Chennai-Bengaluru Expressway: ಈ ಮಾರ್ಗದಲ್ಲಿ ಹೊಸ ಬೈಪಾಸ್ ಕಾಮಗಾರಿ ಆರಂಭ- ಎಷ್ಟು ಕೋಟಿ? ಮಾಹಿತಿ, ವಿವರ
ಬೆಂಗಳೂರು, ಫೆಬ್ರವರಿ, 05: ಚೆನ್ನೈ-ಬೆಂಗಳೂರು ಹೆದ್ದಾರಿಯಿಂದ (ಎನ್ಎಚ್ 44) ವೆಲ್ಲೂರಿನಲ್ಲಿ ಪಾಲಾರ್ ನದಿಗೆ ಅಡ್ಡಲಾಗಿ ಉನ್ನತ ಮಟ್ಟದ ಸೇತುವೆಯನ್ನು ಒಳಗೊಂಡಂತೆ ಹೊಸ ಬೈಪಾಸ್ ನಿರ್ಮಾಣದ ಪ್ರಾಥಮಿಕ ಕೆಲಸ ಪ್ರಾರಂಭಿಸಲಾಗಿದ್ದು, ಇದರಿಂದ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಲಿದೆ. ಹಾಗಾದರೆ ಈ ಬೈಪಾಸ್ಗೆ ತಗಲುವ ವೆಚ್ಚ ಎಷ್ಟು ಕೋಟಿ ಗೊತ್ತಾ ಇಲ್ಲಿದೆ ಮಾಹಿತಿ.
ಹೊಸ ಬೈಪಾಸ್ ನಾಲ್ಕು ಪಥದ ಮಾರ್ಗವಾಗಲಿದ್ದು, ವೆಲ್ಲೂರು ಕಾರ್ಪೊರೇಷನ್ ವ್ಯಾಪ್ತಿಯ ಸಾತುವಚಾರಿ ಹೆದ್ದಾರಿಯ ಸರ್ವೀಸ್ ಲೇನ್ ಅನ್ನು ಒಂದು ಕಡೆ ಮತ್ತು ಕಾಂಗೇಯನಲ್ಲೂರು ಗ್ರಾಮಕ್ಕೆ ಸಂಪರ್ಕಿಸುವ 3 ಕಿಲೋ ಮೀಟರ್ ಕಟಪಾಡಿ ಪ್ರದೇಶದ ವಿಐಟಿ ಬಳಿ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆ ವಿಭಾಗವು ಈ ಕೆಲಸವನ್ನು ಮಾಡುತ್ತಿದೆ.

ಕಾಮಗಾರಿಯು ಪಾಲಾರ್ಗೆ ಅಡ್ಡಲಾಗಿ ಹೊಸ ಉನ್ನತ ಮಟ್ಟದ ಸೇತುವೆಯನ್ನು ಸಹ ಒಳಗೊಂಡಿದೆ. ಬೈಪಾಸ್ನ ಮಧ್ಯಭಾಗದಲ್ಲಿ ಇದನ್ನು ನಿರ್ಮಿಸಲಾಗುವುದು. "ನಾವು ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ (70,775 ಚ.ಮೀ) ಮರಗಳನ್ನು ತೆರವುಗೊಳಿಸುವ ಆರಂಭಿಕ ಕೆಲಸವನ್ನು ಪ್ರಾರಂಭಿಸಿದ್ದೇವೆ. ಬೈಪಾಸ್ ಮತ್ತು ಸೇತುವೆ 2025ರ ಅಂತ್ಯದ ವೇಳೆಗೆ ಸಿದ್ಧವಾಗಲಿದೆ," ಎಂದು ಹೆದ್ದಾರಿ ಇಲಾಖೆಯ ಸಹಾಯಕ ಇಂಜಿನಿಯರ್ ಆರ್.ಪೂವರಸನ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ
ಯೋಜನೆಯಂತೆ 24 ತಿಂಗಳಲ್ಲಿ ₹90 ಕೋಟಿ ವೆಚ್ಚದಲ್ಲಿ ಬೈಪಾಸ್ ರಚನೆ ಆಗಲಿದೆ. ಬೈಪಾಸ್ನ ನಾಲ್ಕು ಪಥದ ಕ್ಯಾರೇಜ್ವೇ 2.5 ಮೀಟರ್ ಮೀಡಿಯನ್ ಸೇರಿದಂತೆ 15 ಮೀಟರ್ ಅಗಲವಾಗಿರುತ್ತದೆ. ದ್ವಿಪಥ ಮತ್ತು ಏಕಮುಖ ಮಾರ್ಗವಾಗಿರುವ ಕಟಪಾಡಿ ಮೇಲ್ಸೇತುವೆಗಿಂತ ಹೆಚ್ಚಿನ ವಾಹನಗಳು ಈ ಮಾರ್ಗವನ್ನು ಬಳಸುವಂತೆ ಈ ವಿಸ್ತರಣೆಯು ಸಹಾಯ ಮಾಡುತ್ತದೆ. ಅಂದಾಜಿನ ಪ್ರಕಾರ, ಒಮ್ಮೆ ಪೂರ್ಣಗೊಂಡ ನಂತರ, ಹೊಸ ಬೈಪಾಸ್ ವಿಸ್ತರಣೆಯಾದರೆ, ಇಲ್ಲಿ ಪ್ರತಿದಿನ ಕನಿಷ್ಠ 17,250 ವಾಹನಗಳು ಸಂಚರಿಸಬಹುದಾಗಿದೆ.
475 ಮೀಟರ್ ಉದ್ದ 15 ಮೀಟರ್ ಅಗಲವಿರುವ ನಾಲ್ಕು ಪಥದ ಹೊಸ ಸೇತುವೆಯು ಪಾಲಾರ್ ನದಿಗೆ ಅಡ್ಡಲಾಗಿ ಕನಿಷ್ಠ 19 ಕಂಬಗಳನ್ನು ಹೊಂದಿರುತ್ತದೆ. ಸೇತುವೆಯು 2009 ರಲ್ಲಿ ನಿರ್ಮಿಸಲಾದ ಅಸ್ತಿತ್ವದಲ್ಲಿರುವ ಕಟಪಾಡಿ ಮೇಲ್ಸೇತುವೆಗಿಂತ ಕನಿಷ್ಠ ಮೂರು ಮೀಟರ್ ಎತ್ತರದಲ್ಲಿದೆ, ಅದರ ರಚನೆಗೆ ಯಾವುದೇ ಹಾನಿಯಾಗದಂತೆ ಮತ್ತು ಅದರ ಕ್ಯಾರೇಜ್ವೇಗೆ ಮುಳುಗುವುದನ್ನು ತಡೆಯುತ್ತದೆ. ಅಂದರೆ, ಬತ್ತಿದ ನದಿ ಪಾತ್ರದಿಂದ 20 ಅಡಿ ಎತ್ತರದಲ್ಲಿ ಸೇತುವೆ ನಿರ್ಮಾಣವಾಗಲಿದೆ.












Click it and Unblock the Notifications