ಬೆಂಗಳೂರು ವಾಯ ಗುಣಮಟ್ಟ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ CSE:ಅಧ್ಯಯನದ ವರದಿಯಲ್ಲಿ ಏನಿದೆ?
ಬೆಂಗಳೂರು, ಮಾರ್ಚ್ 10: ದೆಹಲಿ ಹೊರತಾಗಿ ಬೆಂಗಳೂರು, ಕೋಲ್ಕತ್ತಾ-ಹೌರಾ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ಒಳಗೊಂಡಂತೆ ಭಾರತದ ಐದು ಪ್ರಮುಖ ನಗರಗಳಲ್ಲಿನ ಚಳಿಗಾಲದ ವಾಯು ಮಾಲಿನ್ಯದ ಗುಣಮಟ್ಟವನ್ನು ವಿಶ್ಲೇಷಿಸಿದ ವರದಿಯೊಂದನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಅಧ್ಯಯನದ ವರದಿ ಬಿಡುಗಡೆ ಮಾಡಿದೆ.
ಮಂಗಳವಾರ ಪ್ರಕಟವಾದ CSE ಸಂಶೋಧನಾ ವರದಿಯಲ್ಲಿ, ಚಳಿಗಾಲ ಆರಂಭಿಕ ತಿಂಗಳಾದ ನವೆಂಬರ್ 2022ರಲ್ಲಿ ಬೆಂಗಳೂರಿಗೆ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟದ ತಿಂಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯ ನಂತರ ಕೋಲ್ಕತ್ತಾ ಮತ್ತು ಮುಂಬೈ ವಾಯು ಗುಣಮಟ್ಟ ಹೆಚ್ಚು ಕಲುಷಿತಗೊಂಡಿವೆ. ಆದರೆ ಬೆಂಗಳೂರು ಮತ್ತು ಚೆನ್ನೈನ ಗಾಳಿ ಮಟ್ಟ PM2.5 (Prticulate Matter) ಮಟ್ಟವು ವೇಗವಾಗಿ ಹದಗೆಟ್ಟಿದೆ. ಈ ಮಧ್ಯೆ ಬೆಂಗಳೂರು ಮತ್ತು ಹೈದರಾಬಾದ್ಗಳು ಕಳೆದ ನಾಲ್ಕು ವರ್ಷಗಳಲ್ಲಿ ಈ ಚಳಿಗಾಲದಲ್ಲಿ ಅತಿ ಹೆಚ್ಚು ಮಾಲಿನ್ಯವನ್ನು ಅನುಭವಿಸಿವೆ ಎಂದು ಅಧ್ಯಯನಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ದೈನಂದಿನ ಜೀವನದ ಮೇಲೆ ಪರಿಣಾಮ ಭೀರುವಷ್ಟು ಹದಗಗೆಟ್ಟಿತ್ತು. ಕೊಲ್ಕತ್ತಾ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಇತರ ಮೆಗಾ ಸಿಟಿಗಳಲ್ಲಿ ಚಳಿಗಾಲದಲ್ಲೇ ವಾಯು ಮಾಲಿನ್ಯ ಏರಿಕೆ ಆಗಿರುವುದು ಕಂಡು ಬಂದಿದೆ ಎಂದು ಕೇಂದ್ರದ ಸಂಶೋಧಕರಾದ ಅನುಮಿತಾ ರಾಯಚೌಧರಿ ಹೇಳಿದರು.
ವಾಯು ಗುಣಮಟ್ಟ: ನಿಯಂತ್ರಣಕ್ಕೆ ಕ್ರಮ ಅಗತ್ಯ
ವಾಹನಗಳು, ಕೈಗಾರಿಕೆಗಳು, ತ್ಯಾಜ್ಯ, ನಿರ್ಮಾಣ ಮತ್ತು ಮನೆಗಳಲ್ಲಿ ಘನ ಇಂಧನ ಬಳಕೆಯಿಂದ ವಾಯು ಗುಣಮಟ್ಟ ಹಾಳಾಗುತ್ತಿದೆ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ.
ಬೆಂಗಳೂರು ಮತ್ತು ಚೆನ್ನೈ 44 µg/m³ ಮತ್ತು 42 µg/m³ ನ PM2.5 ಮಟ್ಟ ಹೊಂದಿದ್ದವು. ಇದು 24-ಗಂಟೆಗಳ ಒಂದು ದಿನದಲ್ಲಿ ನೋಡುವುದಾದರೆ ಅಷ್ಟೋಂದು ಹಾನಿಕಾರಕವಲ್ಲ ಎಂದು ಸಂಶೋಧಕರ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೇ ಎರಡು ನಗರಗಳಲ್ಲಿ ಚಳಿಗಾಲದಲ್ಲಿ ಗಾಳಿಯು ಈ ಹಿಂದಿನ ಮೂರು ವರ್ಷಗಳ ಚಳಿಗಾಲದ ಸಾಮಾಜ್ಯಕ್ಕಿಂತ ಸರಾಸರಿಗಿಂತ ಶೇ. 15ರಷ್ಟು ಹೆಚ್ಚು ಕಲುಷಿತಗೊಂಡಿದೆ ಎಂದರು.

ಸಿಲಿಕಾನ್ ಸಿಟಿ ಬೆಂಗಳೂರಿನ ವಾಯು ಗುಣಮಟ್ಟ ಕಳೆದ ನವೆಂಬರ್ ನಲ್ಲಿ ಕಳಪೆಯಾಗಿತ್ತು. ಸರಾಸರಿಗಿಂತ 68 ಪ್ರತಿಶತದಷ್ಟು ಹದಗೆಟ್ಟಿದೆ. ಆಗ ನಿತ್ಯ PM2.5 ಮಟ್ಟವು ಜನವರಿ 27 ರಂದು 152 µg/m³ ಅನ್ನು ಮುಟ್ಟಿತು. ಇದು ಗರಿಷ್ಠ 24-ಗಂಟೆಗಳ PM2.5 ಸರಾಸರಿಯಾಗಿದೆ. 2019 ರಿಂದ ನಗರ. ಆದಾಗ್ಯೂ, ಕರ್ನಾಟಕ ರಾಜಧಾನಿಯು ಮೆಗಾಸಿಟಿಗಳಲ್ಲಿ ಗರಿಷ್ಠ ಸಂಖ್ಯೆಯ "ಉತ್ತಮ" AQI ದಿನಗಳನ್ನು ಹೊಂದಿದೆ ಎಂದು ಸಹ ವರದಿ ಹೇಳಿದೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications