ಬೆಂಗಳೂರು:35 ವರ್ಷಗಳಲ್ಲಿ 200 ಬಾರಿ ರಕ್ತದಾನ ಮಾಡಿದ್ದಾರೆ 56 ವರ್ಷದ ಎಂಜಿನಿಯರ್
ಬೆಂಗಳೂರು,ಫೆಬ್ರವರಿ 25: 35 ವರ್ಷಗಳಿಂದ ವರ್ಷಕ್ಕೆ ಒಂದು ಬಾರಿ ಅಂದರೂ ಬರೋಬ್ಬರಿ 35 ಬಾರಿ ರಕ್ತದಾನ ಮಾಡಬಹುದು.
ಆದರೆ ಬೆಂಗಳೂರಿನ ಈ ಎಂಜಿನಿಯರ್ 35 ವರ್ಷಗಳಿಂದ 200 ಬಾರಿ ರಕ್ತದಾನ ಮಾಡಿದ್ದಾರೆ. ಹೌದು 56 ವರ್ಷದ ಎಂಜಿನಿಯರ್ ಚಂದ್ರಕಾಂತ ಕೆವಿ ಎಂಬುವವರು ಇಲ್ಲಿಯವರೆಗೆ 200 ಬಾರಿ ರಕ್ತದಾನ ಮಾಡಿದ್ದಾರಂತೆ..
ರಕ್ಷಣಾ ಸಚಿವಾಲಯದ ಕ್ವಾಲಿಟಿ ಆಫ್ ಅಸ್ಯುರೆನ್ಸ್ ರಡಾರ್ನ ಕಂಟ್ರೋಲರೇಟ್ ಆಗಿ ಕೆಲಸ ಮಾಡುತ್ತಿದ್ದಾರೆ.ಅವರು ರಕ್ತದ ಮಾದರಿ 0+veಆಗಿದೆ.ಸರ್ಕಾರದ ನಿಯಮ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ನೀಡಬಹುದು. ಆದರೆ ನಾನು ಒಂದು ವಾರಕ್ಕೆ ಎರಡು ಬಾರಿ ರಕ್ತ ನೀಡುತ್ತಿದ್ದೆ, ಯಾವ್ಯಾಗ ಅವಶ್ಯಕತೆ ಇರುತ್ತದೋ ಅಂದು ರಕ್ತ ನೀಡುತ್ತಿದ್ದೆ.ಕಳೆದ 10 ವರ್ಷಗಳಿಂದ ಕನಿಷ್ಠವೆಂದರೂ 100 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಚಂದ್ರಕಾಂತ್ ತಿಳಿಸಿದ್ದಾರೆ.

ಚಂದ್ರಕಾಂತ್ ಅವರುಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿದ್ದಾಗ, ತಮಗೆ 21 ವರ್ಷವಿದ್ದಾಗಿನಿಂದ ರಕ್ತದಾನ ಮಾಡಲು ಶುರು ಮಾಡಿದರು.
1986 ರಲ್ಲಿ ಎನ್ಸಿಸಿ ರಕ್ತದಾನ ಶಿಬಿರ ಆಯೋಜಿಸಿತ್ತು. ಅಂದು ಮೊದಲ ಬಾರಿಗೆ ರಕ್ತ ನೀಡಿದ್ದೆ, ಬಳಿಕ ಯಾವಾಗ ನನ್ನ ರಕ್ತದ ಅಗತ್ಯವಿತ್ತೋ ಆಗೆಲ್ಲಾ ರಕ್ತ ನೀಡಿದ್ದೇನೆ ಎಂದರು.
ಅವರ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಆಸ್ಪತ್ರೆಯಲ್ಲಿ ಜನರು ಕಣ್ಣೀರು ಹಾಕುತ್ತಿರುವುದನ್ನು ನೋಡಿದ್ದೇನೆ, ಇದರಿಂದ ಅಂತಹವರ ಜೀವವನ್ನು ಉಳಿಸಲೇ ಬೇಕು ಎಂದು ಪಣತೊಟ್ಟಿದ್ದೆ, ರಕ್ತದಾನದ ಮೇಲೆ ಸಮಾಜದಲ್ಲಿ ಅಪನಂಬಿಕೆ ಇದೆ ಅದನ್ನು ದೂರ ಮಾಡಬೇಕಿದೆ.
ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ,ಹೊಸ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ, ಹೇಗೆ 18 ವರ್ಷಕ್ಕೆ ಚಾಲನಾ ಪರವಾನಗಿ ದೊರೆಯುತ್ತದೆಯೋ,ಮತದಾರರ ಗುರುತಿನ ಚೀಟಿ ಸಿಗುತ್ತದೆಯೋ ಹಾಗೆಯೇ ರಕ್ತದಾನ ಮಾಡಲು ಶುರು ಮಾಡಿ, ಇದರಿಂದ ಸಾಕಷ್ಟು ಮಂದಿ ಜೀವವನ್ನು ಉಳಿಸಬಹುದು ಎಂದು ಯುವಜನತೆಗೆ ಕರೆ ನೀಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications