ಹೋರಾಟಗಾರರ ದಾಹ ತಣಿಸುತ್ತಿದ್ದ ಪಿಂಟೂ ಪ್ರಕಾಶ್ ಕೋವಿಡ್ಗೆ ಬಲಿ!
ಬೆಂಗಳೂರು, ಮೇ. 22: ಸ್ವಾತಂತ್ರ್ಯ ಉದ್ಯಾನವನ ಪ್ರತಿಭಟಾನಾಕಾರರ ಪಾಲಿಗೆ ತಮ್ಮ ಬಹುಬೇಡಿಕೆ ಈಡೇರಿಸುವ ಹೋರಾಟದ ಕೇಂದ್ರ. ರಾಜ್ಯದ ಮೂಲೆ ಮೂಲೆಯಿಂದಲೂ ಬರುವ ಹೋರಾಟಗಾರರಿಗೆ ಬಾಯಾರಿಕೆ ಆದರೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ಕೊಳಾಯಿ ಕೂಡ ಇಲ್ಲ. ನಡೆದುಕೊಂಡು ಸುಸ್ತಾದ, ಹೋಗಾಟದ ಕೂಗಿನಿಂದ ಬಾಯಾರಿಕೆಯಾದವರಿಗೆ ಕ್ಷಣ ಮಾತ್ರದಲ್ಲಿ ಕುಡಿಯುವ ನೀರು ಒದಗಿಸುತ್ತಿದ್ದ ಬಡಪಾಯಿ ಜೀವ ವಾಟರ್ ಟ್ಯಾಂಕರ್ ಪಿಂಟೂ ಪ್ರಕಾಶ್ ಕೋವಿಡ್ ಗೆ ಬಲಿಯಾಗಿದ್ದಾರೆ. ಇವರ ಅಮೂಲ್ಯ ಸೇವೆಯನ್ನು ಪೊಲೀಸರು ಸ್ಮರಿಸಿಕೊಂಡಿದ್ದಾರೆ.
ರಾಜಧಾನಿ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾರಕ್ಕೆ ಎರಡು ಮೂರು ಹೋರಾಟ ನಡೆಯುವ ಜಾಗ. ಪ್ರತಿಭಟನೆ, ಜಾಥಾ, ಅಮರಣಾಂತ ಉಪವಾಸ ಸತ್ಯಾಗ್ರಹ, ಅನಿರ್ಧಿಷ್ಟ ಅವಧಿ ಮುಷ್ಕರ ನಡೆಯುತ್ತವೆ. ಇನ್ನು ಬಂದೋಬಸ್ತ್ ಗೆಗಾಗಿ ಸಶಸ್ತ್ರ ಮೀಸಲು ಪಡೆ, ಸಂಚಾರ ಪೊಲೀಸರು, ಕಾನೂಣು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮೈ ಸುಡುವ ಬೇಸಿಗೆ ಕಾಲದಲ್ಲಂತೂ ಅಲ್ಲಿ ಬಾಯಾರಿಕೆ ಆದರೆ, ನೀರು ಕುಡಿಯಲು ಅರ್ಧ ಕಿ.ಮೀ ನಷ್ಟು ದೂರ ನಡೆದುಕೊಂಡೇ ಹೋಗಬೇಕು. ಒಂದು ಲೋಟ ಕುಡಿಯುವ ನೀರಿಗೂ ಅಲ್ಲಿ ತಾತ್ವಾರ. ಇದೊಂದು ಸಮಸ್ಯೆ ಹೋರಾಟಗಾರರಿಗೆ ಕುಡಿಯುವ ನೀರು ಸೌಲಭ್ಯ ಮಾಡಬೇಕು ಎಂಬ ಸಣ್ಣ ಜ್ಞಾನ ಸರ್ಕಾರದ ಯಾವ ಇಲಾಖೆಯ ಕಣ್ಣಿಗೂ ಬಿದ್ದಿಲ್ಲ. ಪಿಂಟೂ ಪ್ರಕಾಶ್ ಗೆ ಮಾತ್ರ ಅರಿವು ಇತ್ತು.

ಹೌದು. ಕೊರೊನಾ ಸೊಂಕಿಗೆ ಬಲಿಯಾಗಿರುವ ಬೆಂಗಳೂರು ಜಲ ಮಂಡಳಿ ವಾಟರ್ ಟ್ಯಾಂಕರ್ ಚಾಲಕ ಪಿಂಟೂ ಪ್ರಕಾಶ್ ಹೋರಾಟಗಾರರ ಪಾಲಿಗೆ, ಮುಷ್ಕರಕ್ಕೆ ನಿಯೋಜನೆಗೊಳ್ಳುವ ಪೊಲೀಸರ ದಣಿವಿಗೆ ಸ್ಪಂದಿಸುತ್ತಿದ್ದ ಬಡಪಾಯಿ ಜೀವ. ವಾಟರ್ ಮ್ಯಾನ್ ಪಿಂಟೂ ಅಂತಲೇ ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಹೋರಾಟದ ವೇಳೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಬಡಪಾಯಿ ಜೀವ ಅಳಿಲು ಸೇವೆ ಮಾಡುತ್ತಿತ್ತು. ಸಾವಿರಾರು ಮಂದಿಹ ದಾಹ ತಣಿಸುತ್ತಿದ್ದ ಅಮೂಲ್ಯ ವ್ಯಕ್ತಿತ್ವದ ಮೂಲಕ ಪರಿಚಿತರಾಗಿದ್ದ ಪಿಂಟೂ ಪ್ರಕಾಶ್ ಕೋರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಪಿಂಟೂ ಪ್ರಕಾಶ್ ಅವರ ಸೇವೆಯನ್ನು ಸ್ಮರಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಯಾರ ಕಣ್ಣಿಗೂ ಕಾಣದಂತೆ ಕುಡಿಯುವ ನೀರು ಪೂರೈಸುವ ಮೂಲಕ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಅಳಿಲು ಸೇವೆಯನ್ನು ಕೊಂಡಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Lockdown: ಭಾರತದಲ್ಲಿ ಲಾಕ್ಡೌನ್ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ











Click it and Unblock the Notifications