ಇಡಿ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಕೋರ್ಟ್ ಜಾಮೀನು, ಬಿಗ್ ರಿಲೀಫ್
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಜೈಲು ಸೇರಿದ್ದ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಹೊಸ ವರ್ಷ 2026 ಮುನ್ನ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಮಂಗಳವಾರ (ಡಿಸೆಂಬರ್ 30) ಆದೇಶ ಹೊರಡಿಸಿದೆ.
ಅಕ್ರಮವಾಗಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ನಗದು, ವಿದೇಶಿ ಹಣ, ಚಿನ್ನಾಭರಣವ ವಶಕ್ಕೆ ಪಡೆಯಲಾಗಿತ್ತು. ನಂತರ ವಿರೇಂದ್ರ ಪಪ್ಪಿಯ ಬಂಧನವಾಗಿತ್ತು. ಅಲ್ಲಿಂದ ಈವರೆಗೆ ಜೈಲಿನಲ್ಲಿದ್ದ ಪಪ್ಪಿಗೆ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ಮಂಜು ಮಾಡಿದೆ. ಇದರಿಂದ ಅವರ ನಾಲ್ಕು ತಿಂಗಳ ಜೈಲು ವಾಸ ಅಂತ್ಯಗೊಂಡಿದೆ.

ಅಪಾರ ಹಣ ವರ್ಗಾವಣೆ ಪತ್ತೆ: ದಾಳಿಯಲ್ಲಿ 55 ಕೋಟಿ ರೂ. ಜಪ್ತಿ
ಶಾಸಕ ವಿರೇಂದ್ರ ಪಪ್ಪಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 55 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದಿತ್ತು. ನಗದು ಸೇರಿ ಅಪಾರ ಸಂಪತ್ತು ಪತ್ತೆ ಆಗಿತ್ತು. ಪ್ರಕರಣ ಸಂಬಂಧಿ ಪೊಲೀಸರು ಪಪ್ಪಿಯನ್ನು ಬಂಧಿಸಿದ್ದರು.
ಇಡಿ ಅಧಿಕಾರಿಗಳು ಒಂಬತ್ತು ಬ್ಯಾಂಕ್ಗಳ ಖಾತೆಗಳು, 260ಕ್ಕು ಅಧಿಕ ಮ್ಯೂಲ್ ಖಾತೆಗಳಲ್ಲಿನ (ಒಟ್ಟು 55 ಕೋಟಿ ರೂ) ನಗದನ್ನು ಜಪ್ತಿ ಮಾಡಿದರು. ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದರು. ಐದು ಐಶಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದರು.
ಬೆಲ್ಲಾಜಿಯೋ ಕ್ಯಾಸಿನೊ, ಮರೀನಾ ಕ್ಯಾಸಿನೊ, ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಕ್ಯಾಸಿನೋ ಜುವೆಲ್ ಹೀಗೆ ಹಲವು ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ ಹೊಂದಿದ್ದರೆಂದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ವಿವಿಧ ಬ್ಯಾಂಕ್ಗಳಲ್ಲಿ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿತ್ತು. ಐಶಾರಾಮಿ ಆತಿಥ್ಯ ವಹಿಸುತ್ತಿದ್ದರು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ಗಳ ಬಳಕೆ, ಆರ್ಥಿಕ ವ್ಯವಹಾರಗಳು, ಅಕ್ರಮ ಹಣ ವರ್ಗಾವಣೆಯ ಎಲ್ಲ ಮಾಹಿತಿ ಸಂಗ್ರಹಿಸಿ ಇಡಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದರು. ಅಲ್ಲಿಂದ ವೀರೇಂದ್ರ ಪಪ್ಪಿಗೆ ಜೈಲು ಗತಿಯಾಗಿತ್ತು. ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪಪ್ಪಿ ಅರ್ಜಿ ನಿರಂತರ ವಿಚಾರಣೆ ನಡೆದು ಇವತ್ತು ಕೋರ್ಟ್ ಜಾಮೀನು ಮಂಜೂರು ಮಾಡಿದೆ.
-
Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಅಲ್ಪ ಇಳಿಕೆ: ಐಎಂಡಿ -
ಫೆಬ್ರವರಿ 2ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold: ಬೆಂಗಳೂರು ಸಮೀಪವೇ ಮತ್ತೊಂದು ಕೆಜಿಎಫ್? ಗುಡಿಬಂಡೆ, ಕದಿರಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಗೆ ಹೆಲಿಕಾಪ್ಟರ್ ಸಮೀಕ್ಷೆ -
Property Row: ಒಂದೇ ಸೈಟ್ ಇಬ್ಬರ ಹೆಸರಿನಲ್ಲಿ: ಮೋಸ ಮಾಡಿದವ್ರನ್ನ ಇಂಡಿಯಾಗೆ ತೋರಿಸ್ತೀನಿ ಎಂದ ನಟ ಯಶ್ ತಾಯಿ -
Proud Farmer: ಲಗ್ನ ಪತ್ರಿಕೆಯಲ್ಲಿ ಹೆಮ್ಮೆಯ ರೈತ ಎಂದು ಬರೆದುಕೊಂಡ ತುಮಕೂರಿನ ಕೆ.ಎನ್. ತೇಜೇಶ್ಕುಮಾರ್ -
Rishab Shetty remuneration: ಕಾಂತಾರ ಚಾಪ್ಟರ್-1 ಬಳಿಕ ನಟ ರಿಷಬ್ ಶೆಟ್ಟಿ ಸಂಭಾವನೆ ಭಾರೀ ಹೆಚ್ಚಳ: ವರದಿ -
ಕನಕಪುರ ರಸ್ತೆ: ಜಲಮಂಡಳಿಯ ತೆರೆದ ಪೈಪ್ಲೈನ್ ಚೇಂಬರ್ಗೆ ಬಿದ್ದು ವಿದ್ಯಾರ್ಥಿ ಸಾವು -
Rashmika Mandanna wedding: ರಶ್ಮಿಕಾ ಮಂದಣ್ಣ ಮದುವೆ ದಿನಾಂಕ ಬದಲಾವಣೆ, ಇದೇ ತಿಂಗಳಲ್ಲೇ ಮುಹೂರ್ತ: ವರದಿ -
ಗುವಾಹಾಟಿ: ಒಡಿಶಾ ಪರಬ್ 2026 ಸಮಾಪ್ತಿ: ಈಶಾನ್ಯ ಭಾರತದೊಂದಿಗೆ ಸಾಂಸ್ಕೃತಿಕ, ಪ್ರವಾಸೋದ್ಯಮ, ವ್ಯಾಪಾರ ಬಾಂಧವ್ಯ ಬಲ -
ತಂಬಾಕು ಮೇಲಿನ ಶೇ18ರಷ್ಟು ಅಬಕಾರಿ ಸುಂಕಕ್ಕೆ ಬ್ರೇಕ್: ಕರ್ನಾಟಕದ ಬೆಳೆಗಾರರು ನಿರಾಳ -
DK Shivakumar Tweet: ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್ -
Modi-Trump: ಅಮೆರಿಕ - ಭಾರತ ತೆರಿಗೆ ಸಮರಕ್ಕೆ ಬ್ರೇಕ್: ಸುಂಕ ಶೇ 18ರಷ್ಟು ಇಳಿಕೆ, ಗೆಳಯನೊಂದಿಗೆ ಮಾತನಾಡಿದೆ ಮೋದಿ ಟ್ವೀಟ್










Click it and Unblock the Notifications