ಮಾನಸಿಕ ಸ್ವಾಸ್ತ್ಯ ಕಾಪಾಡಲು ದೇಶದಲ್ಲಿ 23 ಟೆಲಿ ಸೆಂಟರ್: ನಿಮ್ಹಾನ್ಸ್- ಐಐಐಟಿಬಿ ಆಧಾರಸ್ತಂಭ
ಬೆಂಗಳೂರು, ಫೆ. 03: ದೇಶದಲ್ಲಿ ಪ್ರತಿ ಹತ್ತು ಮಂದಿಯಲ್ಲಿ ಒಬ್ಬ ಮನೋರೋಗಕ್ಕೆಒಳಗಾಗುತ್ತಿದ್ದಾರೆ. ಭಾರತದಲ್ಲಿ ಮನೋರೋಗ ಶಮನಕ್ಕೆ ಬೆಂಗಳೂರಿನ ಎರಡು ಸಂಸ್ಥೆಗಳೇ ಆಧಾರ ಸ್ತಂಭ ಎಂಬ ಅಚ್ಚರಿ ಸಂಗತಿ ಹೊರ ಬಿದ್ದಿದೆ.
ಅವುಗಳಲ್ಲಿ ಒಂದು ನಿಮ್ಹಾನ್ಸ್ ಸಂಸ್ಥೆ. ಮತ್ತೊಂದು ಬೆಂಗಳೂರಿನ ಐಐಐಟಿಬಿ ಸಂಸ್ಥೆ. ಬೆಂಗಳೂರಿನ ಐಐಐಟಿಬಿ ಒದಗಸಲಿರುವ ತಂತ್ರಜ್ಞಾನ ಹಾಗೂ ಬೆಂಗಳೂರಿನ ನಿಮ್ಹಾನ್ಸ ಸಂಸ್ಥೆ ಕಾರ್ಯ ಯೋಜನೆಯೇ ದೇಶದಲ್ಲಿ ಆರಂಭವಾಗಲಿರುವ 23 ಮಾನಸಿಕ ರೋಗ ನಿವಾರಣೆ ಟೆಲಿ ಮೆಡಿಸಿನ್ ಸೆಂಟರ್ಗಳಿಗೆ ಮೂಲಾಧಾರವಾಗಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.
ಭಾರತದಲ್ಲಿ ಮನೋರೋಗದಿಂದ ಬಳಲುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಹತ್ತು ಭಾರತೀಯರಲ್ಲಿ ಒಬ್ಬ ಮಾನಸಿಕ ರೋಗದಿಂದ ಬಳಲುತ್ಗಿದ್ದಾರೆ ಎನ್ನುತ್ತವೆ ಅಧ್ಯಯನ ವರದಿಗಳು. ಭಾರತದ ಮಾನಸಿಕ ಸ್ವಾಸ್ತ ಕಾಪಾಡಲು ಕೇಂದ್ರ ಸರ್ಕಾರ ದೇಶದಾದ್ಯಂತ 23 ಮನೋರೋಗ ನಿವಾರಕ ಟೆಲಿ ಸೆಂಟರ್ ಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಪ್ರಕಟಿಸಿದ್ದರು. ಅವರೇ ಉಲ್ಲೇಖಿಸಿದಂತೆ ಬೆಂಗಳೂರಿನ ನಿಮ್ಹಾನ್ಸ್ಮತ್ತು ಐಐಐಟಿಬಿ ನೆರವಿನಿಂದ ರೂಪಿಸಲಾದ ಯೋಜನೆಯಂತೆ ಈ ಸೆಂಟರ್ಗಳು ಕಾರ್ಯ ನಿರ್ವಹಿಸಲಿವೆ ಎಂಬ ಸಂಗತಿಯನ್ನು ಸಹ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಆರಂಭವಾಗಲಿರುವ 23 ಮೆಂಟಲ್ ಹೆಲ್ತ ಕೇರ್ ಟೆಲಿ ಮೆಡಿಸನ್ ಸೆಂಟರ್ಗಳಿಗೆ ನಿಮಾನ್ಸ್ ರೂಪಿಸಿರುವ ಕಾರ್ಯ ಯೋಜನೆಗೆ ಐಐಟಿಬಿ ತಾಂತ್ರಿಕ ಸೇವೆ ಒದಗಿಸಲಿದೆ. ನಿಮ್ಹಾನ್ಸ್ ಮತ್ತು ಐಐಐಟಿಬಿ ಜಂಟಿಯಾಗಿ ರೂಪಿಸಿರುವ ಯೋಜನೆ ಅನ್ವಯ ದೇಶದ 23 ಮೆಂಟಲ್ ಹೆಲ್ತ ಟೆಲಿ ಸರ್ವೀಸ್ ಸೆಂಟರ್ ಗಳು ಕಾರ್ಯ ನಿರ್ವಹಿಸಲಿವೆ ಬಗ್ಗೆ ಪ್ರೊಫೆಸರ್ ಶ್ರೀಕಾಂತ್ ತಿಳಿಸಿದ್ದಾರೆ.

ದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ 23 ಮೆಂಟಲ್ ಹೆಲ್ತ್ ಟೆಲಿ ಸರ್ವೀಸ್ ಸೆಂಟರ್ಗಳಿಗೆ ತಂತ್ರಜ್ಞಾನವನ್ನು ಐಐಐಟಿಬಿ ಒದಗಿಸುತ್ತಿದೆ. ಇನ್ನು ಯಾವ ರೀತಿ ರೋಗಿಗಳಿಗೆ ಆಪ್ತ ಸಮಾಲೋಚನೆ ನಡೆಸಲಿದೆ ಎಂಬುದನ್ನು ನಿಮ್ಹಾನ್ಸ್ ಕಾರ್ಯಯೋಜನೆ ರೂಪಿಸಿ ನಿಮ್ಹಾನ್ಸ್ ಮತ್ತು ಐಐಐಟಿಬಿಯ ನೆರವಿನಿಂದ ಈ ಮನೋರೋಗ ನಿವಾರಕ ಟೆಲಿ ಸರ್ವೀಸ್ ಸೆಂಟರ್ಗಳು ಕಾರ್ಯ ನಿರ್ವಹಿಸಲಿವೆ ಎಂದು ಐಐಟಿಬಿ ಇ ಹೆಲ್ತ್ ಸಂಶೋಧನಾ ಕೇಂದ್ರದ ಪ್ರೊಫೆಸರ್ ಟಿ.ಕೆ. ಶ್ರೀಕಾಂತ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ 23 ಮಾನಸಿಕ ಹೆಲ್ತ್ ಕೇರ್ ಟೆಲಿ ಹೆಲ್ತ್ ಸರ್ವೀಸ್ ಸೆಂಟರ್ಗಳನ್ನು ಪ್ರಾರಂಭಿಸಿದ್ದು, ಅದಕ್ಕೆ ಬೇಕಾದ ಸಿಬ್ಬಂದಿ, ಕಾರ್ಯ ನಿರ್ವಹಣೆ ನಿಮ್ಹಾನ್ಸ್ ಮಾಡಲಿದೆ. ಸ್ಥಳೀಯ ಭಾಷೆಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಈ 23 ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನ, ಸಾಫ್ಟ್ ವೇರ್ ಗಳನ್ನು ಐಐಐಟಿಬಿ ಒದಗಿಸಲಿದೆ. ಈ ಮೂಲಕ ದೇಶ ಎದುರಿಸುತ್ತಿರುವ ಮಾನಸಿಕ ಖಿನ್ನತೆ ಕಾಯಿಲೆಗೆ ತಂತ್ರಜ್ಞಾನ ನೆರವನ್ನು ಐಐಐಟಿಬಿ ಒದಗಿಸಲಿದೆ ಎಂದು ಪ್ರೊಫೆಸರ್ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.

