Gobi Manchurian: ಬೆಂಗಳೂರಿನಲ್ಲಿ 80% ಕುಸಿತ ಕಂಡ ಗೋಬಿ ಮಂಚೂರಿ ವ್ಯಾಪಾರ; ವರದಿ
ಮಾರ್ಚ್ 11 ರಂದು, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕಂಡುಬರುವ ಕೃತಕ ಆಹಾರ ಬಣ್ಣದ ಮೇಲೆ ಕಡಿವಾಣವನ್ನು ವಿಧಿಸಿತು. ಕೃತಕ ಬಣ್ಣ ಏಜೆಂಟ್ಗಳ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ವಿಶೇಷವಾಗಿ ರೋಡಮೈನ್-ಬಿ ಬಳಕೆಯನ್ನು ನಿಷೇಧಿಸಿತ್ತು.
ಕೃತಕ ಬಣ್ಣ ಏಜೆಂಟ್ಗಳ ಬಳಕೆಯ ಮೇಲಿನ ನಿಷೇಧದ ಬಳಿಕ ನಗರದಲ್ಲಿ ಗೋಬಿ ಮಂಚೂರಿ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದೆ, ದಿ ಹ್ಯಾನ್ಸ್ ಇಂಡಿಯಾದ ವರದಿಯ ಪ್ರಕಾರ ಈ ಕೃತಕ ಬಣ್ಣಗಳ ಬಳಕೆ ಮೇಲೆ ನಿಷೇಧ ಹೇರಿದ ಬಳಿಕ ಬೆಂಗಳೂರಿನಲ್ಲಿ ಗೋಬಿ ಮಂಚೂರಿ ವ್ಯಾಪಾರದಲ್ಲಿ ಶೇಕಡಾ 80 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.

ಗೋಬಿ ಮಂಚೂರಿ ವ್ಯಾಪಾರಿಗಳು ಆತಂಕಗೊಂಡಿದ್ದು, ಕೃತಕ ಆಹಾರ ಬಣ್ಣ ಬಳಕೆ ಬಿಟ್ಟ ಬಳಿಕ, ಗ್ರಾಹಕರ ಬೇಡಿಕೆ ಕಡಿಮೆಯಾಗಿದ್ದು, ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಣ್ಣವಿಲ್ಲದ ಗೋಬಿ ಮಂಚೂರಿ ತಿನ್ನಲ್ಲ!
"ಬಣ್ಣವಿಲ್ಲದ ಗೋಬಿ ಮಂಚೂರಿಯನ್ ಅನ್ನು ಗ್ರಾಹಕರು ಸ್ವೀಕರಿಸುವುದಿಲ್ಲ, ವ್ಯಾಪಾರ ಮಾಡುವುದು ಮತ್ತು ಜೀವನ ನಡೆಸುವುದು ದೊಡ್ಡ ಸವಾಲಾಗಿದೆ, ಮೊದಲು ದಿನಕ್ಕೆ 10,000 ರೂಪಾಯಿ ವ್ಯಾಪಾರ ಮಾಡುತ್ತಿದ್ದೆವು, ಈಗ 5,000 ರೂಪಾಯಿ ವ್ಯಾಪಾರ ಮಾಡುವುದು ಕಷ್ಟಕರವಾಗಿದೆ. ಹೂಡಿಕೆ ಮಾಡಿದ ಬಂಡವಾಳವೂ ಹಿಂತಿರುಗಿಲ್ಲ. ಸದ್ಯ ಯಾವುದೇ ಬಣ್ಣ ಬಳಸದೇ ನೈಸರ್ಗಿಕ ಗೋಬಿ ತಯಾರಿಸುತ್ತಿದ್ದೇವೆ.ಆದರೂ ಜನ ಬರುತ್ತಿಲ್ಲ" ಎಂದು ನಗರದ ಸ್ಟಾಲ್ ಮಾಲೀಕ ರಾಜೇಶ್ ವೈ ತಿಳಿಸಿರುವುದಾಗಿ ಹ್ಯಾನ್ಸ್ ವರದಿಯಲ್ಲಿ ಹೇಳಿದೆ.
ಕೃತಕ ಬಣ್ಣಗಳ ಬಳಕೆಯ ಮೇಲಿನ ನಿಷೇಧವು ಗೋಬಿ ಮಂಚೂರಿನಯನ್ ಉದ್ಯಮಕ್ಕೆ "ದೊಡ್ಡ ಹೊಡೆತ" ಎಂದು ಒಪ್ಪಿಕೊಂಡ ರಾಜೇಶ್ ಮತ್ತು ಅವರು ತಮ್ಮ ಸ್ಟಾಲ್ನಲ್ಲಿ ರಾಸಾಯನಿಕ ಮುಕ್ತ ಗೋಬಿ ಮಂಚೂರಿಯನ್ ಅನ್ನು ತಯಾರಿಸುತ್ತಿರುವುದಾಗಿ ಹೇಳಿದರು.
ಏನಿದು ರೊಡಮೈನ್ ಬಿ?
ರೊಡಮೈನ್ ಬಿ(ಆರ್ಎಚ್ಬಿ) ಎನ್ನುವ ರಾಸಾಯನಿಕ ಪದಾರ್ಥವನ್ನು ಸಾಮಾನ್ಯವಾಗಿ ಸಿಲ್ಕ್, ಗೋಣಿನಾರು, ಚರ್ಮ, ಹತ್ತಿ ಮತ್ತು ಉಣ್ಣೆ, ಅದೇ ರೀತಿಯಾಗಿ ಅಲಂಕಾರಿಕ ಹಾಗೂ ಪ್ಲಾಸ್ಟಿಕ್ ತಯಾರಿಕೆಯನ್ನು ಬಣ್ಣಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದು ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಣ ಆಹಾರದಲ್ಲಿ ಕೂಡ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಸೇವಿಸುವುದು ಆರೋಗ್ಯದ ಮೇಲೆ ಅಪಾಯ ಉಂಟುಮಾಡುತ್ತದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ












Click it and Unblock the Notifications