Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು ರೈಲು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಈ ಸಂಬಂಧ ಹೊಸ ಮೆಟ್ರೋ ರೈಲು ಮಾರ್ಗಗಳನ್ನು ತೆರೆಯಲು ಮೆಟ್ರೋ ಅಧಿಕಾರಿಗಳು ಸಜ್ಜಾಗಿದ್ದಾರೆ. ಇನ್ನೊಂದೆಡೆ ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ. ಅದರ ಭಾಗವಾಗಿ ಹಳದಿ ಮಾರ್ಗಕ್ಕೆ 9ನೇ ಡ್ರೈವರ್ ಲೆಸ್ ರೈಲು ಸೆಟ್ಗಳು ನಗರದ ಹೆಬ್ಬಗೋಡಿ ಡಿಪೋಗೆ ಸೋಮವಾರ ಆಗಮಿಸಿವೆ.
ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ 19.5 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸದ್ಯ 08 ರೈಲುಗಳು ಸಂಚಾರ ನಡೆಸುತ್ತಿವೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಅತ್ಯಗತ್ಯವಾದ ಒಂಬತ್ತನೇ ರೈಲು ಆಗಮಿಸಿದೆ.

ಸೋಮವಾರ ಬೆಳಗಿನ ಜಾವ ನೈಸ್ ರಸ್ತೆ ಮಾರ್ಗವಾಗಿ ಹೆಬ್ಬಗೋಡಿ ಡಿಪೋಗೆ ಆರು ಬೋಗಿಗಳ ರೈಲು ಸೆಟ್ ಆಗಮಿಸಿತು. ಈ ಬಗ್ಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಂದೀಪ್ (@sandeepshenoyh) ಅನ್ನುವವರು ಹಂಚಿಕೊಂಡಿದ್ದಾರೆ. ನಾನು 'ಮೆಟ್ರೋದ ಹೊಸ ರೈಲುಗಳ ಸೆಟ್ ಅನ್ನು ನೋಡಿದೆ! ಹಳದಿ ಮಾರ್ಗದ 9 ರೈಲು ಇದಾಗಿದ್ದು, ಸಂಧು ಲಾಜಿಸ್ಟಿಕ್ಸ್ ಇದನ್ನು ಸಾಗಿಸಿದೆ' ಎಂದು ಬರೆದುಕೊಂಡಿದ್ದಾರೆ.
ಶೀಘ್ರವೇ ತಪಾಸಣೆ, ಪ್ರಾಯೋಗಿಕ ಸಂಚಾರ
ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ಒಂಬತ್ತನೇ ರೈಲು ಏಪ್ರಿಲ್ ಆರಂಭದಲ್ಲಿ ಪೂರೈಕೆ ಆಗಿತ್ತು. ಅಂದು ಲಾರಿ ಮೂಲಕ ರೈಲು ಸೆಟ್ಗಳು ಬೆಂಗಳೂರಿನತ್ತ ಹೊರಟಿದ್ದವು. ನಿಗದಿಯಂತೆ ರಸ್ತೆ ಮಾರ್ಗವಾಗಿ ನೂರಾರು ಕಿಲೋ ಮೀಟರ್ ಹಾದು ಬೆಂಗಳೂರಿಗೆ ಆಗಮಿಸಿವೆ. ಈ ಮೆಟ್ರೋ ಬೋಗಿಗಳನ್ನು ಹಳಿಗೆ ಜೋಡಿಸುವ ಕಾರ್ಯ ಈ ವಾರ ನಡೆಯಲಿದೆ. ಬಳಿಕ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ಹಾಗೂ ಇನ್ನಿತರ ಶಾಸನಬದ್ಧ ತಪಾಸಣೆಗಳನ್ನು ನಡೆಸಿ ಮೇ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಚಿಂತನೆ ಮಾಡಿದೆ.
10ನೇ ರೈಲು ಆಗಮನ ಯಾವಾಗ?
ಏಪ್ರಿಲ್ ಮೂರನೇ ವಾರದಲ್ಲಿ ಹಳದಿ ಮಾರ್ಗದ ಹತ್ತನೇ ರೈಲನ್ನು ಟಿಟಾಗರ್ ಪೂರೈಕೆ ಮಾಡುವ ಸಾಧ್ಯತೆ ಇದೆ. ಅದು ಏಪ್ರಿಲ್ ಅಂತ್ಯಕ್ಕೆ ಇಲ್ಲವೇ ಮೇ ಮೊದಲ ವಾರ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಲಿದೆ.
ಮೆಟ್ರೋಗಳ ರೈಲುಗಳ ಪೂರೈಕೆಯಿಂದ ಸುಮಾರು ಎರಡು ವರ್ಷ ಕಾರ್ಯಾಚರಣೆ ಆರಂಭಿಸುವುದು ವಿಳಂಬವಾಗಿದ್ದ ಹಳದಿ ಮಾರ್ಗಕ್ಕೆ ನಿಗದಿಯಂತೆ ಒಂದ ಹಿಂದೊಂದರಂತೆ ರೈಲುಗಳ ಪೂರೈಕೆ ಆಗುತ್ತಿವೆ.
ಹಸಿರು, ನೇರಳೆ ಮಾರ್ಗದಲ್ಲಿ ದಟ್ಟಣೆ ಇಳಿಕೆಗೆ ಕ್ರಮ
ಮತ್ತೊಂದೆಡೆ ಪ್ರೊಟೋಟೈಪ್ ಮಾದರಿ ಒಳಗೊಂಡಂತೆ 21 ರೈಲುಗಳನ್ನು ಚೀನಾ ಮೂಲದ ಕಂಪನಿ ಪೂರೈಕೆ ಮಾಡಲಿದೆ. ಈಗಾಗಲೇ 2025ರಲ್ಲಿ ಒಂದು ಮತ್ತು ಇತ್ತೀಚೆಗೆ ಬಂದ ಡಿಟಿಜಿ ರೈಲು ಸೇರಿ ಒಟ್ಟು ಮೂರು ಮೆಟ್ರೋ ರೈಲುಗಳು ನಗರದಲ್ಲಿದ್ದು, ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಅದಾದ ಬಳಿಕ ಅವುಗಳನ್ನು ಹಸಿರು ಮತ್ತು ನೇರಳೆ ಮಾರ್ಗದಲ್ಲಿ ನಿಯೋಜಿಸಲಾಗುತ್ತದೆ. ಈ ಮೂಲಕ ಹೆಚ್ಚುತ್ತಿರುವ ದಟ್ಟಣೆ ಕಡಿಮೆಗೆ ಬಿಎಂಆರ್ಸಿಎಲ್ ನಿರ್ಧರಿಸಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Vande Bharat Express: ದೇಶದಲ್ಲಿ ವಂದೇ ಭಾರತ್ ರೈಲಿನ ಹವಾ: ಪ್ರಯಾಣಿಕರ ಸಂಖ್ಯೆ ಶೇ.34ರಷ್ಟು ಏರಿಕೆ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು













Click it and Unblock the Notifications