ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಆರ್. ಸಂತೋಷ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ!

ಬೆಂಗಳೂರು,

ಅ.
12:
ಅಚ್ಚರಿ
ಎಂಬಂತೆ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಅವರಿಗೆ
ರಾಜಕೀಯ
ಕಾರ್ಯದರ್ಶಿಯಾಗಿ
ನೇಮಕವಾದ
ಎನ್.
ಆರ್.
ಸಂತೋಷ್
ಅವರ
ವಿರುದ್ಧ
ಬಿಜೆಪಿಯಲ್ಲಿಯೇ
ಅಸಮಾಧಾನ
ಭುಗಿಲೆದ್ದಿದೆ.
ರಾಜ್ಯದಲ್ಲಿ
ಮೈತ್ರಿ
ಸರ್ಕಾರ
ಪತನವಾಗಿ
ಬಿಜೆಪಿ
ಸರ್ಕಾರ
ಅಸ್ತಿತ್ವಕ್ಕೆ
ಬರುವಲ್ಲಿ
ಎನ್.ಆರ್.
ಸಂತೋಷ್
ಅವರ
ಪಾತ್ರ
ಬಹುದೊಡ್ಡದು
ಎನ್ನಲಾಗಿತ್ತು.
ಹೀಗಾಗಿಯೇ
ರಾಜ್ಯದಲ್ಲಿ
ಬಿ.ಎಸ್.
ಯಡಿಯೂರಪ್ಪ
ಅವರ
ನೇತೃತ್ವದ
ಸರ್ಕಾರ
ಅಸ್ತಿತ್ವಕ್ಕೆ
ಬಂದ
ಮೇಲೆ
ಸಂಪುಟ
ದರ್ಜೆ
ಸ್ಥಾನಮಾನ
ಹೊಂದಿರುವ
ಮುಖ್ಯಮಂತ್ರಿಗಳ
ರಾಜಕೀಯ
ಕಾರ್ಯದರ್ಶಿ
ಹುದ್ದೆ
ಅವರಿಗೆ
ಒಲಿದು
ಬಂದಿತ್ತು.

id="toptextpromo">
id='are-slot-1'
class='oiad
oi-axt
oiadv'>

ಇದು

ಬಿಜೆಪಿಯಲ್ಲಿನ
ಹಿರಿಯ
ಶಾಸಕರ
ಅಸಮಾಧಾನಕ್ಕೂ
ಕಾರಣವಾಗಿತ್ತು.
ಅದೆಲ್ಲವೂ
ತಣ್ಣಗಾಯ್ತು
ಎನ್ನುತ್ತಿರುವಾಗಲೇ
ಇದೀಗ
ಎನ್.
ಆರ್.
ಸಂತೋಷ್
ವಿರುದ್ಧ
ಬೆಂಗಳೂರಿನ
ಮಲ್ಲೇಶ್ವರದ
ರಾಜ್ಯ
ಬಿಜೆಪಿ
ಕಚೇರಿ
ಎದುರು
ಬೃಹತ್
ಪ್ರತಿಭಟನೆ
ನಡೆದಿದೆ.

id='are-slot-2'
class='oiad
oi-axt
oiadv'>

ಗೋ ಬ್ಯಾಕ್ ಸಂತೋಷ್!

ಗೋ ಬ್ಯಾಕ್ ಸಂತೋಷ್!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿ ಹಾಗೂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಗೋ ಬ್ಯಾಕ್ ಅಂತಾ ಪ್ರತಿಭಟನೆ ಶುರುವಾಗಿದೆ. ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅರಸೀಕೆರೆಯಿಂದ ಬಂದಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಅಲ್ಲಿನ ನಗರ ಯೋಜನೆ ಪ್ರಾಧಿಕಾರಕ್ಕೆ ಎನ್.ಡಿ. ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುಕ್ಕೆ ವಿರೋಧ ವ್ಯಕ್ತಪಡಿಸಿದರು.

ಪ್ರಾಧಿಕಾರದ ನೇಮಕಕ್ಕೆ ವಿರೋಧ

ಪ್ರಾಧಿಕಾರದ ನೇಮಕಕ್ಕೆ ವಿರೋಧ

ಅರಸೀಕೆರೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮರಿಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅರಸೀಕೆರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎನ್.ಡಿ. ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಆದರೆ ಮೂಲ ಬಿಜೆಪಿಗರನ್ನು ಕಡೆಗಣಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಬೆಂಬಲಿಗ ಪ್ರಸಾದ್ ನೇಮಕ ಮಾಡಲಾಗಿದ್ದು, ತಕ್ಷಣ ನೇಮಕಾತಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುಂದಿನ ಸಲವೂ ಟಿಕೆಟ್

ಮುಂದಿನ ಸಲವೂ ಟಿಕೆಟ್

ಜೊತೆಗೆ ಅರಸೀಕೆರೆ ವಿಧಾನಸಭೆ ಕ್ಷೇತ್ರಕ್ಕೆ ಮುಂದಿನ ಸಲವೂ ಚುನಾವಣೆಯಲ್ಲಿ ಮರಿಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ನಗರ ಯೋಜನೆ ಪ್ರಾಧಿಕಾರಕ್ಕೆ ಮರಿಸ್ವಾಮಿ ಬೆಂಬಲಿಗ, ಮುಖಂಡ ಬಸವರಾಜು ನೇಮಕ ಮಾಡಬೇಕೆಂದು ಆಗ್ರಹಿಸಿದರು.

Recommended Video

    Sriramulu ಹಾಗು Sudhakar ಇಂದು ಮಾಧ್ಯಮದವರೊಂದಿಗೆ ಹೇಳಿದ್ದೇನು | Oneindia Kannada
    ವೈರಲ್ ಪತ್ರದಲ್ಲಿ ಸಂತೋಷ್ ಹೆಸರು

    ವೈರಲ್ ಪತ್ರದಲ್ಲಿ ಸಂತೋಷ್ ಹೆಸರು

    ರಾಜ್ಯ ಬಿಜೆಪಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪತ್ರವೊಂದು ಸಾಕಷ್ಟು ಸುದ್ದಿ ಮಾಡಿತ್ತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದಕ್ಕೆ ಉತ್ತರ ಎಂಬುವಂತೆ ಬಿಎಸ್‌ವೈ ಪರವಾಗಿ ಬರೆದಿರುವ ಪತ್ರವೂ ವೈರಲ್ ಆಗಿತ್ತು.

    ಈ ವಿಚಾರ ಸಿಎಂ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಯಡಿಯೂರಪ್ಪನವರ ಮಾಜಿ ಆಪ್ತ ಕಾರ್ಯದರ್ಶಿ ಎನ್‌.ಆರ್‌ ಸಂತೋಷ್‌ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ವೈರಲ್ ಆಗಿತ್ತು. ಆಗಲೂ ಕೂಡ ಬಿಜೆಪಿಯಲ್ಲಿ ಸಂತೋಷ್ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಬಹಿರಂಗವಾಗಿಯೇ ಸಂತೋಷ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+