Get Updates
Get notified of breaking news, exclusive insights, and must-see stories!

ರಾಮನಗರಕ್ಕೆ ಶಿಫ್ಟ್‌ ಆದ ಬೆಂಗಳೂರು ಎರಡನೇ ಏರ್‌ಪೋರ್ಟ್‌, ಕಾರಣವೇನು?

ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾನ ನಿರ್ಮಿಸುವ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕನಕಪುರ ರಸ್ತೆಯಲ್ಲೋ ಅಥವಾ ಕುಣಿಗಲ್‌ ಬಳಿ ಈ ಹೊಸ ಏರ್‌ಪೋರ್ಟ್‌ ನಿರ್ಮಾಣವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು ಜನ. ರಾಜ್ಯ ಸರ್ಕಾರ ಕೂಡ ಇದೇ ಕಥೆ ಹೇಳಿಕೊಂಡು ಬಂದಿತ್ತು. ಸದ್ಯ ಮೂರು ಜಾಗಗಳನ್ನು ನೋಡಿದ್ದೇವೆ. ಅದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡವೂ ಸ್ಥಳ ಪರಿಶೀಲಿಸಿದೆ. ಈ ಎರಡರಲ್ಲಿ ಒಂದು ಕಡೆ ಎರಡನೇ ವಿಮಾನ ನಿಲ್ದಾಣ ಫಿಕ್ಸ್‌ ಎಂದು ಹೇಳಿತ್ತು. ಆದರೆ ಇದೀಗ ಸೈಲೆಂಟಾಗಿ ಮತ್ತೊಂದು ಜಾಗ ಈ ಏರ್‌ಪೋರ್ಟ್‌ಗೆ ಫಿಕ್ಸ್‌ ಮಾಡಲಾಗುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆ ತಗ್ಗಿಸಬೇಕು ಎಂಬ ಕಾರಣಕ್ಕೆ ಭವಿಷ್ಯದ ದೃಷ್ಟಿಯಿಂದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಪರ-ವಿರೋಧವಿದ್ದರೂ ಅಂತಿಮವಾಗಿ ಕುಣಿಗಲ್‌ ಬಳಿ ಒಂದು ಜಾಗ, ಕನಕಪುರ ರಸ್ತೆಯಲ್ಲಿ ಎರಡು ಜಾಗ ಗುರುತಿಸಲಾಗಿತ್ತು. ವಿಮಾನ ನಿಲ್ದಾಣದ ಪ್ರಾಧಿಕಾರದ ತಂಡ ಕೂಡ ಇತ್ತೀಚೆಗೆ ಬಂದು ಈ ಜಾಗಗಳನ್ನು ಪರಿಶೀಲಿಸಿದೆ. ಇನ್ನೇನು ಬಹುತೇಕ ಕುಣಿಗಲ್‌ ಬಳಿಯೇ ಜಾಗ ಫಿಕ್ಸ್‌ ಆಗಲಿದೆ ಎನ್ನುವ ಹೊತ್ತಿಗೆ ಎರಡನೇ ಏರ್‌ಪೋರ್ಟ್‌ ಬೇರೆ ಜಿಲ್ಲೆಗೆ ಶಿಫ್ಟ್‌ ಆಗಿದೆ.

Bengaluru Second Airport Ramanagara Magadi Location Reason Revealed

ಹೌದು, ಇದೀಗ ರಾಮನಗರದಲ್ಲಿ ಈ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಸದ್ದಿಲ್ಲದೆ ತಯಾರಿ ನಡೆದಿದೆ. ಬೆಂಗಳೂರು ಪಕ್ಕದ ಜಿಲ್ಲೆಯಾದ ರಾಮನಗರದಲ್ಲಿ ಈ ಏರ್‌ಪೋರ್ಟ್‌ ನಿರ್ಮಾಣ ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ. ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಚಿಕ್ಕಸೋಲೂರು ಬಳಿ ಈಗಾಗಲೇ ಸಿವಿಲ್‌ ಇಂಜಿನಿಯರ್‌ಗಳು ಎಂಟ್ರಿ ನೀಡಿದ್ದು ಸಾವಿರಾರು ಎಕರೆ ಭೂಮಿಯ ನಕ್ಷೆಯನ್ನು ಗುರುತು ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Take a Poll

ಮಾಗಡಿ ಹಿಂದೆ ರಾಜಕೀಯ ಪ್ರಭಾವ?

