Property Tax: ಮಂತ್ರಿಮಾಲ್ಗೆ ಕೊಂಚ ರಿಲೀಫ್: ಬಾಕಿ ₹30 ಕೋಟಿ ತೆರಿಗೆಯಲ್ಲಿ ಕಟ್ಟಿದ್ದೆಷ್ಟು?
Bengaluru Property Tax: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಒಟ್ಟು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿ ತಲುಪಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಯಾವೆಲ್ಲ ವಾಣಿಜ್ಯ ಕಟ್ಟಡಗಳು ಇವೆ, ಅವುಗಳ ವಿರುದ್ಧ ಜಿಬಿಎ ಕಠಿಣ ಆದೇಶ ಹೊರಡಿಸಿದೆ. ತೆರಿಗೆ ಪಾವತಿಸದಿದ್ದರೆ ಮುಲಾಜಿಲ್ಲದೇ ಕಟ್ಟಡ ಸೀಲ್ ಮಾಡುವುದಾಗಿ ಎಚ್ಚರಿಸಿತ್ತು. ನಗರದ ಪ್ರತಿಷ್ಠಿತ ಮಂತ್ರಿಮಾಲ್ ಗೂ ಬೀಗ ಜಡಿಯಲಾಗಿತ್ತು. ಇಂದು ಶುಕ್ರವಾರ ಬಾಕಿ ತೆರಿಗೆಯಲ್ಲಿ ಒಂದಷ್ಟು ಹಣ ಕಟ್ಟಿದ ಮಾಲ್ಗೆ ಕೊಂಚ ರಿಲೀಫ್ ಸಿಕ್ಕಿದೆ.
ರಾಜಧಾನಿಯ ಪ್ರಮುಖ ಶಾಪಿಂಗ್ ಮಾಲ್ಗಳಲ್ಲಿ ಒಂದಾಗಿರುವ ಮಂತ್ರಿಮಾಲ್ ಪ್ರತಿ ಬಾರಿಯು ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಮತ್ತು ಪಾಲಿಕೆ ಅಧಿಕಾರಿಗಳು ಬಂದ ಮಾಲ್ಗೆ ಬೀಗ ಜಡಿದ ವಿಚಾರವಾಗಿ ಸುದ್ದಿಯಾಗುತ್ತಿತ್ತು. ಕಳೆದ ವಾರ ಸಹಿತ ಒಟ್ಟು 30,81,45,600 ರೂಪಾಯಿ ಬಾಕಿ ಉಳಿಸಿಕೊಂಡಿದ್ದ ಮಂತ್ರಿಮಾಲ್ಗೆ ಅಧಿಕಾರಿಗಳು ಬೀಗ ಜಡಿದಿದ್ದರು. ನೋಟಿಸ್ಗೂ ಸ್ಪಂದಿಸದ ಕಾರಣ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

05 ಕೋಟಿ ರೂಪಾಯಿ ತೆರಿಗೆ ಪಾವತಿ
ಎಚ್ಚೆತ್ತ ಮಂತ್ರಿಮಾಲ್ ಆಡಳಿತ ಮುಖ್ಯಸ್ಥರು ಹಾಗೂ ಮಾಲೀಕರು ಇಂದು ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಬಾಕಿ ಆಸ್ತಿ ತೆರಿಗೆ ಪೈಕಿ 5.00 ಕೋಟಿ ರೂಪಾಯಿ ಪಾವತಿಸಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದ ಚಿಕ್ಕಪೇಟೆಯಲ್ಲಿ ಅವರು ಆಸ್ತಿ ತೆರಿಗೆ ಪಾವತಿ, ಬಾಕಿ ಉಳಿಸಿಕೊಂಡವರ ಕುರಿತು ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಈ ವೇಳೆ ಉಚ್ಚ ನ್ಯಾಯಾಲಯದ ಆದೇಶದಂತೆ ಮಂತ್ರಿ ಮಾಲ್ ನಿಂದ ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಕಟ್ಟಬೇಕಾಗಿರುವ ಬಾಕಿ ಮೊತ್ತದಲ್ಲಿ ಇಂದು ರೂ. 5.00 ಕೋಟಿಗಳ ಚೆಕ್ ಅನ್ನು ಮಂತ್ರಿಮಾಲ್ ನಿಂದ ಆಯುಕ್ತರಿಗೆ ನೀಡಲಾಯಿತು.
ಪರಿಶೀಲನೆ ಕಾರ್ಯದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರುಗಳಾದ ಹೇಮಂತ್ ಶರಣ್, ರಂಗನಾಥ್, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್, ಸಹ ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ 100 ಕ್ಕೂ ಅಧಿಕ ಸಿಬ್ಬಂದಿ ಉಪಸ್ಥಿತರಿದ್ದರು. ಬಾಕಿ ತೆರಿಗೆಯನ್ನ ಮುಂದಿನ ದಿನಗಳಲ್ಲಿ ಕಟ್ಟುವುದಾಗಿ ಮಂತ್ರಿಮಾಲ್ ತಿಳಿಸಿದೆ ಎನ್ನಲಾಗಿದೆ.
ಬೃಹತ್ ಆಸ್ತಿ ತೆರಿಗೆ ಮೊತ್ತದಲ್ಲಿ ಅಲ್ಪ ತೆರಿಗೆ ಕಟ್ಟುವ ಮೂಲಕ ತಾತ್ಕಲಿಕವಾಗಿ ಮಂತ್ರಿಮಾಲ್ ರಿಲೀಫ್ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಾಕಿ ಉಳಿಸಿಕೊಂಡರೆ ಮತ್ತೆ ಜಿಬಿಎ ನೋಟಿಸ್ ನೀಡಲಿದೆ. ಸ್ಪಂದಿಸದಿದ್ದರೆ ಮತ್ತೆ ಮಾಲ್ ಅನ್ನು ಸೀಲ್ ಮಾಡಲಿದೆ. ಏಕೆಂದರೆ ಇಂತಹ ವರ್ತನೆ ತೋರಿದ್ದರಿಂದಲೇ ಕೆಲವು ಬಾರಿ ಮಂತ್ರಿಮಾಲ್ಗೆ ಅಧಿಕಾರಿಗಳು ಈ ಹಿಂದೆ ಬೀಗ ಹಾಕಿದ್ದರು.
6700 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಜಿಬಿಎ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ 6700 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸುವ ಗುರಿ ನೀಡಲಾಗಿದೆ. ಆದರೆ ಈ ಬಾರಿ ಕೇಲವ 3533 ಕೋಟಿ ರೂಪಾಯಿ ಸಂಗ್ರಹ ಮಾತ್ರ ಆಗಿದೆ. ಹೀಗಾಗಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳ ವಿರುದ್ಧ ಜಿಬಿಎ ತೆರಿಗೆ ಸಂಗ್ರಹದ ಸಮರ ಸಾರಿದೆ. ತೆರಿಗೆ ಸಂಗ್ರಹದ ಗುರಿ ತಲುಪುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ಇತ್ತೀಚೆಗೆ ಆದೇಶಿಸಲಾಗಿತ್ತು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications