ಬೆಂಗಳೂರಲ್ಲಿ ಖಾಕಿ ಬಲೆಗೆ ಬಿದ್ರು ಖತರ್ನಾಕ್ ಕಳ್ಳರು, ಏನೇನು ಸಿಕ್ತು?
ಬೆಂಗಳೂರು, ಡಿಸೆಂಬರ್ 24: ಚಿರತೆ ಚರ್ಮ ಮಾರಾಟ, ದರೋಡೆ, ಸರಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ
ಈಶಾನ್ಯ ವಿಭಾಗದ ಐದು ಪ್ರಕರಣಗಳು ಮತ್ತು ಪಶ್ಚಿಮ ವಿಭಾಗದ 3 ಪ್ರಕರಣಗಳು ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ. ಮೋಸ ಪ್ರಕರಣದಲ್ಲಿ ಶ್ರೀನಾಥ್, ಇತರೆ ಕಳ್ಳತನ ಪ್ರಕರಣಗಳಲ್ಲಿ ಬಿಎನ್ ಕೃಷ್ಣ, ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ 5.75 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ
ಅನಿಲ್ ಕುಮಾರ್ ಅವರು ಕೊಟ್ಟ ದೂರಿನ ಮೇರೆಗೆ ಚಿನ್ನಾಭರಣ ದೋಚುತ್ತಿದ್ದ ಅನಿಲ್ ಹಾಗೂ ರಾಹುಲ್ ಇಬ್ಬರನ್ನು ಬಂಧಿಸಲಾಗಿದ್ದು ಅವರಿಂದ 30 ಲಕ್ಷ ಬೆಲೆ ಬಾಳುವ ಸುಂಆರು 1 ಕೆಜಿ ತೂಕದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ಈಶಾನ್ಯ ವಿಭಾಗದ 5 ಪ್ರಕರಣಗಳು ಪಶ್ಚಿಮ ವಿಭಾಗದ 3 ಪ್ರಕರಣಗಳು ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿ
ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದ, ಮಂಜುನಾಥನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ, ಇದರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪಸಲ್ಲಿ ಕಳ್ಳತನ ಮಾಡಿದ್ದು ಬಹಿರಂಗವಾಗಿದೆ. ಆತನಿಂದ ಸುಮಾರು 50 ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳು ಮತ್ತು ಒಂದು ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯಲ್ಲಿ ಶಿವಾಜಿನಗರದ ಉಮರ್ ಅಹಮದ್, ಇರ್ಷಾದ್ ಅವರನ್ನು ಪೊಲೀಸರು ಬಂಧಿಸಿದ್ದು, 9 ಲಕ್ಷ ಬೆಲೆ ಬಾಳುವ 300 ಗ್ರಾಂ ಚಿನ್ನದೊಡವೆಗಳು, ಇರ್ಷಾದ್ ನಿಂದ 4 ಲಕ್ಷ ಬೆಲೆ ಬಾಳುವ 120 ಗ್ರಾಂ ಬೆಲೆ ಬಾಳುವ ಚಿನ್ನದೊಡವೆ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ
ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ
ಮಂಜುನಾಥ್ ಅವರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ನಾರಾಯಣಸ್ವಾಮಿ, ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು, 5 ಲಕ್ಷ ರೂ ಬೆಲೆ ಬಾಳುವ 230 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿರತೆ ಚರ್ಮ ಮಾರಾಟಗಾರರ ಬಂಧನ
ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚಿರತೆ ಚರ್ಮವನ್ನು ಮಾರಾಟ ಮಾಡುತ್ತಿದ್ದ ಮೂರು ಜನರನ್ನು ಬಂಧಿಸಲಾಗಿದೆ. ಸುರೇಶ್, ಪಾಪಣ್ಣ, ಬಸವರಾಜ್ ಅವರನ್ನು ಬಂಧಿಸಲಾಗಿದೆ.