ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ!
ಬೆಂಗಳೂರು, ಮೇ 19: ನೆಗೆಟಿವ್ ಸುದ್ದಿ ಕೇಳಿ ಕೇಳಿ ಭೀತಿ ಪಡುತ್ತಿದ್ದ ಜನತೆಗೆ ಬೆಂಗಳೂರು ಮಹಾನಗರದಿಂದ ಸ್ವಲ್ಪ ನಿರಾಳವಾಗುವ ಆಶಾದಾಯಕ ಸುದ್ದಿಯೊಂದು ಬಂದಿದೆ.
ಬೆಡ್, ಆಕ್ಸಿಜನ್, ವೆಂಟಿಲೇಟರ್ ಮುಂತಾದ ಕಾರಣಗಳಿಂದ ಬಳಲಿ ಬೆಂಡಾಗಿ ಹೋಗಿದ್ದ ಬೆಂಗಳೂರಿನಲ್ಲಿ ಸತತವಾಗಿ (ಒಂದು ದಿನ ಹೊರತು ಪಡಿಸಿ) ಒಂದು ವಾರದಿಂದ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.
ಟೆಸ್ಟಿಂಗ್ ಪ್ರಮಾಣ ಯಾಕೆ ಕಮ್ಮಿಯಾಗುತ್ತಿದೆ ಎನ್ನುವುದಕ್ಕೆ ಈಗಾಗಲೇ ಬಿಬಿಎಂಪಿ ಆಯುಕ್ತರು ಸ್ಪಷ್ಟನೆಯನ್ನು ನೀಡಿದ್ದಾರೆ. ಲಾಕ್ ಡೌನ್ ಕಾರಣದಿಂದ ಸಾರ್ವಜನಿಕ ಸಾರಿಗೆ ನಿಲ್ದಾಣಗಳಲ್ಲಿ ರ್ಯಾಂಡಮ್ ಆರ್ಟಿಪಿಸಿಆರ್ ಟೆಸ್ಟ್ ಕಮ್ಮಿಯಾಗಿದೆ ಎಂದು ಆಯುಕ್ತರು ಹೇಳಿದ್ದರು.
ಕಳೆದ ಒಂದು ವಾರದ ಆರೋಗ್ಯ ಇಲಾಖೆಯ ಡೇಟಾ ಪ್ರಕಾರ, ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡು ಬಂದಿಲ್ಲ. ಆದರೆ, ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಅಂಕಿಅಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆಯ 31,795 ಜನ ಆಸ್ಪತ್ರೆಯಿಂದ ಬಿಡುಗಡೆ
ಮಂಗಳವಾರ (ಮೇ 19) ಒಂದೇ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆಯ 31,795 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆ ಮೂಲಕ ಮೇ 12-18ರ ಅವಧಿಯಲ್ಲಿ ಬಿಡುಗಡೆಯಾದವರ ಸಂಖ್ಯೆ 1,09,061ಕ್ಕೆ ಏರಿದೆ.
ದಿನಾಂಕ: ಮೇ 12
ಹೊಸ ಕೇಸ್: 16,286
ಬಿಡುಗಡೆಯಾದವರ ಸಂಖ್ಯೆ: 18,089
ಸಕ್ರಿಯ ಪ್ರಕರಣ: 3,60,619

ಗುಣಮುಖರಾದವರ ಸಂಖ್ಯೆ ಹೊಸ ಸೋಂಕಿತರಿಗಿಂತ ಹೆಚ್ಚು
ದಿನಾಂಕ: ಮೇ 13
ಹೊಸ ಕೇಸ್: 15,191
ಬಿಡುಗಡೆಯಾದವರ ಸಂಖ್ಯೆ: 15,191
ಸಕ್ರಿಯ ಪ್ರಕರಣ: 3,59,565
ದಿನಾಂಕ: ಮೇ 14
ಹೊಸ ಕೇಸ್: 14,316
ಬಿಡುಗಡೆಯಾದವರ ಸಂಖ್ಯೆ: 12,898
ಸಕ್ರಿಯ ಪ್ರಕರಣ: 3,60,862

ಬಿಡುಗಡೆಯಾದವರ ಸಂಖ್ಯೆ 1,09,061ಕ್ಕೆ ಏರಿದೆ
ದಿನಾಂಕ: ಮೇ 15
ಹೊಸ ಕೇಸ್: 13,402
ಬಿಡುಗಡೆಯಾದವರ ಸಂಖ್ಯೆ: 7,379
ಸಕ್ರಿಯ ಪ್ರಕರಣ: 3,66,791
ದಿನಾಂಕ: ಮೇ 16
ಹೊಸ ಕೇಸ್: 8,344
ಬಿಡುಗಡೆಯಾದವರ ಸಂಖ್ಯೆ: 13,612
ಸಕ್ರಿಯ ಪ್ರಕರಣ: 3,61,830
Recommended Video

ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ
ದಿನಾಂಕ: ಮೇ 17
ಹೊಸ ಕೇಸ್: 13,338
ಬಿಡುಗಡೆಯಾದವರ ಸಂಖ್ಯೆ: 10,097
ಸಕ್ರಿಯ ಪ್ರಕರಣ: 3,64,382
ದಿನಾಂಕ: ಮೇ 18
ಹೊಸ ಕೇಸ್: 8,676
ಬಿಡುಗಡೆಯಾದವರ ಸಂಖ್ಯೆ: 31,795
ಸಕ್ರಿಯ ಪ್ರಕರಣ: 3,40,965
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ










Click it and Unblock the Notifications