ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿವಾಳ ಬಾಲಮಂದಿರದಿಂದ ಐವರು ಬಾಲಾಪರಾಧಿಗಳು ಎಸ್ಕೇಪ್

|
Google Oneindia Kannada News

ಬೆಂಗಳೂರು, ನವೆಂಬರ್ 3: ಹೋಮ್‌ಗಾರ್ಡ್ಸ್ ಮೇಲೆ ಹಲ್ಲೆ ನಡೆಸಿ ಐವರು ಬಾಲಾಪರಾಧಿಗಳು ಮಡಿವಾಳ ಬಾಲಾಪರಾಧಿ ಮಂದಿರದಿಂದ ಪರಾರಿಯಾಗಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಮಡಿವಾಳದ ಬಾಲಮಂದಿರದ ಹೋಮ್‌ ಗಾರ್ಡ್ ರಮೇಶ್ ಗಾಯಗೊಂಡವರು. ಬಾಲಾಪರಾಧಿಗಳು ಉಪಹಾರ ಸೇವಿಸಿ ಕೈ ತೊಳೆಯಲೆಂದು ಮಂದಿರದ ಮುಂಭಾಗಕ್ಕೆ ಬಂದಿದ್ದಾಗ ಒಬ್ಬರೇ ಹೋಮ್‌ಗಾರ್ಡ್ ಇರುವುದನ್ನು ಗಮನಿಸಿ 15 ಬಾಲಾಪರಾಧಿಗಳು ಹೋಮ್‌ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ.

ಬಾಲಾಪರಾಧಿಗಳ ವಯೋಮಿತಿ ಇಳಿಕೆ, ವಿಧೇಯಕದ ಪ್ರಮುಖ ಅಂಶಗಳು ಬಾಲಾಪರಾಧಿಗಳ ವಯೋಮಿತಿ ಇಳಿಕೆ, ವಿಧೇಯಕದ ಪ್ರಮುಖ ಅಂಶಗಳು

ಹೋಂಗಾರ್ಡ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ 15 ಬಾಲಾಪರಾಧಿಗಳು ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು 10 ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿಸಿದ್ದಾರೆ. ಹಲ್ಲೆಯಿಂದ ಹೋಂಗಾರ್ಡ್ ರಮೇಶ್ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೀಕ್ಷಿಸಿದ ಸ್ಥಳೀಯರು ಕೂಡಲೇ 10 ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ 5 ಮಂದಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿ ರೇಪ್ ಕೇಸ್ ಬಾಲಾಪರಾಧಿ ರಹಸ್ಯವಾಗಿ ಬಿಡುಗಡೆ ದೆಹಲಿ ರೇಪ್ ಕೇಸ್ ಬಾಲಾಪರಾಧಿ ರಹಸ್ಯವಾಗಿ ಬಿಡುಗಡೆ

bengaluru: security personnel attacked and escape juvenile offenders

ಈ ಹಿಂದೆಯೂ ಹಲವು ಬಾರಿ ಬಾಲಪರಾಧಿ ಮಂದಿರದಿಂದ ಸಾಕಷ್ಟು ಬಾಲಪರಾಧಿಗಳು ಪರಾರಿಯಾಗಿದ್ದರು. ಎಷ್ಟೇ ಸೆಕ್ಯುರಿಟಿ ಇದ್ದರೂ ಬಾಲಾಪರಾಧಿಗಳು ಪರಾರಿಯಾಗಲು ಕಡಿವಾಣ ಹಾಕಲು ಸಿಬ್ಬಂದಿ ವಿಫಲವಾಗಿದೆ. ಸ್ಥಳಕ್ಕೆ ಮಡಿವಾಳ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Five juveniles escaped from a state run observation home situated in Madiwala after assaulting the security guards. The security guard, Ramesh, sustained injuries and was rushed to a nearby hospital. The five juveniles were involved in robbery, theft and dacoity cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X