Bengaluru: ಬೆಂಗಳೂರಿನಲ್ಲಿ ಮನೆ ಮಾರಾಟ ಹೆಚ್ಚಳ: 9 ತಿಂಗಳಿನಲ್ಲಿ ಎಷ್ಟು ಮನೆ ಮಾರಾಟವಾಗಿವೆ ಗೊತ್ತಾ?
ಬೆಂಗಳೂರಿನಲ್ಲಿ ಮನೆ ಮಾರಾಟದಲ್ಲಿ ಹೆಚ್ಚಳವಾಗುತ್ತಿದ್ದು, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ವೇಗ ಸಿಕ್ಕಿದೆ. 2023 ರ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 47,100 ಮನೆಗಳು ಮಾರಾಟವಾಗಿದೆ. 2022ರಲ್ಲಿ ಇದೇ ಅವಧಿಯಲ್ಲಿ 49,500 ಮನೆಗಳು ಮಾರಾಟವಾಗಿದ್ದವು, 2023ರ ಮೂರನೇ ತ್ರೈಮಾಸಿಕದಲ್ಲಿ 16,400 ಮನೆಗಳು ಮಾರಾಟವಾಗಿವೆ.
ಆಸ್ತಿ ಸಲಹಾ ಸಂಸ್ಥೆಯಾದ ಅನರಾಕ್ನ ಮಾಹಿತಿಯ ಪ್ರಕಾರ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ (Q-o-Q), ಮಾರಾಟವು 15,000 ಯುನಿಟ್ಗಳಿಂದ ಸುಮಾರು 10% ಹೆಚ್ಚಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.

ಇತ್ತೀಚಿನ ತ್ರೈಮಾಸಿಕದಲ್ಲಿ 14,800 ಮನೆಗಳು ಮಾರಾಟವಾಗಿದೆ. ಅದರಲ್ಲಿ ಕೇವಲ 1% ಮನೆಗಳು ರೂ 40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವೆಚ್ಚದವಾಗಿದ್ದರೆ, ಶೇಕಡ 64 ರಷ್ಟು ಮನೆಗಳ ಬೆಲೆ 80 ಲಕ್ಷದಿಂದ 1.5 ಕೋಟಿ ರೂ.ಗಳಷ್ಟಿತ್ತು, ಶೇ.23ರಷ್ಟು ಮನೆಗಳು 40 ಲಕ್ಷದಿಂದ 80 ಲಕ್ಷ ರೂ. ಬೆಲೆಯವು ಎಂದು ಹೇಳಿದೆ.
ಮನೆ ಮಾರಾಟ ವ್ಯವಹಾರಕ್ಕೆ ವೇಗ
ಎರಡನೇ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದಲ್ಲಿ 30% ರಷ್ಟು ಹೆಚ್ಚಾಗಿದೆ, ಮೊದಲನೇ ತ್ರಮಾಸಿಕ ಮಾರಾಟಕ್ಕೆ ಹೋಲಿಕೆ ಮಾಡಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. "40 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಮನೆಗಳ ಪ್ರಮಾಣ, ಮಾರುಕಟ್ಟೆ ಪಾಲಿನ ಭಾಗವು ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ, ಪ್ರತಿಯೊಬ್ಬರೂ ವಿಶಾಲವಾದ ಮನೆಗಳನ್ನು ಹುಡುಕುತ್ತಿದ್ದಾರೆ ಮತ್ತು ನಾವು ಮೊದಲೇ ಚರ್ಚಿಸಿದಂತೆ, ಐಷಾರಾಮಿ ಮನೆಗಳ ಮಾರಾಟವು ಹೆಚ್ಚುತ್ತಿದೆ" ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಅಧ್ಯಕ್ಷ ಕಿಶೋರ್ ಜೈನ್ ಹೇಳಿರುವುದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪೂರ್ವ ಬೆಂಗಳೂರಿನಲ್ಲಿ ಮಾರಾಟ ಹೆಚ್ಚಳ
ಬೆಂಗಳೂರಿನ ಪೂರ್ವ ಭಾಗದಲ್ಲಿ ವಸತಿಗಳ ಮಾರಾಟ ಹೆಚ್ಚಿದೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 22% ಹೆಚ್ಚಳ ದಾಖಲಿಸಿದೆ. ಬೆಂಗಳೂರಿನಲ್ಲಿ ಮಾರಾಟವಾದ ಒಟ್ಟು ಮನೆಗಳಲ್ಲಿ 54 ಪ್ರತಿಶತ ಮನೆಗಳು ಈ ಭಾಗದಲ್ಲಿ ಮಾರಾಟವಾಗಿದೆ.
ಉತ್ತರ ಬೆಂಗಳೂರು 26% ರಷ್ಟು ಪಾಲನ್ನು ಹೊಂದಿದೆ ಮತ್ತು 62% ಬೆಳವಣಿಗೆಯನ್ನು ದಾಖಲಿಸಿದೆ. ಏತನ್ಮಧ್ಯೆ, ದಕ್ಷಿಣ ಬೆಂಗಳೂರು 21% ಬೆಳವಣಿಗೆಯನ್ನು ಹೊಂದಿದೆ, ಇದು 17% ಪಾಲನ್ನು ಒಳಗೊಂಡಿದೆ. ಪಶ್ಚಿಮ ಬೆಂಗಳೂರು ಸ್ಥಿರತೆ ಕಾಯ್ದುಕೊಂಡಿದೆ.
"ಬೆಂಗಳೂರಿನೊಳಗೆ, ನಗರದ ಲಭ್ಯವಿರುವ ವಸತಿ ಘಟಕಗಳಲ್ಲಿ ಬಹುತೇಕ, ಸರಿಸುಮಾರು 52%, ಗಮನಾರ್ಹವಾಗಿ ಪೂರ್ವ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ, ಇದು ತ್ರೈಮಾಸಿಕ ಆಧಾರದ ಮೇಲೆ ಕನಿಷ್ಠ 1% ಹೆಚ್ಚಳವನ್ನು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, 2023ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಎಲ್ಲಾ ಇತರ ವಲಯಗಳು ಮೂರನೇ ತ್ರೈಮಾಸಿಕದಲ್ಲಿ ತಮ್ಮ ವಲಯದಲ್ಲಿ ಲಭ್ಯವಿರುವ ದಾಸ್ತಾನು ಮಟ್ಟದಲ್ಲಿ ಕಡಿತವನ್ನು ಅನುಭವಿಸಿವೆ" ಎಂದು ವರದಿಯಾಗಿದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು?












Click it and Unblock the Notifications