ಬೆಂಗಳೂರು ವಾಯ ಗುಣಮಟ್ಟ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ CSE:ಅಧ್ಯಯನದ ವರದಿಯಲ್ಲಿ ಏನಿದೆ?
ಬೆಂಗಳೂರು, ಮಾರ್ಚ್ 10: ದೆಹಲಿ ಹೊರತಾಗಿ ಬೆಂಗಳೂರು, ಕೋಲ್ಕತ್ತಾ-ಹೌರಾ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ಒಳಗೊಂಡಂತೆ ಭಾರತದ ಐದು ಪ್ರಮುಖ ನಗರಗಳಲ್ಲಿನ ಚಳಿಗಾಲದ ವಾಯು ಮಾಲಿನ್ಯದ ಗುಣಮಟ್ಟವನ್ನು ವಿಶ್ಲೇಷಿಸಿದ ವರದಿಯೊಂದನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಅಧ್ಯಯನದ ವರದಿ ಬಿಡುಗಡೆ ಮಾಡಿದೆ.
ಮಂಗಳವಾರ ಪ್ರಕಟವಾದ CSE ಸಂಶೋಧನಾ ವರದಿಯಲ್ಲಿ, ಚಳಿಗಾಲ ಆರಂಭಿಕ ತಿಂಗಳಾದ ನವೆಂಬರ್ 2022ರಲ್ಲಿ ಬೆಂಗಳೂರಿಗೆ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟದ ತಿಂಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯ ನಂತರ ಕೋಲ್ಕತ್ತಾ ಮತ್ತು ಮುಂಬೈ ವಾಯು ಗುಣಮಟ್ಟ ಹೆಚ್ಚು ಕಲುಷಿತಗೊಂಡಿವೆ. ಆದರೆ ಬೆಂಗಳೂರು ಮತ್ತು ಚೆನ್ನೈನ ಗಾಳಿ ಮಟ್ಟ PM2.5 (Prticulate Matter) ಮಟ್ಟವು ವೇಗವಾಗಿ ಹದಗೆಟ್ಟಿದೆ. ಈ ಮಧ್ಯೆ ಬೆಂಗಳೂರು ಮತ್ತು ಹೈದರಾಬಾದ್ಗಳು ಕಳೆದ ನಾಲ್ಕು ವರ್ಷಗಳಲ್ಲಿ ಈ ಚಳಿಗಾಲದಲ್ಲಿ ಅತಿ ಹೆಚ್ಚು ಮಾಲಿನ್ಯವನ್ನು ಅನುಭವಿಸಿವೆ ಎಂದು ಅಧ್ಯಯನಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ದೈನಂದಿನ ಜೀವನದ ಮೇಲೆ ಪರಿಣಾಮ ಭೀರುವಷ್ಟು ಹದಗಗೆಟ್ಟಿತ್ತು. ಕೊಲ್ಕತ್ತಾ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಇತರ ಮೆಗಾ ಸಿಟಿಗಳಲ್ಲಿ ಚಳಿಗಾಲದಲ್ಲೇ ವಾಯು ಮಾಲಿನ್ಯ ಏರಿಕೆ ಆಗಿರುವುದು ಕಂಡು ಬಂದಿದೆ ಎಂದು ಕೇಂದ್ರದ ಸಂಶೋಧಕರಾದ ಅನುಮಿತಾ ರಾಯಚೌಧರಿ ಹೇಳಿದರು.
ವಾಯು ಗುಣಮಟ್ಟ: ನಿಯಂತ್ರಣಕ್ಕೆ ಕ್ರಮ ಅಗತ್ಯ
ವಾಹನಗಳು, ಕೈಗಾರಿಕೆಗಳು, ತ್ಯಾಜ್ಯ, ನಿರ್ಮಾಣ ಮತ್ತು ಮನೆಗಳಲ್ಲಿ ಘನ ಇಂಧನ ಬಳಕೆಯಿಂದ ವಾಯು ಗುಣಮಟ್ಟ ಹಾಳಾಗುತ್ತಿದೆ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ.
ಬೆಂಗಳೂರು ಮತ್ತು ಚೆನ್ನೈ 44 µg/m³ ಮತ್ತು 42 µg/m³ ನ PM2.5 ಮಟ್ಟ ಹೊಂದಿದ್ದವು. ಇದು 24-ಗಂಟೆಗಳ ಒಂದು ದಿನದಲ್ಲಿ ನೋಡುವುದಾದರೆ ಅಷ್ಟೋಂದು ಹಾನಿಕಾರಕವಲ್ಲ ಎಂದು ಸಂಶೋಧಕರ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೇ ಎರಡು ನಗರಗಳಲ್ಲಿ ಚಳಿಗಾಲದಲ್ಲಿ ಗಾಳಿಯು ಈ ಹಿಂದಿನ ಮೂರು ವರ್ಷಗಳ ಚಳಿಗಾಲದ ಸಾಮಾಜ್ಯಕ್ಕಿಂತ ಸರಾಸರಿಗಿಂತ ಶೇ. 15ರಷ್ಟು ಹೆಚ್ಚು ಕಲುಷಿತಗೊಂಡಿದೆ ಎಂದರು.

ಸಿಲಿಕಾನ್ ಸಿಟಿ ಬೆಂಗಳೂರಿನ ವಾಯು ಗುಣಮಟ್ಟ ಕಳೆದ ನವೆಂಬರ್ ನಲ್ಲಿ ಕಳಪೆಯಾಗಿತ್ತು. ಸರಾಸರಿಗಿಂತ 68 ಪ್ರತಿಶತದಷ್ಟು ಹದಗೆಟ್ಟಿದೆ. ಆಗ ನಿತ್ಯ PM2.5 ಮಟ್ಟವು ಜನವರಿ 27 ರಂದು 152 µg/m³ ಅನ್ನು ಮುಟ್ಟಿತು. ಇದು ಗರಿಷ್ಠ 24-ಗಂಟೆಗಳ PM2.5 ಸರಾಸರಿಯಾಗಿದೆ. 2019 ರಿಂದ ನಗರ. ಆದಾಗ್ಯೂ, ಕರ್ನಾಟಕ ರಾಜಧಾನಿಯು ಮೆಗಾಸಿಟಿಗಳಲ್ಲಿ ಗರಿಷ್ಠ ಸಂಖ್ಯೆಯ "ಉತ್ತಮ" AQI ದಿನಗಳನ್ನು ಹೊಂದಿದೆ ಎಂದು ಸಹ ವರದಿ ಹೇಳಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications