Namma Metro: ನೇರಳೆ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಆರಂಭಿಸಿದ ಮೆಟ್ರೋ- ಕಡಿಮೆಯಾದ ಟ್ರಾಫಿಕ್, ಎಲ್ಲೆಲ್ಲಿ? ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 11: ಚಲ್ಲಘಟ್ಟ-ವೈಟ್ಫೀಲ್ಡ್ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆ ಪ್ರಾರಂಭವಾದ ನಂತರ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸೋಮವಾರ ಮಾಹಿತಿ ಹಂಚಿಕೊಂಡಿದೆ. ಟಿನ್ ಫ್ಯಾಕ್ಟರಿ-ಕೆಆರ್ ಪುರಂ ಸುತ್ತ ಸಾಮಾನ್ಯಕ್ಕಿಂತ ಕಡಿಮೆ ಟ್ರಾಫಿಕ್ ದಟ್ಟಣೆಯನ್ನು ಟ್ರಾಫಿಕ್ ಹೀಟ್ಮ್ಯಾಪ್ ತೋರಿಸಿದೆ.
ಟಿನ್ ಫ್ಯಾಕ್ಟರಿ-ಕೆಆರ್ ಪುರಂ ವಿಭಾಗದಲ್ಲಿ ಬೆಳಿಗ್ಗೆ 8 ರಿಂದ 10 ರ ನಡುವೆ ಕೇವಲ 1 ಕಿ.ಮೀ ಟ್ರಾಫಿಕ್ ದಟ್ಟಣೆ ಕಂಡುಬಂದಿದೆ. ಸೆಪ್ಟೆಂಬರ್ 25ರಂದು ( ಸೋಮವಾರ ) ಇದೇ ವಿಭಾಗದಲ್ಲಿ ವಾಹನ ದಟ್ಟಣೆಯು 2.1 ಕಿ.ಮೀ ಇತ್ತು.

ಸಂಜೆಯ ಪೀಕ್ ಅವರ್ನಲ್ಲಿ ( 4 ರಿಂದ 6 ರ ವರೆಗೆ ) ಸಾಮಾನ್ಯವಾಗಿ 800 ಮೀಟರ್ ಸಂಚಾರ ದಟ್ಟಣೆ ಇರುತ್ತಿತ್ತು. ಇದಕ್ಕೆ ಹೋಲಿಸಿದರೆ ಈಗ ದಟ್ಟಣೆಯ ಉದ್ದವು 100 ಮೀಟರ್ಗೆ ಇಳಿದಿದೆ. ಸಂಜೆ 6 ರ ಹೊತ್ತಿಗೆ ಉದ್ದವು 200 ಮೀಟರ್ವರೆಗೂ ಇರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 9 ರ ಸಂಜೆ ಜನದಟ್ಟಣೆ ಕಡಿಮೆಯಾಗಲು ಮಳೆಯೂ ಒಂದು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 25 ರಂದು, ದಟ್ಟಣೆಯ ಉದ್ದವು ಸಂಜೆ 4 ರಿಂದ 6 ರ ನಡುವೆ 800 ಮೀಟರ್ ಇತ್ತು. ಅದು 6 ಗಂಟೆಗೆ 1.3 ಕಿಮೀಗೆ ತಲುಪಿತ್ತು.
ಹೂಡಿ ಜಂಕ್ಷನ್ನಲ್ಲಿ, ಸಾಮಾನ್ಯವಾಗಿ ಸೋಮವಾರದಂದು 900 ಮೀಟರ್ ಸಂಚಾರ ದಟ್ಟಣೆ ಇರುತ್ತಿತ್ತು. ಇದಕ್ಕೆ ಹೋಲಿಸಿದರೆ ಅಕ್ಟೋಬರ್ 9ರಂದು ದಟ್ಟಣೆಯ ಉದ್ದವು ಸಂಜೆ 5 ರಿಂದ 6 ರವರೆಗೆ 200 ಮೀಟರ್ ಮಾತ್ರ ಇತ್ತು.

ಈ ಸೋಮವಾರ ನಗರದಲ್ಲಿ ಒಟ್ಟಾರೆ ದಟ್ಟಣೆಯ ಉದ್ದವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ಹೀಟ್ಮ್ಯಾಪ್ ತೋರಿಸಿದೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸರಾಸರಿ 31 ಕಿಮೀ ಉದ್ದವನ್ನು ದಾಖಲಿಸಿದೆ. ಸಂಜೆ 7 ಗಂಟೆ ವೇಳೆಗೆ ದಟ್ಟಣೆಯು 68.3 ಕಿ.ಮೀ.ಗೆ ಏರಿದೆ. ಸೆಪ್ಟೆಂಬರ್ 25 ರಂದು, ದಟ್ಟಣೆಯ ಉದ್ದವು ಇದೇ ಸಮಯದಲ್ಲಿ 46 ಕಿ.ಮೀ ಆಗಿತ್ತು ಎಂದು ತಿಳಿದುಬಂದಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿರುವ ಬೆಂಗಳೂರು ಜಂಟಿ ಆಯುಕ್ತ (ಸಂಚಾರ) ಎಂಎನ್ ಅನುಚೇತ್, 'ಅಕ್ಟೋಬರ್ 9 ರಂದು, ಕೆಆರ್ ಪುರಂ ಮಾರ್ಗದಲ್ಲಿ ಕಡಿಮೆ ವಾಹನಗಳು ಓಡಾಡುವುದು ಕಂಡುಬಂದಿದೆ. ಇದರಿಂದಾಗಿ ಟ್ರಾಫಿಕ್ ಹರಿವು ವೇಗವಾಗಿತ್ತು. ಬಹಳಷ್ಟು ಜನರು ತಮ್ಮ ವಾಹನಗಳನ್ನು ಬೈಯಪ್ಪನಹಳ್ಳಿಗೆ ತರುವುದನ್ನು ಬಿಟ್ಟಿದ್ದಾರೆ. ಇದರಿಂದಾಗಿ ಕೆಆರ್ ಪುರಂ ರೈಲು ನಿಲ್ದಾಣದ ಕಡೆಗೆ ಹೋಗುವ ವಾಹನಗಳ ಸರತಿ ಸಾಲು ಕಡಿಮೆಯಾಗಿತ್ತು' ಎಂದು ತಿಳಿಸಿದ್ದಾರೆ.

ಡಿಸಿಪಿ ಪೂರ್ವ ( ಸಂಚಾರ ) ಕುಲದೀಪ್ ಕುಮಾರ್ ಜೈನ್ ಮಾತನಾಡಿ, 'ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಕೆಆರ್ ಪುರಂ ಜಂಕ್ಷನ್ನಲ್ಲಿ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದರೂ, ಸಂಪೂರ್ಣ ಮೆಟ್ರೋ ಕಾರ್ಯಾಚರಣೆಗಳ ಪರಿಣಾಮವನ್ನು ಒಂದು ವಾರದ ನಂತರ ಮಾತ್ರ ನಿರ್ಣಯಿಸಲು ನಮಗೆ ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.
ಅಕ್ಟೋಬರ್ 9 ರಂದು ಮೆಟ್ರೋದ ನೇರಳೆ ಮಾರ್ಗದಲ್ಲಿ 2,89,105 ಪ್ರಯಾಣಿಕರು ಸಂಚರಿಸಿದ್ದಾರೆ. ಅದರಲ್ಲಿ 61,179 ಬೈಯಪ್ಪನಹಳ್ಳಿ ಮತ್ತು ವೈಟ್ಫೀಲ್ಡ್ ನಡುವೆ ಪ್ರಯಾಣಿಸಿದ್ದಾರೆ. ಕೆಆರ್ ಪುರಂ- ಬೈಯಪ್ಪನಹಳ್ಳಿ ನಡುವೆ ಸಂಚಾರ ಆರಂಭಿಸುವುದಕ್ಕೂ ಮೊದಲು ವೈಟ್ಫೀಲ್ಡ್ಗೆ ಪ್ರತಿದಿನ ಸರಾಸರಿ 28,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ











Click it and Unblock the Notifications