ನಮ್ಮ ಮೆಟ್ರೋ ಉತ್ತೇಜನ-ಟ್ರಾಫಿಕ್ ಕಡಿಮೆಗಾಗಿ ಸಾರಿಗೆ ನೀತಿ ಬದಲಾಯಿಸಿ: BMRCL
ಬೆಂಗಳೂರು, ಅಕ್ಟೋಬರ್ 13: ನಮ್ಮ ಮೆಟ್ರೋ ಸಾರಿಗೆ ಪ್ರಯಾಣಿಕರನ್ನು ಉತ್ತಜಿಸುವ ಮೂಲಕ ನಗರದ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರಿಗೆ ನೀತಿಯಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಬಿಎಂಆರ್ಸಿಎಲ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲು ಶೇರ್ ಆಟೋಗಳಿಗೆ ಅನುಮತಿ ನೀಡುವ ಜೊತೆಗೆ ನಗರದಲ್ಲಿ ಕಾರ್ಯಾಚರಣೆಯಲ್ಲಿ ಬಿಎಂಟಿಸಿಗೆ ನೀಡಲಾದ ಏಕಸ್ವಾಮ್ಯವನ್ನು ಬದಲಾಯಿಸುವಂತೆ ಮನವಿ ಮಾಡಿದೆ.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರು ಉಪಕ್ರಮ ಸಂಬಂಧ ಸರ್ಕಾರ ಮತ್ತು ಪೊಲೀಸ್ ಇಲಾಖೆಗಳ ಪ್ರಸ್ತುತ ಮತ್ತು ಹಿಂದಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಇಂತದ್ದೊಂದು ಮನವಿಯನ್ನು ಬಿಎಂಆರ್ಸಿಎಲ್ ಸರ್ಕಾರಕ್ಕೆ ಮಾಡಿದೆ ಎಂದು TNIE ವರದಿ ಮಾಡಿದೆ.
ಸದ್ಯ ನಗರದಲ್ಲಿ ಸಾರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿ ನೀತಿ ತುಂಬ ಹಳೆಯದಾಗಿದೆ. ಹೀಗಾಗಿ ಅದನ್ನು ಅಗತ್ಯತೆಗೆ ಅನುಗುಣವಾಗಿ ಬದಲಾಯಿಬೇಕಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಗಮನ ಸೆಳೆದಿದ್ದಾರೆ.
ಶೇರ್ ಆಟೋಗಳಿಗೆ ಅನುಮತಿ ನೀಡಿ
ನಗರದದಲ್ಲಿನ ಪ್ರತಿ ಮೆಟ್ರೋ ನಿಲ್ದಾಣದ 2 ಕಿಮೀ ವ್ಯಾಪ್ತಿಯಲ್ಲಿ ಶೇರ್ ಆಟೋಗಳಿಗೆ ಅನುಮತಿ ನೀಡಬೇಕಿದೆ. ಈ ವ್ಯವಸ್ಥೆಗೆ ಅನುಮತಿ ನೀಡದೇ ಹಾಲಿ ನೀತಿ ಬದಲಾವಣೆ ಮಾಡದೇ ಒಂದಷ್ಟು ಸಮಸ್ಯೆಗಳು ಆಗಿವೆ. ಕೇವಲ ಮೆಟ್ರೋ ನಿಲ್ದಾಣಗಳ ಸುತ್ತ ಮುತ್ತ ಶೇರ್ ಆಟೋಗಳಿಗೆ ಅನುಮತಿ ನೀಡಬೇಕಿದೆ.
ಅತ್ಯಂತ ಕಡಿಮೆ ಬೆಲೆಯ ಆಟೋ ಪ್ರಯಾಣ ದರ ಇದಾಗುವುದರಿಂದ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ಮೈಲಿ ಸಂಪರ್ಕವನ್ನು ಸುಲಭ ತಲುಪಲು ಸಾಧ್ಯವಾಗುತ್ತದೆ. ವೈಟ್ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣದ ಸಂಪರ್ಕವನ್ನು ನಗರದ ಉಳಿದ ಭಾಗಗಳೊಂದಿಗೆ ಸ್ಥಾಪಿಸಲಾಗಿದೆ. ಪ್ರಸ್ತುತ ಬಿಎಂಟಿಸಿ ಮಾತ್ರ ಹೊಂದಿರುವ ಸ್ಟೇಜ್ ಕ್ಯಾರೇಜ್ ಪರವಾನಗಿಯನ್ನು ನಿಜವಾದ ಅಗತ್ಯವಿರುವ ಕೆಲವು ಖಾಸಗಿ ವ್ಯಕ್ತಿಗಳಿಗೆ ವಿಸ್ತರಿಸಬೇಕು ಎಂದು BMRCL ಒತ್ತಾಯಿಸಿದೆ.