ಎರಡನೇ ಏರ್‌ಪೋರ್ಟ್‌ ನಿರ್ಮಾಣದ ವಿಚಾರವಾಗಿ ಕನಕಪುರ ರಸ್ತೆ ಹಾಗೂ ಕುಣಿಗಲ್‌ ಬಳಿಯ ಜಾಗಗಳ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲೇ ಭಾರಿ ವಿರೋಧವಿದೆ. ಕೆಲವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕನಕಪುರ ರಸ್ತೆಯಲ್ಲೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ಕಾಳಜಿ ತೋರಿದ್ದಾರೆ ಎಂದು ದೂರಿದ್ದಾರೆ. ಇನ್ನೂ ಕೆಲವರು ಕುಣಿಗಲ್‌ ಬಳಿಯೂ ವಿಮಾನ ನಿಲ್ದಾಣ ಬೇಡ ಎಂದು ವಾದಿಸಿದ್ದಾರೆ. ಆದರೆ ಮತ್ತೊಂದು ಕಡೆ ತುಮಕೂರು ಜಿಲ್ಲೆಯಲ್ಲೇ ಏರ್‌ಪೋರ್ಟ್‌ ನಿರ್ಮಿಸಿ ಎಂದು ಪಟ್ಟು ಹಿಡಿದು, ಕೇಂದ್ರ ಸರ್ಕಾರದ ಮೇಲೂ ಒತ್ತಡ ಹಾಕಿದ್ದಾರೆ. ಈ ಎಲ್ಲ ಕಿತ್ತಾಟಗಳನ್ನು ಮನಗಂಡು ಇದೀಗ ರಾಮನಗರ ಜಿಲ್ಲೆಯ ಮಾಗಡಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ.

Bengaluru Second Airport Ramanagara Magadi Location Reason Revealed

ಈ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ರಾಮನಗರವನ್ನು ಎರಡನೇ ಬೆಂಗಳೂರು ಮಾಡುತ್ತೇವೆ ಹಾಗೂ ಬೆಂಗಳೂರಿಗೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಅಲ್ಲದೆ ಗ್ರೇಟರ್‌ ಬೆಂಗಳೂರು ಅಡಿಯಲ್ಲಿ ಬಿಡದಿ ಬಳಿಯೂ ಟೌನ್‌ಶಿಪ್‌ ನಿರ್ಮಾಣವಾಗುತ್ತಿದೆ. ಒಟ್ಟಾರೆ ರಾಮನಗರದ ಭವಿಷ್ಯದ ದೃಷ್ಟಿಯಿಂದ ಇಲ್ಲಿನ ಅಭಿವೃದ್ಧಿಗೆ ವೇಗ ನೀಡಲಾಗಿದೆ. ಈ ಎರಡನೇ ಏರ್‌ಪೋರ್ಟ್‌ ನಿರ್ಮಾಣವಾಗುವುದರಿಂದ ರಾಮನಗರದ ಜಿಲ್ಲೆಯ ಸ್ವರೂಪ ಕೂಡ ಬದಲಾಗಿದೆ. ಈ ಉದ್ದೇಶದಿಂದ ಮಾಗಡಿಗೆ ಏರ್‌ಪೋರ್ಟ್‌ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ತಮ್ಮ ತವರು ಜಿಲ್ಲೆಯಲ್ಲಿ ಏರ್‌ಪೋರ್ಟ್‌ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್‌ ಕೂಡ ಭರ್ಜರಿ ಪ್ಲ್ಯಾನ್‌ ಮಾಡಿದ್ದು, ಮೊದಲೇ ಘೋಷಿಸಿದರೆ ಇಲ್ಲೂ ವಿರೋಧ ಎದುರಾಗಬಹುದು ಎಂಬ ಕಾರಣಕ್ಕೆ ಸದ್ದಿಲ್ಲದೆ ಸ್ಥಳ ಗುರುತಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಇಲ್ಲೇ ಏರ್‌ಪೋರ್ಟ್‌ ನಿರ್ಮಾಣವಾದರೆ ಕುಣಿಗಲ್‌, ಕನಕಪುರ ರಸ್ತೆ ಭಾಗದವರ ಏರ್‌ಪೋರ್ಟ್‌ ಕನಸಿಗೆ ಕೊಳ್ಳಿ ಇಟ್ಟಂತಾಗುವುದು ಖಚಿತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+