Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅವಲಂಬನೆ ಪ್ರಮಾಣ ಹೆಚ್ಚಾಗುತ್ತಿದೆ. ಶೀಘ್ರವೇ ಮತ್ತೆರಡು ಹೊಸ ಮೆಟ್ರೋ ಮಾರ್ಗಗಳು ತೆರೆಯಲು ಸಿದ್ಧವಾಗಿವೆ. ಈ ಮಧ್ಯೆ ಹಾಲಿ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಪೀಕ್ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿದೆ. ಇದರ ನಿವಾರಣೆಗೆ ಸದರಿ ಎರಡು ಮಾರ್ಗಗಳಲ್ಲಿ ಮತ್ತಷ್ಟು ಹೊಸ ರೈಲುಗಳ ಸೇರ್ಪಡೆಗೆ ಅನುಮೋದನೆ ದೊರೆತಿದೆ.
ಹೌದು, ರೈಲ್ವೆ ಮಂಡಳಿಯು ಚಲಘಟ್ಟ-ವೈಟ್ಫಿಲ್ಡ್ (ಕಾಡುಗೋಡಿ) (ನೇರಳೆ ಮಾರ್ಗ) ಮತ್ತು ಮಾದಾವರ-ರೇಷ್ಮೆ ಸಂಸ್ಥೆ (ಹಸಿರು ಮಾರ್ಗ) ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಪಡೆಯಲು ತಾತ್ಕಾಲಿಕ ಅನುಮತಿ ನೀಡಿದೆ. ಮುಂದಿನ ಮೇ ಅಥವಾ ಜೂನ್ ನಲ್ಲಿ ಈ ಮಾರ್ಗಗಳಲ್ಲಿ ಪೀಕ್ ಅವರ್ನಲ್ಲಿ ಹೆಚ್ಚಿನ ರೈಲುಗಳು ಸಂಚಾರ ಮಾಡುವ ಸಾಧ್ಯತೆಗಳು ಇವೆ.

ಕಳೆದ ವಾರ ಏಪ್ರಿಲ್ 1 ರಂದು ರೈಲ್ವೆ ಮಂಡಳಿಯು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ತಾತ್ಕಾಲಿಕ ಅನುಮತಿ ನೀಡಿರುವ ಕುರಿತು ಪತ್ರದಲ್ಲಿ ತಿಳಿಸಿದೆ. ಸದ್ಯ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲವು 96ಕಿಲೋ ಮೀಟರ್ ವ್ಯಾಪಿಸಿದೆ. ಐಟಿ ಹಾಗೂ ಕೈಗಾರಿಕಾ ಕಾರಿಡಾರ್ ಗಳಿಗೂ ಮೆಟ್ರೋ ವಿಸ್ತರಣೆ ಆಗಿದ್ದರಿಂದ ದೈನಂದಿನ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.
ಹೊಸ ರೈಲುಗಳು ಸಂಚಾರ, ಷರತ್ತು ಇಲ್ಲಿವೆ
ಅದರಲ್ಲೂ ಬೆಳಗ್ಗೆ 7 ನಂತರ ಮತ್ತು ಸಂಜೆ 4 ಗಂಟೆ ನಂತರ ಪೀಕ್ ಅವರ್ ನಲ್ಲಿ ಮೆಟ್ರೋ ರೈಲುಗಳು ತುಂಬಿರುತ್ತವೆ. ಆಗ ಅತೀ ಕಡಿಮೆ ಸಮಯದಲ್ಲಿ (ಕನಿಷ್ಠ 3ನಿಮಿಷಕ್ಕೊಂದರಂತೆ) ಮೆಟ್ರೋ ರೈಲುಗಳ ಆವರ್ತನಗೊಳ್ಳುತ್ತವೆ. ಆದರೂ ದಟ್ಟಣೆ ಕಡಿಮೆ ಮಾಡಲಾಗುತ್ತಿಲ್ಲ. ಇದಕ್ಕೆ ಪರಿಹಾರವೆಂಬಂತೆ ಇನ್ನಷ್ಟು ರೈಲುಗಳು ಮಾರ್ಗ ಒಂದು ಮತ್ತು ಎರಡರಲ್ಲಿ ಸಂಚರಿಸಲಿವೆ. ಅನುಮತಿ ನೀಡಿರುವ ರೈಲ್ವೆ ಮಂಡಳಿಯು ನಮ್ಮ ಮೆಟ್ರೋಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಅದೆನೆಂದರೆ ಸೇರ್ಪಡೆ ಆಗಲಿರುವ ಹೊಸ ರೈಲುಗಳ ಗರಿಷ್ಠ ವೇಗ ಗಂಟೆಗೆ 80 ಕಿಮೀ ಮತ್ತು ದ್ವಿತೀಯ ಏರ್ ಸ್ಪ್ರಿಂಗ್ನ ಡಿಫ್ಲೇಟೆಡ್ ಮೋಡ್ನಲ್ಲಿ ಗಂಟೆಗೆ 25 ಕಿಮೀ ಆಗಿರುತ್ತದೆ.
ಇನ್ನೂ ಈ ರೈಲುಗಳು ಬರುತ್ತಿದ್ದಂತೆ ಎರಡು ಮಾರ್ಗಗಳ ಏಕೀಕರಣ, ಕಾರ್ಯಾಚರಣೆ ಮತ್ತು ಡೈರೆಕ್ಟ್ ಟು ಗೋ (ಡಿಟಿಜಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಯೊಂದಿಗೆ ಹೊಂದಾಣಿಕೆಗೆ ಸಂಬಂಧಿಸಿದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ಐಎಸ್ಎ) ವರದಿ ಸಲ್ಲಿಸಬೇಕು. ಆ ಮೂಲಕ ಬಿಎಂಆರ್ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್ಎಸ್) ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಎಂದು ರೈಲ್ವೆ ಮಂಡಳಿಯು ತಿಳಿಸಿದೆ.
37 ಪರೀಕ್ಷೆಗಳ ಬಳಿಕ ರೈಲು ಸಂಚಾರ
ಬೆಂಗಳೂರಿನ ಮೆಟ್ರೋ ಮಾರ್ಗಗಳಿಗೆ ಮೂಲ ಮಾದರಿ (ಪ್ರೊಟೋಟೈಪ್) ರೈಲು, ಡಿಟಿಜಿ ಸೇರಿ ಒಟ್ಟು ಮೂರು ಮೆಟ್ರೋ ರೈಲುಗಳು ಬಂದಿವೆ. ಅವುಗಳನ್ನು ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಸೇವೆಗೆ ಅಣಿ ಮಾಡುವ ಮೊದಲು ವಿವಿಧ ಸುಮಾರು 37 ಶಾಸನಬದ್ಧ ಪರೀಕ್ಷೆಗಳು ಹಾಗೂ ತಪಾಸಣೆಗೆ ಒಳಪಟ್ಟು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಈಗಾಗಲೇ ಸ್ವೀಕರಿಸಲಾದ ಮೂರು ರೈಲಗಳಿಗೆ ಬ್ರೇಕಿಂಗ್, ವೇಗ ಮತ್ತು ವ್ಯವಸ್ಥೆಯ ಏಕೀಕರಣ ಪರೀಕ್ಷೆಗಳ ಶಾಸನಬದ್ಧ ಪ್ರಯೋಗ ನಡೆಸಲು ಬಿಎಂಆರ್ಸಿಎಲ್ ರೈಲ್ವೆ ಸಚಿವಾಲಯ ವ್ಯಾಪ್ತಿಗೆ ಬರುವ 'ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್ಡಿಎಸ್ಒ)' ಸಂಪರ್ಕಿಸಿದೆ. ಐಎಸ್ಎ ಪ್ರಮಾಣಪತ್ರವನ್ನು ಪಡೆದ ನಂತರ ಸಿಎಮ್ಆರ್ಎಸ್ ಅಂತಿಮ ಅನುಮೋದನೆ ನೀಡಲಿದೆ.
ಎರಡು ಮಾರ್ಗಗಳಿಗೆ 21 ರೈಲು ಪೂರೈಕೆ
ಬಿಎಂಆರ್ ಸಿಎಲ್ ಮಾಡಿಕೊಂಡ ಒಪ್ಪಂದದಂತೆ ಹೊಸ ಮೆಟ್ರೋಗಳನ್ನು ಚೀನಾದ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಕೋ ಕಂಪನಿ ಪೂರೈಸುತ್ತಿದೆ. ಇದು ಬಂಗಾಳ ಮೂಲದ ಟಿಟಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್ಎಸ್ಎಲ್) ಸಹಕಾರದಲ್ಲಿ ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗಕ್ಕಾಗಿ ಒಟ್ಟು 21 ರೈಲುಗಳನ್ನು ಪೂರೈಸಲಿದೆ. ಸದ್ಯ ಈ ಎರಡು ಮಾರ್ಗಗಳಲ್ಲಿ ಬರೋಬ್ಬರಿ 57 ರೈಲುಗಳು ನಿತ್ಯ ಸಂಚಾರ ಮಾಡುತ್ತಿವೆ. ಇನ್ನೂ 19.5 ಕಿಮೀ ಉದ್ದದ ಹಳದಿ ಮಾರ್ಗದಲ್ಲಿ 8 ಡ್ರೈವರ್ಲೆಸ್ ರೈಲುಗಳು ಸೇವೆ ನೀಡುತ್ತಿವೆ.
-
Namma Metro: ಹಳದಿ ಮಾರ್ಗಕ್ಕೆ ಶೀಘ್ರವೇ ಮತ್ತೆರಡು ಹೊಸ ಮೆಟ್ರೋ ಸೇರ್ಪಡೆ: 5 ನಿಮಿಷಕ್ಕೊಮ್ಮೆ ಸಂಚಾರ -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ -
High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ -
Amrit Bharat Express 3.0: ಹೊಸ ವಿನ್ಯಾಸ, ಎಸಿ ಕೋಚ್ ಸಹಿತ ಅಮೃತ್ ಭಾರತ್ ರೈಲು ಸೇವೆ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Railway Alert: ಚನ್ನಸಂದ್ರ ನಿಲ್ದಾಣದಲ್ಲಿ ಕಾಮಗಾರಿ, ವಿವಿಧ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ರದ್ದು -
First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ














Click it and Unblock the Notifications