ಕೆಲವು ಅಧಿಕಾರಿಗಳ ವರ್ಗಾವಣೆ ಕೋರಿ ಬಿಜೆಪಿಯಿಂದ ಆಯೋಗಕ್ಕೆ ಪತ್ರ
ಬೆಂಗಳೂರು, ಮಾರ್ಚ್ 28: ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯಲು ಅನುಕೂಲವಾಗುವಂತೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಚುನಾವಣೆಯು ನಿಷ್ಪಕ್ಷಪಾತವಾಗಿ ನಡೆಯಬೇಕಿದೆ. ಕೆಲವು ಅಧಿಕಾರಿಗಳು ಇಲಾಖೆಯಲ್ಲಿದ್ದರೆ ಚುನಾವಣೆ ಪಕ್ಷಪಾತವಾಗುತ್ತದೆ ಹೀಗಾಗಿ ಒಟ್ಟು 13 ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿದ್ದಾರೆ.

1) ಮಂಜುನಾಥ್ ಪ್ರಸಾದ್- ಬಿಬಿಎಂಪಿ ಆಯುಕ್ತರು
2) ಕರಿಗೌಡ- ಬೆಂಗಳೂರು ರೂರಲ್ ಡಿಸಿ
3) ವಿಜಯಶಂಕರ್-ಬೆಂಗಳೂರು ಡಿಸಿ
4) ಆಲಮ್ ಪಾಷಾ- ಹಾಸನ ಉಪ ಆಯುಕ್ತ
5) ಪ್ರಕಾಶ್ ಗೌಡ- ಹಾಸನ ಎಸ್ಪಿ
6) ಮಂಡ್ಯ ಎಸ್ಪಿ
7) ತುಮಕೂರು, ಮಂಡ್ಯ, ಹಾಸನ, ರಾಮನಗರ ಅಬಕಾರಿ ಆಯುಕ್ತರು
8) ಎಚ್ಡಿ ಮಹದೇವ್- ಬೀದರ್ ಜಿಲ್ಲಾಧಿಕಾರಿ
9) ಬಲಭೀಮ ಕಾಂಬ್ಳೆ
10)ವೆಂಕಟೇಶ್ ಕುಮಾರ್- ಕಲಬುರಗಿ ಡಿಸಿ
11)ಲಾಡಾ ಮಾರ್ಟಿನ್-ಎಸ್ಪಿ ಕಲಬುರಗಿ
12) ಟಿ ಯೋಗೇಶ್ ಎಡಿಸಿ ಕಲಬುರಗಿ
13) ಶಶಿಕಾಂತ್ ಐಪಿಎಸ್- ಡಿಸಿಪಿ ಬೆಂಗಳೂರು ಇವರುಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆಯಲಾಗಿದೆ.












Click it and Unblock the Notifications