ಸಾರಿಗೆ ನೀತಿಯಲ್ಲಿ ಮಾರ್ಪಾಡು ಅಗತ್ಯ
ಪ್ರಸ್ತುತ, ಇತರ ನಿರ್ವಾಹಕರು ಕೇವಲ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆಗಳನ್ನು ಹೊಂದಿದ್ದಾರೆ ಅಂದರೆ ಅವರು ಖಾಸಗಿ ಸಂಸ್ಥೆಗಳ ಬಸ್ಗಳು ಮಾಡುವಂತೆ ಪಾಯಿಂಟ್ ಟು ಪಾಯಿಂಟ್ ಮಾತ್ರ ಕಾರ್ಯ ನಿರ್ವಹಿಸಬಹುದು. ಇದಕ್ಕೆ ಸಾರಿಗೆ ನೀತಿಯಲ್ಲಿಯೂ ಮಾರ್ಪಾಡು ಅಗತ್ಯವಿದೆ. ಇದನ್ನು ಅನುಮತಿಸಿದರೆ, ಐಟಿ ಸಂಸ್ಥೆಗಳ ಗುಂಪು ಒಟ್ಟಾಗಿ ಬಸ್ ಅನ್ನು ನಿರ್ವಹಿಸಬಹುದು ಮತ್ತು ಸಾರ್ವಜನಿಕರು ಇಳಿಯಲು ಅಥವಾ ಹತ್ತಲು ಅಗತ್ಯವಿರುವ ಕಚೇರಿಗಳಲ್ಲಿ ನಿಲ್ಲಬಹುದು, ಎಂದು ಅವರು ವಿವರಿಸಿದರು. BMRCLಗೆ ವೈಟ್ಫೀಲ್ಡ್ನಲ್ಲಿರುವ ಕಂಪನಿಗಳಿಂದ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳು ಇವೆ.
ಕೊನೆ ಮೆಟ್ರೋ ನಿಲ್ದಾಣ ಬಳಿ ಬಸ್ ನಿಲುಗಡೆಗೆ ವ್ಯವಸ್ಥೆ
ಮೆಟ್ರೋ ಜಾಲದ ಅಂತ್ಯಗೊಳ್ಳುವ ನಿಲ್ದಾಣಗಳ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ಗಳು ನಿಲುಗಡೆ ಮಾಡಲು ಹಾಗೂ ಅವುಗಳ ನಗರ ಪ್ರವೇಶಿಸದಂತೆ ತಡೆಯಲು ಸದ್ಯ ನಾಲ್ಕು ನಿಲ್ದಾಣಗಳ ಬಳಿ ವ್ಯವಸ್ಥೆ ಮಾಡುವ ಯೋಜನೆ ಇದೆ. ಈ ಸಂಬಂಧ 10 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಡಿಕೆ ಶಿವಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಹೀಗೆ ಮೆಟ್ರೋ ನಿಲ್ದಾಣಗಳ ಬಳಿ ksrtc ಬಸ್ ನಿಲುಗಡೆ ಆದರೆ ಅಲ್ಲಿಂದ ಬಿಎಂಟಿಸಿ ಬಸ್ಸುಗಳ ಮೂಲಕ ಪ್ರಯಾಣಿಕರುನಗರದ ಒಳಕ್ಕೆ ಸಂಚರಿಸಬಹದಾಗಿದೆ. ಇದರ ಜೊತೆಗೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಅನ್ನು ಒದಗಿಸಬಹುದು. ಹೀಗೆ ಮಾಡಿದಲ್ಲಿ ಮಟ್ರೋ ಸಾರಿಗೆಗೆ ಉತ್ತೇಜನ ಸಿಗುತ್ತದೆ ಎಂದು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮವಾಗಬೇಕಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications