ಮನೆ ಕೆಲಸದ ನೌಕರಿಗೂ ಅಂಟಿದ ಧರ್ಮಕಾರಣ, ಜಾತಿ ಕಾರಣ!
ಬೆಂಗಳೂರು, ಜ. 10: ನಗರದಲ್ಲಿ ಮನೆಗೆಲಸ ಗಿಟ್ಟಿಸಲು ಜಾತಿ-ಧರ್ಮ ಹಾಗೂ ಭಾಷೆಯೇ ಪ್ರಮುಖ ಮಾನದಂಡ! ಬೆಂಗಳೂರಿನಲ್ಲಿ ಶೇ. 70ರಷ್ಟು ಜನ ಜಾತಿಯ ಆಧಾರದಲ್ಲಿ ಮನೆಗೆಲಸ ಗಿಟ್ಟಿಸಿದ್ದಾರೆ. ಶೇ. 11.3ರಷ್ಟು ಜನರಿಗೆ ಭಾಷೆಯ ಕಾರಣದಿಂದ ಕೆಲಸ ದೊರಕಿಲ್ಲ.
ಇದು ಶ್ರೀ ಅಲಂಪಳ್ಳಿ ವೆಂಕಟರಾಮ ಕಾರ್ಮಿಕರ ಸಂಶೋಧನಾ ಅಧ್ಯಯನ ಪೀಠ ನಡೆಸಿದ ಸಮೀಕ್ಷೆಯ ಸಾರಾಂಶ. ಸಮೀಕ್ಷೆಗಾಗಿ ಸುಮಾರು ಒಂದು ಸಾವಿರ ಮನೆಗೆಲಸಗಾರರನ್ನು ಪ್ರಶ್ನೆಗೊಳಪಡಿಸಿದೆ. [ಸೌದಿಯಿಂದ ಭಾರತೀಯ ಮನೆಗೆಲಸದವರಿಗೆ ಗುಡ್ ನ್ಯೂಸ್]
ಶೇ. 34.2 ರಷ್ಟು ಜನರು ಮೇಲ್ಜಾತಿಯವರಲ್ಲ ಎಂಬ ಕಾರಣದಿಂದ ಮನೆಗೆಲಸದಿಂದ ವಂಚಿತರಾಗಿದ್ದರೆ, ಶೇ. 14.5ರಷ್ಟು ಜನ ಧರ್ಮದ ಕಾರಣದಿಂದ ಮನೆಗೆಲಸದಿಂದ ವಂಚಿತರಾಗಿದ್ದಾರೆ. ಶೇ. 1ರಷ್ಟು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ.

ಇಷ್ಟೇ ಅಲ್ಲ. ಶೇ. 70ರಷ್ಟು ಕೆಲಸಗಾರರು ಕೂಡ ಮನೆ ಮಾಲೀಕರ ಜಾತಿ ಕುರಿತು ತಿಳಿಯಲು ಆಸಕ್ತರಾಗಿದ್ದಾರೆ. ಇನ್ನು ಶೇ. 15.3ರಷ್ಟು ಜನರಿಗೆ ಈ ಕುರಿತು ಆಸಕ್ತಿ ಇಲ್ಲ. ಕೆಲಸಗಾರರನ್ನು ತೀವ್ರವಾಗಿ ಪರಿಶೀಲನೆ ಮಾಡುವವರ ಸಂಖ್ಯೆ ಶೇ. 84ರಷ್ಟಿದೆ. ಶೇ. 21.5ರಷ್ಟು ಮಾಲೀಕರು ಕೆಲಸಗಾರರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ಶೇ. 5.8ರಷ್ಟು ಕೆಲಸಗಾರರಿಗೆ ಮಾಲೀಕರ ಮನೆಯಲ್ಲಿ ಆಹಾರ ನೀಡುವುದಿಲ್ಲ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. [ಮನೆಯೊಡತಿಯಿಂದ ಕೆಲಸದಾಕೆಯ ಮಗು ಮಾರಾಟ]
ಕನಿಷ್ಠ ವೇತನ ಜಾರಿಗೊಳಿಸಿ : ಸಮೀಕ್ಷೆಯಲ್ಲಿ ಮನೆಗೆಲಸದವರಿಗೆ ಕನಿಷ್ಠ ಕೂಲಿ ನಿಗದಿಪಡಿಸಬೇಕೆಂದು ಸೂಚಿಸಲಾಗಿದೆ. ಅವರಿಗೆ ಶಿಕ್ಷಣ ಒದಗಿಸಬೇಕು, ವಲಸೆ ಬರುವವರನ್ನು ತಪ್ಪಿಸಬೇಕು, ಮನೆಗೆಲಸದ ಮಹಿಳೆಯ ಪತಿ ಮದ್ಯವ್ಯಸನಿಯಾಗಿದ್ದರೆ ಅದರಿಂದ ಮುಕ್ತಗೊಳಿಸಬೇಕು. [ಈ ಮನೆಗೆಲಸದವರನ್ನು ನೇಮಿಸುವ ಮುನ್ನ ಯೋಚಿಸಿ]
ಸಮೀಕ್ಷೆಯ ವರದಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ಬಿಡುಗಡೆ ಮಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ತಿಮ್ಮೇಗೌಡ, ಸಭಾಪತಿ ಶಂಕರಮೂರ್ತಿ, ಸೀತಮ್ಮ ಇತರರು ಪಾಲ್ಗೊಂಡಿದ್ದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications