ಗೌರಿ ಅರುಣ್ ಮೂರ್ತಿ ಭರತನಾಟ್ಯ ರಂಗಪ್ರವೇಶ
ಬೆಂಗಳೂರು, ನವೆಂಬರ್ 22 : ಬಹುಮುಖ ಪ್ರತಿಭೆಯ ಯುವ ನೃತ್ಯಗಾರ್ತಿ ಕುಮಾರಿ ಗೌರಿ ಅರುಣ್ ಮೂರ್ತಿಯ ಭರತನಾಟ್ಯ ರಂಗಪ್ರವೇಶ ನವೆಂಬರ್ 26, ಭಾನುವಾರ ಬೆಳಗ್ಗೆ 10ಕ್ಕೆ ನಗರದ ಚೌಡಯ್ಯ ಸ್ಮಾರಕ ಭವನದ ಸಭಾಂಗಣದಲ್ಲಿ ನಡೆಯಲಿದೆ.
ಗೌರಿ ಎ ಮೂರ್ತಿ ನಾಡಿನ ಹೆಸರಾಂತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕೂಚುಪುಡಿ ನೃತ್ಯಪಟು ಡಾ ವೀಣಾಮೂರ್ತಿ ವಿಜಯ್ ಅವರ ಶಿಷ್ಯೆ. ವೀಣಾಮೂರ್ತಿ ಅವರಲ್ಲೇ ತನ್ನ ನಾಟ್ಯಾಭ್ಯಾಸವನ್ನು ತನ್ನ 7ನೇ ವಯಸ್ಸಿನಲ್ಲೇ ಪ್ರಾರಂಭಿಸಿದ ಗೌರಿ, ಭರತನಾಟ್ಯ ಕಲೆಯಲ್ಲಿ ಎಲ್ಲಾ ಮಜಲುಗಳಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದಾಳೆ.

ಪ್ರಸ್ತುತ ಮೌಂಟ್ ಕಾರ್ಮೆಲ್ ಕಾಲೇಜಿನ ಕಲಾ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿ ಮನಃಶಾಸ್ತ್ರದ ಬಗ್ಗೆ ವ್ಯಾಸಂಗ ಮಾಡುತ್ತಿದ್ದಾಳೆ. ಯೋಗಾಭ್ಯಾಸದಲ್ಲೂ ಪರಿಣಿತಿಯನ್ನು ಪಡೆದಿದ್ದು, ಕಾಲೇಜಿನ ಆಟಪಾಠಗಳಲ್ಲೂ ಮುಂದಿದ್ದಾಳೆ. ಅತ್ಯುತ್ತಮ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದಾಳೆ.
ಇಂದಿನ ಅವಳ ರಂಗಪ್ರವೇಶಕ್ಕೆ ಹಿರಿಯ ನಾಟ್ಯಗುರು ಬಿ ಭಾನುಮತಿ ಮತ್ತು ಹಿರಿಯ ವೀಣಾವಾದಕಿ ಡಾ ಸುಮಾ ಸುಧೀಂದ್ರ, ಯಕ್ಷಗಾನ ಕಲಾವಿದರಾದ ಮಂಟಪ್ ಪ್ರಭಾಕರ್ ಉಪಾಧ್ಯಾಯ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಲಾವಿದರನ್ನು ಆಶೀರ್ವದಿಸಲಿದ್ದಾರೆ.

ಹಿಮ್ಮೇಳದಲ್ಲಿ ವೀಣಾಮೂರ್ತಿಯವರ ನಟುವಾಂಗ, ವಿ ದೀಪ್ತಿ ಶ್ರೀನಾಥ್ - ಗಾಯನ, ಲಿಂಗರಾಜು - ಮೃದಂಗ, ವಿ ಗೋಪಾಲ್ - ವೀಣೆ, ರಘುನಂದನ್ - ಕೊಳಲು ಹಾಗೂ ಕಾರ್ತಿಕ್ ರವರ - ರಿದಂ ಪ್ಯಾಡ್ ನಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ನಾಟ್ಯ ವಿದುಷಿ ಶಮಾಕೃಷ್ಣ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಕಲಾ ಪೋಷಕರೂ ಮಹಾದಾನಿಗಳೂ ಆಗಿರುವ ಪಿ ಎನ್ ಎಸ್ ಮೂರ್ತಿ ಮತ್ತು ಯಶೋದಾಮೂರ್ತಿಯವರ ಹಾಗೂ ಹಿರಿಯ ಗಮಕಿಗಳು ಪತ್ರಕರ್ತರೂ ಆಗಿರುವ ಡಾ ಎಂಎ ಜಯರಾಮ್ ರಾವ್ ಮತ್ತು ರುಕ್ಮಿಣಿ ಜಯರಾಮ್ ರಾವ್ ರವರ ಮೊಮ್ಮಗಳು. ಕಿರುತೆರೆ ನಟಿ, ನಿರೂಪಕಿ ಕುಮುದವಲ್ಲಿ ಹಾಗೂ ಅರುಣ್ ಮೂರ್ತಿಯವರ ಮಗಳು ಹಾಗೂ ಪೃಥ್ವಿ ಮೂರ್ತಿಯ ಅವಳಿ ಸೋದರಿ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications