ದರೋಡೆಗೆ ಹೊಂಚು ಹಾಕಿದ್ದ 6 ಮಂದಿ ಸೆರೆ ಸಿಕ್ಕಿದ್ದು ಹೇಗೆ ಗೊತ್ತಾ?
ಬೆಂಗಳೂರು, ಆಗಸ್ಟ್ 1: ದರೋಡೆಗೆ ಹೊಂಚು ಹಾಕಿದ್ದ ಆರು ಮಂದಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಆರೋಪಿಗಳು ಕೆ. ಆರ್. ಪುರಂ ಠಾಣಾ ವ್ಯಾಪ್ತಿಯ ಐಟಿಐ ಬಸ್ ಡಿಪೋ ರಸ್ತೆ ಬದಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದಾರಿಯಲ್ಲಿ ಬರುವವರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇರುವ ನಗದು- ಚಿನ್ನಾಭರಣ ದೋಚಲು ತಯಾರಾಗಿದ್ದರು.
ಕೊತ್ತನೂರು ದೊಡ್ಡ ಗುಬ್ಬಿಯ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ ಪ್ರತಾಪ್ ಎಚ್ ಕೆ (38) ಕೆ. ಆರ್ . ಪುರ ದೇವಸಂದ್ರ ಲಿಟ್ಲ್ ಬ್ಲೂಮ್ ಶಾಲೆ ಹತ್ತಿರದ ರೈಲ್ವೆ ಕಾಲೋನಿಯ ನಿವಾಸಿ ಪಿ . ಹರೀಶ್ (31) ದೇವಸಂದ್ರ ಮಸೀದಿ ರಸ್ತೆಯ ಲಕ್ಷ್ಮಿ ನರಸಿಂಹ ನಿಲಯ ನಿವಾಸಿ ನದೀಂ (26) ದೇವಸಂದ್ರದ ಅಭಿಷೇಕ್ ( 23) ಹಾಗೂ ಶಿವ (24) ಜೆ. ಸಿ. ಲೇಔಟ್ ನ ಸುಮನ್ (26) ಬಂಧಿತ ಆರೋಪಿಗಳು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.












Click it and Unblock the Notifications