Bengaluru Bmtc: ಬೆಂಗಳೂರಿನಲ್ಲಿ ಸಾರಿಗೆ ಬಸ್ ಅಪಘಾತಕ್ಕೆ ಇದೇ ಮುಖ್ಯ ಕಾರಣ: ಬಿಜೆಪಿ vs ಕಾಂಗ್ರೆಸ್ ಟ್ವೀಟ್ ವಾರ್
Bengaluru Bmtc Transport: ಕರ್ನಾಟಕದ ಸಾರಿಗೆ ಬಸ್ ಅಪಘಾತಗಳು ಬಿಜೆಪಿ vs ಕಾಂಗ್ರೆಸ್ ಯಾವ ಅವಧಿಯಲ್ಲಿ ಹೆಚ್ಚಾಗಿದೆ ಎನ್ನುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಲಂಗು ಲಗಾಮು ಇಲ್ಲದೇ ಇರುವುದು ಬಿಜೆಪಿ ಕರ್ನಾಟಕದ ಸುಳ್ಳು ಪ್ರಚಾರಗಳಿಗೆ. ತಮ್ಮ ಅವಧಿಯಲ್ಲಿನ ದುರಾಡಳಿತದಿಂದ ಎಷ್ಟು ಅಪಘಾತವಾಗಿತ್ತು ಎಂಬುದನ್ನು ಮರೆತು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪಘಾತಗಳ ಸಂಖ್ಯೆ ನೋಡಿದರೆ ವಾಸ್ತವ ಅನಾವರಣಗೊಳ್ಳುತ್ತದೆ.
ಸಾರಿಗೆ ಬಸ್ ಅಪಘಾತ ಪ್ರಕರಣಗಳು
2020 - 1352
2021 - 1516
2022 - 1598

ಖಾಸಗಿ ಬಸ್ ಅಪಘಾತ ಪ್ರಕರಣಗಳು
2020- 785
2021- 849
2022- 863
ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಸಾವಿರಾರು ಅಪಘಾತವಾಗಿದ್ದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದವರು, ಈಗ ಅಪಘಾತಗಳ ಬಗ್ಗೆ ಮಾತನಾಡುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. 5 ವರ್ಷದ ಆಡಳಿತದ ಅವಧಿಯಲ್ಲಿ ಹೊಸ ಬಸ್ಸುಗಳನ್ನೇ ಸೇರ್ಪಡೆ ಮಾಡದೇ ಗುಜರಿ ಡಕೋಟಾ ಬಸ್ಸುಗಳನ್ನು ದಯಪಾಲಿಸಿ ಹೋಗಿರುವ ಬಿಜೆಪಿಯ ಉಡುಗೊರೆಯ ಫಲವಿದು. ತಮ್ಮ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಇಲ್ಲದೆ, ಹೊಸ ನೇಮಕಾತಿಯಾಗದೇ, ನೌಕರರಿಗೆ ಸರಿಯಾಗಿ ವೇತನ ಪಾವತಿ ಮಾಡಲಾಗದ ಕರಾಳ ದಿನಗಳನ್ನು ಬಿಜೆಪಿಗರು ಮರೆತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾರಿಗೆ ಇಲಾಖೆಯ 67% ಬಸ್ಸುಗಳು ನಿಗದಿತ ವಯೋಮಾನ ಪೂರೈಸಿ, ರದ್ಧತಿಯ ಅಂಚಿನಲ್ಲಿದ್ದವು. ಆದರೂ ಕಾರ್ಯಾಚರಣೆ ಮಾಡುತ್ತಿದ್ದವು. ನಮ್ಮ ಸರ್ಕಾರ ಕಾರ್ಯದಕ್ಷತೆಯಿಂದ ಬಸ್ಸುಗಳ ಪುನಶ್ಚೇತನ ಕಾರ್ಯ ಮಾಡಲಾಯಿತು. ಇದರಿಂದ ಬಸ್ಸುಗಳ ಕಾರ್ಯಾಚರಣೆಗೆ ಸಹಕಾರಿ ಆಯಿತು. ನಮ್ಮ 2 ವರ್ಷ 8 ತಿಂಗಳ ಅವಧಿಯಲ್ಲಿ 7800 ಹೊಸ ಬಸ್ಸುಗಳನ್ನು ಸೇರ್ಪಡೆಯಾಗಿದ್ದು, 10,000 ನೇಮಕಾತಿ, 2400 ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ ಕಾರ್ಯ ಮಾಡಿದ್ದೇವೆ.
ಬೆಂಗಳೂರಲ್ಲಿ ಸಾರಿಗೆ ಬಸ್ ಅಪಘಾತಕ್ಕೆ ಮುಖ್ಯ ಕಾರಣ
ಇನ್ನು ಅಪಘಾತದ ವಿಚಾರಕ್ಕೆ ಬಂದರೆ, ಬೆಂಗಳೂರಿನಲ್ಲಿಯೇ ಅಪಘಾತ ಹೆಚ್ಚಾಗಲು ಕಾರಣ, ಕೇಂದ್ರ ಬಿಜೆಪಿ ಸರ್ಕಾರವು ಖಾಸಗಿ ಕಂಪನಿಗಳಿಗೆ ಅನುದಾನ ನೀಡಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದು, ಖಾಸಗಿ ಚಾಲಕರನ್ನು ನಿಯೋಜಿಸಿರುವುದು. ನಮ್ಮ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದು ಎಲೆಕ್ಟ್ರಿಕ್ ಬಸ್ಸುಗಳ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಲು ಸಹ ಕೋರಿದೆ. ಅಧಿಕಾರವಿದ್ದಾಗ ಏನೂ ಸಾಧನೆ ಮಾಡದ ಬಿಜೆಪಿ, ಈಗ ಪ್ರತಿನಿತ್ಯ ಸುಳ್ಳು ಆರೋಪದ ಟ್ಟೀಟ್ ಮಾಡಿ ಏನೂ ಸಾಧಿಸಲು ಹೊರಟಿದೆ? ನಿಮ್ಮ ಈ ನಾಟಕ ನೋಡುತ್ತಿದ್ದರೆ ಕೈಲಾಗದವನು ಮೈ ಪರಚಿಕೊಂಡಂತೆ ಎಂಬ ಗಾದೆ ನೆನಪಾಗುತ್ತಿದೆ.
Bengaluru Bmtc ಬಿಜೆಪಿ ಟ್ವೀಟ್
ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಬಸ್ಸಿನಲ್ಲಿ ಸಾಗಬೇಕಾದ ದುಸ್ಥಿತಿಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕರುಣಿಸಿದೆ. ಕಳೆದ ಮೂರು ವರ್ಷಗಳಲ್ಲಿ ಖಾಸಗಿ ಬಸ್ಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಗಳೇ ಹೆಚ್ಚು ಅಪಘಾತವಾಗಿವೆ ಎಂದು ವರದಿಯಾಗಿವೆ. ಬೆಂಗಳೂರು ನಗರದಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಅಪಘಾತ ಸಂಭವಿಸಿದ್ದು, 2025 ರಲ್ಲಿ 216 ಅಪಘಾತ ಆಗಿರುವ ಕುರಿತು ವರದಿಯಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರೇ, ನಿಮ್ಮ ಅವಧಿಯಲ್ಲಿ ನಿಮ್ಮ ಸಂಸ್ಥೆಯ ಬಸ್ಸುಗಳ ಹಣೆಬರಹವನ್ನು ನೀವೇ ಒಮ್ಮೆ ನೋಡಿ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿತ್ತು.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications