Get Updates
Get notified of breaking news, exclusive insights, and must-see stories!

'ರಾಮಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆಯಾಗುತ್ತಾ?': ವಿವಾದಕ್ಕೆ ಕಾರಣವಾಯ್ತು ಸಂತೋಷ್ ಲಾಡ್ ಪ್ರಶ್ನೆ

ಬೆಂಗಳೂರು, ಫೆಬ್ರವರಿ.20: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆಯಾಗುತ್ತದೆಯೇ ಎಂದು ಪ್ರಶ್ನಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,,ಮಾಜಿ ಡಿಸಿಎಂ ಸಿ.ಎನ್.ಅಶ್ವಥನಾರಾಯಣ್ ಸೇರಿದಂತೆ ಬಿಜೆಪಿ ನಾಯಕರು ಸಂತೋಷ್ ಲಾಡ್ ವಿರುದ್ಧ ಕಿಡಿಕಾರಿದ್ದಾರೆ.

"ರಾಜಕೀಯ ಉದ್ದೇಶದಿಂದ ರಾಮ ಮಂದಿರ ನಿರ್ಮಾಣವಾಗಿದೆ. ರಾಮಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗುವುದಿಲ್ಲ, ಇದು ಅವರ (ಬಿಜೆಪಿ) ರಾಜಕೀಯ ಲಾಭಕ್ಕಾಗಿ ನಿರ್ಮಿಸಲಾಗಿದೆ. ಅದರಲ್ಲೂ ದೇವಾಲಯ ನಿರ್ಮಿಸುತ್ತಿರುವ ಸ್ಥಳವು ಸುಪ್ರೀಂ ಕೋರ್ಟ್ ಸೂಚಿಸಿದ ಸ್ಥಳದಿಂದ ದೂರದಲ್ಲಿದೆ" ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

Construction of Ram Mandir will not eradicate poverty Says Labour Minister Santosh Lad

"ರಾಮಮಂದಿರ ನಿರ್ಮಾಣಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ, ಮಂದಿರ ನಿರ್ಮಾಣ ಮಾಡಿರುವ ಸ್ಥಳ ಸರಿಯಾಗಿಲ್ಲ, ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ನಿರ್ಮಾಣ ಮಾಡಿಲ್ಲ. ಇನ್ನು, ಶೇಕಡಾ 40ರಷ್ಟು ಮಾತ್ರ ನಿರ್ಮಾಣ ಮಾಡಿದ್ದಾರೆ. ಆದರೆ, ರಾಮಮಂದಿರ ನಿರ್ಮಾಣವು ಬಡತನ ನಿರ್ಮೂಲನೆಗೆ ದಾರಿ ಮಾಡಿಕೊಟ್ಟಿದೆಯೇ ಅಥವಾ ರೈತರಿಗೆ ಏನಾದರೂ ಪ್ರಯೋಜನವನ್ನು ತಂದಿದೆಯೇ..?" ಎಂದು ಪ್ರಶ್ನೆ ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಬೇಕು ಎಂದು ಮತ್ತೆ ಪ್ರತಿಭಟನೆ ಮಾಡುವ ನಿರ್ಧಾರ ಮಾಡಿರುವ ರೈತರ ಕಡೆಗೆ ಸರ್ಕಾರ ಗಮನ ಸೆಳೆದ ಅವರು, ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸರ್ಕಾರದ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. " ರಾಮಮಂದಿರದಿಂದ ನಿಮಗೇನು ಲಾಭ, ನಮ್ಮ ಸಹೋದರಿಯರಿಗೆ ಏನು ಲಾಭ..? ಬಿಜೆಪಿಯವರು ಮಂದಿರದ ಆಧಾರದ ಮೇಲೆ ಮತ ಕೇಳುತ್ತಿರುವುದು ಏಕೆ..? ರೈತರಿಗೆ ಲಾಭವಾಗಿದೆಯೇ..? ಅವರಿಗೆ ಲಾಭವಾಗಿದ್ದರೆ, ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ..? ಬುಲ್ಡೋಜರ್‌ಗಳು ಏಕೆ..? ಮತ್ಯಾಕೆ ರೈತರ ವಿರುದ್ಧ ಅಶ್ರುವಾಯು ಬಳಸಲಾಗುತ್ತದೆಯೇ..? " ಎಂದು ಸರಣಿ ಪ್ರಶ್ನೆಗಳನ್ನು ಮಾಡಿದ್ದಾರೆ.

ಸಂತೋಷ್ ಲಾಡ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಇನ್ನು, ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಮಂದಿರ ನಿರ್ಮಾಣವಾಗುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಮ ಮಂದಿರವನ್ನು ನಿರ್ಮಿಸಿದ ಸ್ಥಳವು 500 ವರ್ಷಗಳ ಹಿಂದೆ ರಾಮಲಲ್ಲಾ (ಅಭಯಾರಣ್ಯ) ಇದ್ದ ಸ್ಥಳವಾಗಿದೆ. ಇದೆಲ್ಲವನ್ನು ಖಚಿತಪಡಿಸಿಕೊಳ್ಳಲು ಸಂತೋಷ್ ಲಾಡ್ 500 ವರ್ಷಗಳ ಹಿಂದೆ ಹುಟ್ಟಿದ್ದಲ್ಲ. ಅವರಿಗೆ ರಾಜ್ಯದಲ್ಲಿ ಸಾಕಷ್ಟು ವಿಷಯಗಳಿವೆ. ಹಾಗಾಗಿ ಅವರು ಆ ವಿಷಯಗಳತ್ತ ಗಮನ ಹರಿಸಬೇಕು" ಎಂದು ಟೀಕಿಸಿದ್ದಾರೆ.

Construction of Ram Mandir will not eradicate poverty Says Labour Minister Santosh Lad

ಸಂತೋಷ್ ಲಾಡ್ ಹೇಳಿಕೆಯನ್ನು ಖಂಡಿಸಿದ ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವಥನಾರಾಯಣ್, ''ಸಂತೋಷ್ ಲಾಡ್ ಅವರಿಗೆ ರಾಮಮಂದಿರದ ಇತಿಹಾಸ ತಿಳಿದಿರಬೇಕು, ಮಂದಿರ ನಿರ್ಮಾಣವಾಗಬೇಕು ಎಂದು ಜನರು ಕಾಯುತ್ತಿದ್ದರು, ಜನರು ಸಂತೋಷವಾಗಿದ್ದಾರೆ, ರಾಜಕೀಯ ಮಾತನಾಡುವ ಬದಲು ಸಂತೋಷ್ ಲಾಡ್ ವಾಸ್ತವವನ್ನು ಮಾತನಾಡಬೇಕು, ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದಿದ್ದಾರೆ.

ಇತ್ತ ಕರ್ನಾಟಕ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ಸಂತೋಷ್ ಲಾಡ್ ಹೇಳಿಕೆಗಳನ್ನು ಬೆಂಬಲಿಸಿದ್ದಾರೆ. "ಸತ್ಯ ಮಾತನಾಡುವುದರಲ್ಲಿ ತಪ್ಪೇನು..? ರಾಮಮಂದಿರ ಮತ್ತು ಇತರ ಭಾವನಾತ್ಮಕ ವಿಷಯಗಳನ್ನು ಬಿಜೆಪಿ ಹಲವು ಕಾರಣಗಳಿಗಾಗಿ ಬಳಸುತ್ತಿದೆ. ಚುನಾವಣೆ ಪ್ರಚಾರಕ್ಕೆ ಅವರ ಬಳಿ ಯಾವುದೇ ಅಭಿವೃದ್ಧಿ ವಿಷಯಗಳು ಇಲ್ಲದ ಕಾರಣ ಅವರು ಭಾವನಾತ್ಮಕ ವಿಷಯಗಳನ್ನು ಮಾತ್ರ ಬಳಸಿಕೊಳ್ಳುತ್ತಾರೆ ಎಂಬುದು ಕಟುಸತ್ಯ" ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+