ನಿಮ್ಹಾನ್ಸ್ ಮತ್ತು ಐಐಐಟಿಬಿ ಜಂಟಿಯಾಗಿ ಕಳೆದ ಒಂಭತ್ತು ವರ್ಷದಿಂದ ಮಾನಸಿಕ ಖಿನ್ನತೆ ನಿವಾರಣೆ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾನಸಿಕ ಖಿನ್ನತೆ ನಿವಾರಣೆ ಸಂಬಂಧ ಕರ್ನಾಟಕ ಸರ್ಕಾರ ಇ - ಮಾನಸ ಜಾರಿಗೆ ತಂದಿದೆ. ಮಾನಸಿಕ ಖಿನ್ನತೆಗೆ ಒಗಾಗುವ ರೋಗಿಗಳ ಡಾಟಾ ನಿರ್ವಹಣೆ, ವೈದ್ಯರ ವಿವರ ಮತ್ತಿತರ ದಾಖಲೆಗಳನ್ನು ಒದಗಿಸವ ಸಂಬಂಧ ಇ ಮಾನಸ ತಂತ್ರಜ್ಞಾನವನ್ನು ಐಐಐಟಿಬಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಅದೇ ರೀತಿ ರಾಷ್ಟ್ರ ಮಟ್ಟದಲ್ಲಿ ಪ್ರಾರಂಭವಾಗಲಿರುವ ಮಾನಸಿಕ ಖಿನ್ನತೆ ಟೆಲಿ ಹೆಲ್ತ್ ಸರ್ವೀಸ್ ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನವನ್ನು ಐಐಐಟಿಬಿ ಒದಗಿಸಲಿದೆ. ವೈದ್ಯರ ಆಪ್ತ ಸಮಾಲೋಚನೆ, ವಿಡಿಯೋ ಅಪ್ತ ಸಮಾಲೋಚನೆ, ರೋಗಿಗಳ ದಾಖಲಾತಿ ಸಂಗ್ರಹ, ಡಾಟಾ ನಿರ್ವಹಣೆ ಸೇರಿದಂತೆ ಅಗತ್ಯ ತಾಂತ್ರಿಕ ನೆರವನ್ನು ಐಐಐಟಿ ಒದಗಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮನೋರೋಗಕ್ಕೆ ಮದ್ದಿಲ್ಲ. ಮನೋ ವೈದ್ಯರ ಆಪ್ತ ಸಲಹೆ ಅಗತ್ಯ. ಎಲ್ಲರಿಗೂ ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ರೋಗಿಗಳ ಅವಶ್ಯಕತೆಗೆ ತಕ್ಕಂತೆ ಅವರಿಗೆ ಆಪ್ತ ಸಮಾಲೋಚನೆ, ಚಿಕಿತ್ಸೆ, ಮನೋವೈದ್ಯರ ವಿವರ ಒದಗಿಸುವ ಸಂಬಂಧ ಸಮಗ್ರ ತಂತ್ರಜ್ಞಾನವನ್ನು ಐಐಐಟಿಬಿ ಅಭಿವೃದ್ಧಿ ಪಡಿಸಲಿದೆ. ದೇಶ ಎದುರಿಸುತ್ತಿರುವ ಮಾನಸಿಕ ಖಿನನೆ ಬೆಂಗಳೂರಿನಲ್ಲಿರುವ ಐಐಐಟಿಬಿ ಹಾಗೂ ನಿಮ್ಹಾನ್ಸ್ ಸಹಾಯದಿಂದ ದೇಶದಲ್ಲಿ ಮಾನಸಿಕ ಖಿನ್ನತೆ ನಿಯಂತ್ರಣಕ್ಕೆ ಅಳಿಲು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಪ್ರೊಫೇಸರ್ ಶ್ರೀಕಾಂತ್ ಸಂತಸ ವ್ಯಕ್ತಪಡಿಸಿದರು.
ಇನ್ನು ಬೆಂಗಳೂರಿನಲ್ಲಿರುವ ಐಐಐಟಿಬಿ ವಿಶ್ವ ವಿದ್ಯಾಲಯ ಖಾಸಗಿ ವಿಶ್ವ ವಿದ್ಯಾಲಯಗಳ ಪೈಕಿ ದೇಶದ ನಂಬರ್ ಒನ್ ಪಟ್ಟ ಗಳಿಸಿದೆ. 2021 ರಲ್ಲಿ ಎ+ ರ್ಯಾಂಕ್ ಪಡೆದ ಹೆಗ್ಗಳಿಕೆಗೆ ಐಐಐಟಿಬಿ ಪಾತ್ರವಾಗಿದೆ. ಸಮಾಜದ ಪ್ರತಿಯೊಬ್ಬ ಪ್ರಜೆಗೆ ಮಾಹಿತಿ ತಂತ್ರಜ್ಞಾನದ ನೆರವು ತಲುಪುವಂತೆ ಮಾಡುವ ಉದ್ದೇಶ ಈ ಸಂಸ್ಥೆಯದ್ದು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications