ಪ್ರಭಾತ್ ಕಲಾವಿದರಿಂದ ಗೋಪಣ್ಣ ಜನ್ಮಶತಮಾನೋತ್ಸವ
ಬೆಂಗಳೂರು, ಜೂ.4: ಹರಿಕಥಾರತ್ನಾಕರ ಗೋಪಿನಾಥದಾಸರ ಜನ್ಮ ಶತಮಾನೋತ್ಸವವನ್ನು 'ಗೋಪಣ್ಣ 100' ಎಂಬ ಹೆಸರಿನಲ್ಲಿ ಪ್ರಭಾತ ಕಲಾವಿದರು ಜೂ.7 ರಿಂದ ಜೂ 29 ರ ತನಕ ಪ್ರತಿ ಶನಿವಾರ ಮತ್ತು ಭಾನುವಾರ ವೈವಿಧ್ಯಮಯವಾಗಿ ಆಚರಿಸುತ್ತಿದ್ದಾರೆ.
ಜೂ.7ರಂದು
ಬೆಂಗಳೂರಿನ
ಸೆಂಟ್ರಲ್
ಕಾಲೇಜಿನ
ಜ್ಞಾನಜ್ಯೋತಿ
ಸಭಾಂಗಣದಲ್ಲಿ
ಸಂಜೆ
6.15ಕ್ಕೆ
'ಗೋಪಣ್ಣ
100'
ಕಾರ್ಯಕ್ರಮದ
ಉದ್ಘಾಟನೆ
ನೆರವೇರಲಿದೆ.
ಕಲಾ
ಪೋಷಕರಾದ
ಹರಿಖೋಡೆ
ಉದ್ಘಾಟಿಸಲಿದ್ದು,
ಜ್ಞಾನಪೀಠ
ಪ್ರಶಸ್ತಿ
ಪುರಸ್ಕೃತ
ಡಾ.ಚಂದ್ರಶೇಖರ
ಕಂಬಾರ,
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ಸಚಿವೆ
ಉಮಾಶ್ರಿ
ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಭದ್ರಗಿರಿ ಸರ್ವೋತ್ತಮ ಪೈ, ಹರಿಕಥಾ ವಿದ್ವಾಂಸರು ಹಾಗೂ ಶಾಂತಾ ಅನಂತಸ್ವಾಮಿ, ದಿ ಮೈಸೂರು ಅನಂತಸ್ವಾಮಿ ಅವರ ಪತ್ನಿ ಇವರಿಗೆ ಸನ್ಮಾನ ಮಾಡಲಾಗುತ್ತದೆ.
*
ಜೂ.
8ರಂದು
ಜೆಪಿ
ನಗರದ
ಆರ್
ವಿ
ಡೆಂಟಲ್
ಕಾಲೇಜು
ಸಭಾಂಗಣದಲ್ಲಿ
ಐರಾವತ
ತುಂಟ
ಗಣಪ
ಕಥಾ
ಕೀರ್ತನೆ.
ಸಂಜೆ
ಮೈಸೂರು
ಮಲ್ಲಿಗೆ
ನಾಟಕ,
*
ಜೂ.
14
ಹಾಗೂ
ಜೂ.15ರಂದು
ದಯಾನಂದ
ಸಾಗರ್
ಕಾಲೇಜಿನ
ಸಭಾಂಗಣದಲ್ಲಿ
ನೃತ್ಯಾರ್ಪಣ:
ಹೇಮಾ
ಪಂಚಮುಖಿ
ಮತ್ತು
ತಂಡ
ಇನ್ನಿತರ
ಕಾರ್ಯಕ್ರಮಗಳು
*
ಜೂ
.22ರಂದು
ಕುವೆಂಪು
ಕಲಾಕ್ಷೇತ್ರ,
ವಿವಿಪುರಂನಲ್ಲಿ
ಉತ್ತರ
ಭೂಪ
ನಾಟಕ,
ಭೈರವಿ
ನಾಟಕ,
ವಿಜಯೋತ್ಸವ
ನೃತ್ಯ
ನಾಟಕವಿರುತ್ತದೆ.
*
ಜೂ.29ರಂದು
ರವೀಂದ್ರ
ಕಲಾಕ್ಷೇತ್ರದಲ್ಲಿ
ಹಯವದನ
ನಾಟಕ
ಹಾಗೂ
ಗೋಪಿನಾಥದಾಸರ
ಜೀವನ
ಕುರಿತ
ಕಲಾ
ತಪಸ್ವಿ
ನಾಟಕ
ಹಾಗೂ
ಸಮಾರೋಪ
ಸಮಾರಂಭವಿರುತ್ತದೆ.
ಕಲಾಸಕ್ತರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ಅನುಭವಿಸಬೇಕಾಗಿ ಪ್ರಭಾತ್ ಕಲಾವಿದರು ತಂಡ ಹರೀಶ್ ಅವರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗೆ ಪ್ರಭಾತ್ ಕಲಾವಿದರು ವೆಬ್ ಸೈಟ್ ಗೆ ಭೇಟಿ ಕೊಡಿ