ಸಮನ್ವಿತಾ- ಚಿತ್ರಹಾರ್- ಅವಿಸ್ಮರಣೀಯ ಗೀತೆಗಳ ಪ್ರಸ್ತುತಿ
ಬೆಂಗಳೂರು, ಜೂನ್ 15:"ಚಿತ್ರಹಾರ್-2", ಇದು 1960, 70, 80 ಮತ್ತು 90ರ ಹಿಂದಿ ಚಲನ ಚಿತ್ರಗೀತೆಗಳ ಸುಂದರ ಸಂಗೀತ ಸಂಜೆ. ಈ ಸಂಗೀತ ಸಂಜೆಯನ್ನು ರಾಮಚಂದ್ರ ಗ್ರಾಮೀಣ ವಿದ್ಯಾ ವಿಕಾಸ ಕೇಂದ್ರ ಟ್ರಸ್ಟ್ ರವರ ಸಹಾಯಾರ್ಥವಾಗಿ ಏರ್ಪಡಿಸಲಾಗಿದೆ.
ಈ ಸಂಗೀತ ಸಂಜೆಯಲ್ಲಿ ಹಿಂದಿ ಚಲನಚಿತ್ರದ ಸುಪ್ರಸಿದ್ಧ ಗಾಯಕರ ಪ್ರಖ್ಯಾತ ಹಾಗೂ ಅವಿಸ್ಮರಣೀಯ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. 'ಮುಜ್ರಾ' ದಿಂದ ಹಿಡಿದು ವೇಗದ ಗತಿಯ ಗೀತೆಗಳು ಸೇರಿದಂತೆ ಹಲವು ವಿಧದ ಚಿರಸ್ಮರಣೀಯ ಸುಪ್ರಸಿದ್ಧ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.
ಕಾರ್ಯಕ್ರಮ : ಚಿತ್ರ ಹಾರ್ -2
ದಿನಾಂಕ : 17/06/2016
ಸ್ಥಳ: ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ಸಮಯ: ಸಂಜೆ 6 ಗಂಟೆ ನಂತರ
ಹೆಚ್ಚಿನ ಮಾಹಿತಿಗೆ ಭೇಟಿ ಕೋಡಿ: ಟಾಕ್ ಆಫ್ ಟೌನ್.ಇನ್ talkofthetown.in/
ಸಂಪರ್ಕಿಸಿ : 80959 04455

ಈ ಕಾರ್ಯಕ್ರಮದ ರೂವಾರಿ ಹಾಗೂ ಮುಖ್ಯ ಗಾಯಕಿಯಾದ ಸಮನ್ವಿತ ಶರ್ಮ ರವರು ಬೆಂಗಳೂರಿನ ಸಾಂಸ್ಕ್ರತಿಕ ವಲಯದಲ್ಲಿ ಒಬ್ಬ ಪ್ರತಿಷ್ಠಿತ, ಸುಪ್ರಸಿದ್ಧ ಹಾಗೂ ಹೆಸರಾಂತ ಗಾಯಕಿ. ಇವರು ಕನ್ನಡ ಚಲನಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿದ್ದು ಇತ್ತೀಚಿನ ಚಿತ್ರ "ಜೆಸ್ಸಿ" ಯಲ್ಲಿನ 'ಮಳೆ ಬಂತು' ಈ ಸುಪ್ರಸಿದ್ಧ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.
ಹಲವಾರು ಕಲೆಗಳಲ್ಲಿ ಪರಿಣತಿ ಹೊಂದಿರುವ ಇವರು ಗಾಯಕಿಯಾಗಿ, ನಿರೂಪಕಿಯಾಗಿ, ಶಾಸ್ತ್ರೀಯ ನೃತ್ಯಗಾರ್ತಿಯಾಗಿ, ಸಂಗೀತ ಸಂಯೋಜಕಿಯಾಗಿ ಹಾಗೂ ಒಬ್ಬ ಕಲಾ ಉದ್ಯಮಿಯಾಗಿ ಲೋಕಪ್ರಿಯರಾಗಿರುವರು.
ಈ ಉತ್ಸಾಹಪೂರ್ಣ ಸಂಗೀತ ಸಂಜೆಯಲ್ಲಿ ಪಾಲ್ಗೊಳ್ಳುವ ಇತರ ಗಾಯಕ ಗಾಯಕಿಯರು - ಹ್ಯಾರಿಸ್ ಕಾರೊತ್, ಸುಬ್ರತ್ ಸಾಹೂ, ಅನಿಕೇತ್ ಪ್ರಭು, ಗೋವಿಂದ್ ಕರ್ನೂಲ್ ಹಾಗೂ ರೋಹಿಣಿ ಪ್ರಭುನಂದನ್.
ಮುಂಬೈನ ಹೆಸರಾಂತ ಕೀಬೋರ್ಡ್ ವಾದಕರಾದ ಪ್ರದೀಪ್ ಪಟ್ಕರ್ ರವರ ತಂಡದವರ ಪೂರ್ಣ ಪ್ರಮಾಣದ ವಾದ್ಯವ್ರಂದ ಹೊಂದಿರುತ್ತದೆ. ಸಮರ್ಥವಾದ ಸಂಗೀತ ಹಾಗೂ ಕಲಾವಿದರ ಮಿಶ್ರಣವನ್ನು ಹೊಂದಿರುವ ಈ ಕಾರ್ಯಕ್ರಮವು ಬೆಂಗಳೂರಿನ ಬಾಲಿವುಡ್ ಸಂಗೀತಪ್ರೇಮಿಗಳಿಗೆ ಒಂದು ಸಂಗೀತ ರಸದೌತಣ ನೀಡುವುದರಲ್ಲಿ ಸಂದೇಹವಿಲ್ಲ.
-
ಪತಿಯ ಧುರಂಧರ್-2 ಸಿನಿಮಾ ಪ್ರದರ್ಶನಕ್ಕೆ ಗೈರು, ಪೋಸ್ಟ್ ಕೂಡ ಹಂಚಿಕೊಳ್ಳದ ದೀಪಿಕಾ ಪಡುಕೋಣೆ: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Ramya: 'ಧುರಂಧರ್-2' ನೋಡಿ ಹಣ, ಸಮಯ ವ್ಯರ್ಥ ಮಾಡಬೇಡಿ: ನಟಿ ರಮ್ಯಾ ಪೋಸ್ಟ್ -
ಪ್ರೇಮ್ ಬರೆದ ಹಾಡು ಅಕ್ಷರ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ: ಅರುಣ್ ಜೋಳದಕೂಡ್ಲಿಗಿ ಬರಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ











Click it and Unblock the Notifications