ಬೆಂಗಳೂರು, ಮೈಸೂರಿನ ಶಾಲೆಯಲ್ಲಿ ಬೋಂಜೊರ್ ಇಂಡಿಯಾ ಫ್ರೆಂಚ್ ಹಬ್ಬ
ಬೆಂಗಳೂರು, ನವೆಂಬರ್ 18: ಇದೇ ತಿಂಗಳ 17ರಿಂದ ಬೋಂಜೊರ್ ಇಂಡಿಯಾ ಅಂತರಶಾಲೆ ಫ್ರೆಂಚ್ ಹಬ್ಬ ಆರಂಭವಾಗಿದ್ದು, ನವೆಂಬರ್ 25ರ ವರೆಗೆ ಬೆಂಗಳೂರು ನಗರವೂ ಸೇರಿದಂತೆ ದೇಶದಾದ್ಯಂತ ನಡೆಯಲಿದೆ. ದೇಶದಾದ್ಯಂತ ಇರುವ ಎಂಬತ್ತು ಶಾಲೆಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಭಾರತ ಹಾಗೂ ಫ್ರಾನ್ಸ್ ಮಧ್ಯದ ಸಂಬಂಧ ವೃದ್ಧಿ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದ ಥೀಮ್ ಭಾರತದಲ್ಲಿ ಫ್ರಾನ್ಸ್ ಹಾಗೂ ಫ್ರಾನ್ಸ್ ನಲ್ಲಿ ಭಾರತ ಎಂಬುದಾಗಿದೆ. ಈ ಫ್ರೆಂಚ್ ಹಬ್ಬದಲ್ಲಿ ಹದಿಮೂರರಿಂದ ಹದಿನೆಂಟು ವರ್ಷದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹಸಿರು ಬೆಳೆಸಲು ಪ್ರೋತ್ಸಾಹ, ಔಷಧ, ಹೆಸರಾಂತ ವ್ಯಕ್ತಿಗಳು, ಬರವಣಿಗೆ, ವಾಸ್ತುಶಿಲ್ಪ, ಮಾಧ್ಯಮ, ಸಂಗೀತ, ಕ್ರೀಡೆ, ನಾಟಕ, ಎಂಜಿನಿಯರಿಂಗ್ ಮತ್ತು ಆಹಾರ ಪದ್ಧತಿ ಸೇರಿದಂತೆ ವಿವಿಧ ವಿಷಯಗಳ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

"ಯಾವುದೇ ದೇಶದ ಭವಿಷ್ಯ ರೂಪಿಸುವವರು ವಿದ್ಯಾರ್ಥಿಗಳು. ಆ ಕಾರಣಕ್ಕೆ ಬೊಂಜೊರ್ ಇಂಡಿಯಾದಲ್ಲಿ ಯುವ ಮನಸ್ಸುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ" ಎಂದು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿರುವ ಡಾ.ಬರ್ಟ್ರೆಂಡ್ ಡಿ ಹಾರ್ಟಿಂಗ್ ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಹೇಳಿದ್ದಾರೆ.

ಬೊಂಜೊರ್ ಇಂಡಿಯಾ ಕಾರ್ಯಕ್ರಮವು ನವೆಂಬರ್ ನಿಂದ ಆರಂಭವಾಗಿದ್ದು, ಮುಂದಿನ ಫೆಬ್ರವರಿವರೆಗೆ ನಡೆಯಲಿದೆ. ಇಪ್ಪತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮೂವತ್ಮೂರು ನಗರಗಳಲ್ಲಿ ನೂರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಓಕ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಶರಣ್ಯಾ ನಾರಾಯಣಿ ಇಂಟರ್ ನ್ಯಾಷನಲ್ ಶಾಲೆ, ಮೈಸೂರಿನ ಫೀನಿಕ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications