ. ಲೋನ್ ಪಡೆಯಲು ನಾಗರಾಜ್ ನಿರಾಕರಿಸಿದ್ದು, ಈ ವೇಳೆ ಬಡ್ಡಿ ಸಮೇತ ಹಣ ನೀಡಲು ಉಪೇಂದ್ರ ಸೂಚಿಸಿದ್ದಾನೆ. ಹಣ ನೀಡಲು ನಿಕಾರಿಸಿದಾಗ, ಸಮೀರ್ ಮೂಲಕ ನಾಗರಾಜ್‌ನನ್ನು ಅಪಹರಣ ಮಾಡಿ ಮುದ್ದಯ್ಯನ ಪಾಳ್ಯದ ನೀಲಮ್ಮ ಎಂಬಾಕೆ ಮನೆಯಲ್ಲಿಟ್ಟು ಹಲ್ಲೆ ಮಾಡಿದ್ದಾರೆ. ಬಳಿಕ ನಾಗರಾಜ್ ಖಾತೆಯಲ್ಲಿದ್ದ 4.5 ಲಕ್ಷ ರೂ. ಹಣವನ್ನು ಕಿತ್ತುಕೊಂಡು ಬಿಟ್ಟು ಕಳಿಸಿದ್ದಾರೆ. ನಾಗರಾಜ್ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

English summary
Bengaluru crime Roundup: police constable suicide in Bengaluru: three kidnappers arrested by Indiranagar police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X